
ಬಳ್ಳಾರಿ[ಮಾ.25]: ಸಾರ್ವತ್ರಿಕ ಚುನಾವಣೆಗೆ ಗಣಿ ಜಿಲ್ಲೆಯಲ್ಲಿ ಅಖಾಡ ಸಿದ್ಧವಾಗಿದ್ದು, ಉಪ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲವು ಪಡೆದಿದ್ದ ಕಾಂಗ್ರೆಸ್ನ ವಿ. ಎಸ್. ಉಗ್ರಪ್ಪ ಹಾಗೂ ಬಿಜೆಪಿಯಿಂದ ಅರಸಿಕೇರಿ ದೇವೇಂದ್ರಪ್ಪ ಅವರು ಚುನಾವಣೆಯ ಎದುರಾಳಿಗಳು.
ಈ ಹಿಂದೆ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಅರಸಿಕೇರಿ ದೇವೇಂದ್ರಪ್ಪ ಅವರು ಜಾರಕಿಹೊಳಿ ಸಹೋದರರ ಹತ್ತಿರದ ಸಂಬಂಧಿಯೂ ಹೌದು.
ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಂಘಟನೆ ಹೊಂದಿರುವ ಜಿಲ್ಲೆಯಲ್ಲಿ ಚುನಾವಣೆ ಕಣದ ಮೇಲೆ ತೀವ್ರ ಕುತೂಹಲ ಮೂಡಿಸಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...