ಒಂದೇ ದಿನದಲ್ಲಿ ಬಿಜೆಪಿಗೆ ಸಿಗುತ್ತಿದೆ ಶಾಕ್ ಮೇಲೆ ಶಾಕ್| ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಸಿಎಂ ಪುತ್ರ| ಕಾಂಗ್ರೆಸ್ ಪಕ್ಷ ಸೇರಿದ ಉತ್ತರಾಖಂಡ್ ಮಾಜಿ ಸಿಎಂ ಬಿಸಿ ಖಂಡೂರಿ ಪುತ್ರ ಮನೀಷ್ ಖಂಡೂರಿ| ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷ ಸೇರಿದ ಮನೀಷ್ ಖಂಡೂರಿ|
ಡೆಹ್ರಾಡೂನ್(ಮಾ.16): ಉತ್ತರಾಖಂಡ್ ಮಾಜಿ ಸಿಎಂ ಹಾಗೂ ಪೌಡಿ ಕ್ಷೇತ್ರದ ಬಿಜೆಪಿ ಸಂಸದ ಭುವನ್ ಚಂದ್ರ ಖಂಡೂರಿ ಪುತ್ರ ಮನೀಷ್ ಖಂಡೂರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಡೆಹ್ರಾಡೂನ್ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮನೀಷ್ ಖಂಡೂರಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಮನೀಷ್ ಖಂಡೂರಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿ ಬರುತ್ತಿದ್ದವು. ಅದರಂತೆ ಮನೀಷ್ ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
Dehradun, Uttarakhand: Manish Khanduri, the son of former Uttarakhand CM and BJP leader Maj Gen (Retd) BC Khanduri, joins Congress party. pic.twitter.com/i6ysu6IWq9
— ANI (@ANI)ಇನ್ನು ವಿಶೇಷವೆಂದರೆ ಮನೀಷ್ ಖಂಡೂರಿ ಅವರನ್ನು ಅವರ ತಂದೆ ಪ್ರತಿನಿಧಿಸುತ್ತಿರುವ ಪೌಡಿ ಕ್ಷೇತ್ರದಿಂದಲೇ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ. ಇದು ಬಿಜೆಪಿಯನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.