Karnataka Textbook Revision: ಸರಕಾರದಿಂದ 2023-24ನೇ ಸಾಲಿನ ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

Published : Jul 01, 2023, 04:27 PM ISTUpdated : Jul 01, 2023, 04:32 PM IST
Karnataka Textbook Revision: ಸರಕಾರದಿಂದ 2023-24ನೇ ಸಾಲಿನ  ಹೊಸ ಪಠ್ಯಗಳ ಪಟ್ಟಿ ಬಿಡುಗಡೆ

ಸಾರಾಂಶ

2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ ಆಗಿದೆ. ಕೈಬಿಟ್ಟಿರೋ ಪಠ್ಯಗಳು, ಹೊಸ ಪಠ್ಯಗಳ ಬಗ್ಗೆ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ. 

ಬೆಂಗಳೂರು (ಜು.1): 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ ಆಗಿದೆ. ಹಳೇ ಪಠ್ಯಗಳನ್ನ ಕೈಬಿಟ್ಟು ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ. ಕೈಬಿಟ್ಟಿರೋ ಪಠ್ಯಗಳು, ಹೊಸ ಪಠ್ಯಗಳ ಬಗ್ಗೆ ಸರಕಾರ ಪಟ್ಟಿ ಬಿಡುಗಡೆ ಮಾಡಿದೆ. 

ಯಾವ್ಯಾವ ಪಠ್ಯ ಕೈಬಿಡಲಾಗಿದೆ?:
ಪ್ರಥಮ ಭಾಷೆ ಕನ್ನಡ 6 ನೇ ತರಗತಿಯಲ್ಲಿ ನಿರ್ಮಲಾ ಸೂರತ್ಕಲ್ ಬರೆದ  'ನಮ್ಮದೇನಿದೆ' ಪದ್ಯಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇದರ ಬದಲಾಗಿ 'ನೀವೋದ ಮರುದಿನ'-ಚನ್ನಣ್ಣ ವಾಲೇಕರ್ ಎಂಬ ಪದ್ಯವನ್ನು  ಸೇರ್ಪಡೆ ಮಾಡಲಾಗಿದೆ.

7 ನೇ ತರಗತಿಯಲ್ಲಿ 
1) ಪೂರಕ ಗದ್ಯ-ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ- ರಮಾನಂದಚಾರ್ಯ  ಅವರ ಗದ್ಯವನ್ನು ಪರಿಗಣಿಸಬಾರದು ಎಂದು ಸೂಚಿಸಲಾಗಿದೆ. ಅದರ ಬದಲಾಗಿ ಸಾವಿತ್ರ ಭಾಯಿಪುಲೆ-ಡಾ.ಹೆಚ್.ಎಸ್.ಅನುಪಮ ಅವರ ಗದ್ಯ ಸೇರ್ಪಡೆ ಮಾಡಲಾಗಿದೆ.

ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ

ಇನ್ನು 8 ನೇ ತರಗತಿಯಲ್ಲಿ
1) ಗದ್ಯ-ಭೂ ಕೈಲಾಸ-ಪಾರಂಪಲ್ಲಿ ನರಸಿಂಹ ಐತಾಳ ಇದನ್ನು ಪರಿಗಣಿಸಬಾರದು ಎಂದು ತಿಳಿಸಲಾಗಿದೆ. ಇದರ ಬದಲಾಗಿ ಮಗಳಿಗೊಂದು ಪತ್ರ-ಜವಹಾರ್ ಲಾಲ್ ನೆಹರೂ ಅವರ ಗದ್ಯ ಸೇರಿಸಲಾಗಿದೆ.

8ನೇ ತರಗತಿ:
ಸಾಲವನ್ನು ಗೆದ್ದವರು-ಜೆ.ಟಿ.ಗಟ್ಟಿ  ಅವರ ಪಾಠವನ್ನು ಪರಿಗಣಿಸಬಾರದು.  ಬದಲಾಗಿ ಬ್ಲಡ್ ಗ್ರೂಪ್ - ವಿಜಯಮಾಲಾ ರಂಗನಾಥ್ ಅವರ ಪಾಠವನ್ನು ಸೇರ್ಪಡೆ ಮಾಡಲಾಗಿದೆ.

10 ನೇ ತರಗತಿ
1) ನಿಜವಾದ ಆದರ್ಶ ಪುರುಷ ಯಾರಾಗಬೇಕು-ಕೇಶವ ಹೆಡ್ಗೆವಾರ್  ಅವರ ಗದ್ಯವನ್ನು ಪರಿಗಣಿಸಬಾರದು. ಬದಲಾಗಿ ಸುಕುಮಾರಸ್ವಾಮಿಯ ಕಥೆ (ಶಿವಕೋಟಾಚಾರ್ಯ)ಯನ್ನು ಸೇರ್ಪಡೆಗೊಳಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: 41.39% ಮಕ್ಕಳು ಪಾಸ್‌, ಬಾಲಕಿಯರು, ಹಳ್ಳಿ ವಿದ್ಯಾರ್ಥಿಗಳ

10ನೇ ತರಗತಿ
ಶ್ರೇಷ್ಠ ಭಾರತೀಯ ಚಿಂತನೆಗಳು-ಶತಾವಧಾನಿ ಡಾ.ಆರ್.ಗಣೇಶ್ ಇದನ್ನು ಪರಿಗಣಿಸಬಾರದು, ಬದಲಾಗಿ ಸಾರಾ ಅಬೂಬಕ್ಕರ್ ಅವರ ಯುದ್ಧ ಎನ್ನುವ ಪಾಠವನ್ನು ಸೇರ್ಪಡೆ ಮಾಡಲಾಗಿದೆ. 

10 ನೇ ತರಗತಿ
ತಾಯಿ ಭಾರತೀಯ ಅಮರಪುತ್ರರು-ಚಕ್ರವರ್ತಿ ಸೂಲಿಬೆಲೆ ಅವರ ಸಂಪೂರ್ಣ ಪಾಠ ಕೈಬಿಡಲಾಗಿದೆ. 

10 ನೇ ತರಗತಿ
ವೀರಲವ (ಲಕ್ಷ್ಮೀಶ)  ಪದ ತಿದ್ದುಪಡಿ ಮಾಡಲಾಗಿದೆ.

9ನೇ ತರಗತಿಯಲ್ಲಿ 
ಅಚ್ಚರಿಯ ಜೀವಿ ಇಂಬಳ-ಸತ್ಯನಾರಾಯಣ ಭಟ್ ಅವರ ಪಾಠವನ್ನು ಕೈ ಬಿಡಲಾಗಿದೆ. ಅದರ ಬದಲಾಗಿ ಉರುಸ್ ಗಳಲ್ಲಿ ಭಾವೈಕ್ಯತೆ-ದಸ್ತಗಿರ್ ಅಲಿಬೈ ಎಂಬ ಗದ್ಯ ಸೇರ್ಪಡೆ ಮಾಡಲಾಗಿದೆ.

ಸಮಾಜ ವಿಜ್ಞಾನ 6 ನೇ ತರಗತಿ
1) ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (371 ಎ ಸೇರ್ಪಡೆ)
ಕಲಬುರಗಿ ಪುಟ ಸಂಖ್ಯೆ 33 ವಿಶೇಷ ಸ್ಥಾನಮಾನ ನೀಡಿದೆ ಪದ ಸೇರ್ಪಡೆ

6 ನೇ ತರಗತಿ
ವೇದ ಕಾಲದ ಸಂಸ್ಕೃತಿ(ಅಧ್ಯಾಯವನ್ನ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕಕ್ಕೆ ಸೇರ್ಪಡೆ)

6ನೇ ತರಗತಿ ಭಾಗ-1
ಹೊಸ ಧರ್ಮಗಳ ಉದಯ (ಕೈಬಿಡಲಾಗಿದೆ)
ವೇದ ಕಾಲದ ಸಂಸ್ಕೃತಿ ಅಧ್ಯಾಯದ ಬಳಿಕ ಸೇರ್ಪಡೆ

6 ನೇ ತರಗತಿ ಪೌರನೀತಿ
ಮೂಲಭೂತ ಹಕ್ಕುಗಳು & ಕರ್ತವ್ಯಗಳು 
(ಕೈಬಿಡಲಾಗಿದೆ)
ಮಾನವ ಹಕ್ಕುಗಳು & ಕರ್ತವ್ಯ ಸೇರ್ಪಡೆ

7ನೇ ತರಗತಿ ಭಾಗ-1 ಇತಿಹಾಸ
ಜಗತ್ತಿನ ಪ್ರಮುಖ ಘಟನೆಗಳು (ರಿಲಿಜನ್ ಬದಲು ಧರ್ಮ ಸೇರ್ಪಡೆ)

7 ನೇ ತರಗತಿ ಇತಿಹಾಸ ಭಾಗ-1
ಮೈಸೂರು & ಇತರ ಸಂಸ್ಥಾನಗಳು (ಮೈಸೂರಿನ ಒಡೆಯರ್ ಸೇರ್ಪಡೆ)

7 ನೇ ತರಗತಿ ಭಾಗ-2 ಇತಿಹಾಸ
ಸಾಮಾಜಿಕ & ಧಾರ್ಮಿಕ ಸುಧಾರಣೆಗಳು (5 ರಲ್ಲಿ ಮಹಿಳಾ ಸುಧಾರಕರ ಸೇರ್ಪಡೆ)

7ನೇ ತರಗತಿ ಇತಿಹಾಸ ಭಾಗ-2
ಸ್ವಾತಂತ್ರ್ಯ ಸಂಗ್ರಾಮ (ಸೇರ್ಪಡೆ)
ಸ್ವಾತಂತ್ರ್ಯ ಸಂಗ್ರಾಮ( ಮಾಪಿಲಿ ದಂಗೆ ಅನುಬಂಧ 6 ರ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಸೇರ್ಪಡೆ)

10 ನೇ ತರಗತಿ ರಾಜ್ಯಶಾಸ್ತ್ರ ಭಾಗ-1
ಭಾರತಕ್ಕಿರುವ ಸವಾಲುಗಳು & ಪರಿಹಾರೋಪಾಯಗಳು (ಪದಗಳ ಸೇರ್ಪಡೆ)

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ