ಕಾಯಕಲ್ಪ ಮೂಲಕ ಯುಪಿಯಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆ

By Suvarna NewsFirst Published Apr 25, 2022, 1:19 PM IST
Highlights

*ಕಾಯಕಲ್ಪ ಯೋಜನೆಯಡಿಯಲ್ಲಿ 7 ಸರ್ಕಾರಿ ಶಾಲೆಗಳನ್ನು ದತ್ತುಪಡೆದ ಕಾನ್ಪುರ ಕಮಿಷನರ್
*ಈ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ, ಗುಣಮಟ್ಟವನ್ನು ಉನ್ನತಿಕರಿಸಲಾಗುತ್ತಿದೆ
*ಉತ್ತರ ಪ್ರದೇಶದಲ್ಲಿ ಕಾಯಕಲ್ಪ ಯೋಜನೆ ನಿಧಾನವಾಗಿ ಯಶಸ್ವಿಯಾಗುವತ್ತ ಸಾಗುತ್ತಿದೆ.
 

ಜನಪ್ರತಿನಿಧಿಗಳು, ಸಿನಿ ತಾರೆಯರು, ಕ್ರೀಡಾಪಟುಗಳು ಗ್ರಾಮಗಳನ್ನು ದತ್ತು ಪಡೆಯುವುದು, ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ಮಾಡಿ ಹಿಂದಷ್ಟೆ ಕಮಿಷನರ್ ಪಡೆದ ಶಾಲೆ (School) ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ರೂಪಿಸುತ್ತಾರೆ. ಜನಪ್ರಿಯರು, ಉದ್ಯಮಿಗಳು, ತಾರೆಗಳು ತೋರುವ ಶ್ರದ್ಧೆಯನ್ನು ಸರ್ಕಾರ ಹಾಗೂ ಅಧಿಕಾರಿಗಳು ತೋರಿಸಿದ್ರೆ ಸರ್ಕಾರಿ ಶಾಲೆಗಳು ಪ್ರಗತಿ ಕಾಣುವುದರಲ್ಲಿ ಅನುಮಾನವೇ ಇಲ್ಲ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕಾನ್ಪುರ (Kanpur) ನಗರದ ಕಮಿಷನರ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮೂಲ ಸೌಕರ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಕಾಯಕಲ್ಪ್ (Kaykalpa)' ಯೋಜನೆಯಡಿ ಕಾನ್ಪುರ ವಿಭಾಗೀಯ ಆಯುಕ್ತರು ಏಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಕರ್ನಾಟಕದಲ್ಲೂ ಇದೇ ರೀತಿಯಲ್ಲಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವನ್ನ ಅನುಷ್ಠಾನ ಮಾಡಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಈ ಹುಡುಗನಿಗೆ ಸ್ಕಾಲರ್‌ಶಿಪ್‌ ಜತೆಗೆ 27 ವಿವಿ, ಕಾಲೇಜ್‌ಗಳಿಂದ ಆಫರ್!

Latest Videos

ಕಾನ್ಪುರ ನಗರ (Kanpur City)ದಲ್ಲಿ ಎರಡು ಮತ್ತು ಇಟಾವಾ, ಔರೈಯಾ, ಫರೂಕಾಬಾದ್, ಕನ್ನೌಜ್ ಮತ್ತು ಕಾನ್ಪುರ ದೇಹತ್‌ನಲ್ಲಿ ತಲಾ ಒಂದು ಶಾಲೆಯನ್ನು ದತ್ತು ಪಡೆದಿದ್ದಾರೆ. ಅವುಗಳನ್ನು ಮಾದರಿ ಶಾಳೆಗಳನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath ) ಅವರು ಸಾರ್ವಜನಿಕ ಪ್ರತಿನಿಧಿಗಳು, ಅಧಿಕಾರಿಗಳು, ಕೈಗಾರಿಕೆಗಳು ಮತ್ತು ವಿವಿಧ ವ್ಯಾಪಾರ ಸಂಸ್ಥೆಗಳು ಮುಂದೆ ಬಂದು ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಜಂಟಿ ಪ್ರಯತ್ನಗಳನ್ನು ಮಾಡಲು ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಸಂಘಟಿಸಲು ಆಹ್ವಾನಿಸಿದ್ದರು.

 ಐತಿಹಾಸಿಕ ಕಾನ್ಪುರದ ಕಾಂಪೋಸಿಟ್ ಕನ್ಯಾ ವಿದ್ಯಾಲಯ, ಸರ್ಸೌಲ್‌ನ ಕಾನ್ಪುರ ಔಟರ್‌ನ ಪ್ರಾಥಮಿಕ ಶಾಲೆ ಧಮ್ನಾ, ಸರ್ವನ್ ಖೇಡಾದಲ್ಲಿ ಕಾನ್ಪುರ ದೇಹತ್‌ನ ಸಂವಿಲಿಯನ್ ವಿದ್ಯಾಲಯ ಸಿಯೋಧ, ಬಸ್ರೆಹಾರ್‌ನ ಕೃಪಾಲ್‌ಪುರದ ಇಟಾವಾ ಅವರ ಸಂಯುಕ್ತ ವಿದ್ಯಾಲಯ,  ಭಾಗ್ಯನಗರದ ಗೌರಿ ಗಂಗಾ ಪ್ರಸಾದ್ ಪ್ರಾಥಮಿಕ ಶಾಲೆ, ಕಮಲಗಂಜ್ ಮತ್ತು ಫಗುವಾ ಕನೌಜ್ನ ಪ್ರಾಥಮಿಕ ಶಾಲೆಗಳನ್ನು ಕಮಿಷನರ್ ದತ್ತು ಪಡೆದಿದ್ದಾರೆ. ಎರಡು ದಿನಗಳ ಹಿಂದಷ್ಟೆಕಮಿಷನರ್ ರಾಜ್ ಶೇಖರ್ ಸಿಡಿಒ, ನಗರ ಆಯುಕ್ತ್, ಎಡಿ ಬೇಸಿಕ್ ಮತ್ತು ಬಿಎಸ್ಎ ಅವರೊಂದಿಗೆ ದತ್ತು ಪಡೆದ ಶಾಲೆಗಳಲ್ಲಿ ಒಂದಾದ ಪುರಾಣ ಕಾನ್ಪುರದ ಕಾಂಪೋಸಿಟ್ ಕನ್ಯಾ ವಿದ್ಯಾಲಯಕ್ಕೆ ಭೇಟಿ ನೀಡಿದ್ದರು.

ಆಯುಕ್ತರ ಕಚೇರಿಯ ಪ್ರಕಟಣೆಯ ಪ್ರಕಾರ, ಈ ಕಾನ್ಪುರದ ಕಾಂಪೋಸಿಟ್ ಕನ್ಯಾ ವಿದ್ಯಾಲಯ ಶಾಲೆಯು 1 ರಿಂದ 8 ನೇ ತರಗತಿಯವರೆಗೆ 175 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ಸಂಯೋಜಿತ ಶಾಲೆಯಾಗಿದೆ. ಇಲ್ಲಿಯವರೆಗೆ ಸುಮಾರು 100 ವಿದ್ಯಾರ್ಥಿಗಳು ನಿತ್ಯವೂ ಶಾಲೆಗಳಿಗೆ ಬರುತ್ತಾರೆ ಮತ್ತು ಒಂಬತ್ತು ಶಿಕ್ಷಕರು (ನಾಲ್ವರು ನಿಯಮಿತ ಮತ್ತು ಐದು ಶಿಕ್ಷಾ ಮಿತ್ರರು) ಇದ್ದಾರೆ. ಆಯುಕ್ತರು ಭೇಟಿ ನೀಡಿದ್ದ ವೇಳೆ ಇಬ್ಬರು ಶಿಕ್ಷಕರು ಬೆಳಿಗ್ಗೆ/ಸಂಜೆ ಸಹಿ ಮಾಡಿರುವುದು ಕಂಡುಬಂದಿದ್ದು, ಇದನ್ನು  ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Utkarsh Digital Classroom : ರಾಜಸ್ಥಾನದಲ್ಲಿ ಉತ್ಕರ್ಷ ಶಿಕ್ಷಾ ರಥ ಶುರು

ಮುಂದಿನ ಒಂದು ವಾರದಲ್ಲಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಮತ್ತು ಅವುಗಳನ್ನು ಅನುಸರಿಸಲು ಸೂಚಿಸಿದರು. ಕೆಲಸದ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ನವೀಕರಿಸುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಒಟ್ಟಿನಲ್ಲಿ ಕಾನ್ಪುರದ ಕಮಿಷನರ್ ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ವಾದುದು. ಇದೇ ಮಾದರಿಯನ್ನು ಎಲ್ಲ ರಾಜ್ಯಗಳು, ಜಿಲ್ಲೆಗಳು, ಪ್ರತೀ ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳೇ ಮುಂದೆ ನಿಂತು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಪಣ ತೊಟ್ಟರೆ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದರಲ್ಲಿ ಡೌಟೇ ಇಲ್ಲ. ಏನಂತೀರಾ?

click me!