Kodagu: ಶಾಲೆಗಳ ವಿರುದ್ಧ ಆರ್ ಟಿಓಗೆ ದೂರು ನೀಡಿದ ಚಾಲಕರು ಮತ್ತು ಮಾಲೀಕರ ಸಂಘ

By Gowthami KFirst Published Nov 17, 2022, 8:58 PM IST
Highlights

ಖಾಸಗಿ ಮದುವೆ ಟ್ರಿಪ್ ಮತ್ತು ಪ್ರವಾಸಗಳಿಗೆ ಶಾಲಾ ಕ್ಯಾಬ್ ಗಳನ್ನು ಬಳಕೆ ಮಾಡಲಾಗುತ್ತಿದ್ದು ಇದರಿಂದ ಕಾರು ಚಾಲಕರು ಮತ್ತು ಮಾಲೀಕರಿಗೆ ತೀವ್ರ ಸಮಸ್ಯೆ ಆಗುತ್ತಿದೆ ಎಂದು ಕಾರು ಚಾಲಕರು ಮತ್ತು ಮಾಲೀಕರ ವಿರುದ್ಧ ಕರವೇ ನೇತೃತ್ವದಲ್ಲಿ ಆರ್ ಟಿಓ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ವರದಿ: ರವಿ. ಎಸ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ನ.17): ಖಾಸಗಿ ಮದುವೆ ಟ್ರಿಪ್ ಮತ್ತು ಪ್ರವಾಸಗಳಿಗೆ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು ಇದರಿಂದ ಕಾರು ಚಾಲಕರು ಮತ್ತು ಮಾಲೀಕರಿಗೆ ತೀವ್ರ ಸಮಸ್ಯೆ ಆಗುತ್ತಿದೆ ಎಂದು ಕಾರು ಚಾಲಕರು ಮತ್ತು ಮಾಲೀಕರ ವಿರುದ್ಧ ಕರವೇ ನೇತೃತ್ವದಲ್ಲಿ ಆರ್ ಟಿಓ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮ್ಯಾಕ್ಸಿ ಕ್ಯಾಬ್  ಮಾಲೀಕರು ಹಾಗೂ ಚಾಲಕರ ಸಂಘ ಮಡಿಕೇರಿ ಕೊಡಗು ಇವರ ನೇತೃತ್ವದಲ್ಲಿ ಗುರುವಾರ ನೂರಾರು ಕ್ಯಾಬ್ ಚಾಲಕರು ಮತ್ತು ಮಾಲೀಕರು ಪ್ರಾದೇಶಿಕ  ಸಾರಿಗೆ ಕಚೇರಿಯಲ್ಲಿ ಸಾರಿಗೆ ಇಲಾಖೆಯ   ಮೋಟಾರ್ ವಾಹನಗಳ ನಿರ್ದೇಶಕರಾದ  ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದರು. ಕೊಡಗು ಜಿಲ್ಲೆಯ  ಕೆಲವು  ಶಾಲಾ ಬಸ್ ಗಳು  ಮದುವೆ  ಹಾಗೂ ಪ್ರವಾಸೋದ್ಯಮಕ್ಕೆ  ಸಂಬಂಧಪಟ್ಟ ಇನ್ನಿತರ ಕಾರ್ಯಕ್ರಮಗಳಿಗೆ ಹೊರಗುತ್ತಿಗೆ  ಆಧಾರದಲ್ಲಿ ಬಾಡಿಗೆಗೆ ಹೋಗುತ್ತಿವೆ. ಇದರಿಂದಾಗಿ ಸ್ಥಳೀಯ ಪ್ರವಾಸಿ  ಚಾಲಕರು ಹಾಗೂ ಮಾಲೀಕರ ವಾಹನಗಳಿಗೆ ಬಾಡಿಗೆ ಇಲ್ಲದೆ ನಷ್ಟ ಉಂಟಾಗುತ್ತಿದೆ ಎಂದು ದೂರು ನೀಡಿದ್ದಾರೆ.

ಮಾಲೀಕರು ತಮ್ಮ ವಾಹನಗಳಿಗೆ ತೆರಿಗೆ ಕಟ್ಟಲು ಕಷ್ಟವಾಗುತ್ತಿದ್ದು ಮುಂದಿನ ದಿನಗಳಲ್ಲಿ   ಈ ರೀತಿಯ ಬಾಡಿಗೆ ಮಾಡದಂತೆ  ಆದೇಶ ಮಾಡಿ ಅಂತಹ ವಾಹನಗಳಿಗೆ  ದಂಡ ವಿಧಿಸಿ ಕ್ರಮ  ತೆಗೆದುಕೊಳ್ಳುವಂತೆ  ಒತ್ತಾಯಿಸಿ ಮನವಿ ಮಾಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  ಸಂದರ್ಭ ಶಿವರಾಮೇಗೌಡರ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷರಾದ ರವಿ ಗೌಡ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರು  ಹಾಗೂ ಚಾಲಕರ  ಸಂಘದ ಅಧ್ಯಕ್ಷರಾದ ಬಿ. ಆರ್.ದಿನೇಶ್ ಮುಂದಿನ ಹಂತದ ಹೋರಾಟ ರೂಪಿಸುವ ಮುನ್ನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜು ಆಡಳಿತ ಮಂಡಳಿಗಳ ಸಂಘ ಅಸ್ತಿತ್ವಕ್ಕೆ
ಮಂಗಳೂರು : ಅನುದಾನ ರಹಿತ ಖಾಸಗಿ ಪಿಯು ಕಾಲೇಜುಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ(ಕುಂಪ) ಅಸ್ತಿತ್ವಕ್ಕೆ ಬರುತ್ತಿದೆ.

ಈ ಸಂಘಟನೆಯನ್ನು ಕರಾವಳಿಯಲ್ಲಿ ಮೊದಲು ಹುಟ್ಟುಹಾಕುತ್ತಿದ್ದು, ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್‌ ಎರಡನೇ ವಾರ ಮಂಗಳೂರಿನಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್‌ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ.ಮೋಹನ ಆಳ್ವ ತಿಳಿಸಿದ್ದಾರೆ.

Karnataka NEP ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿ

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶಿಕ್ಷಣದ ವ್ಯಾಪಾರೀಕರಣ ನಮ್ಮ ಉದ್ದೇಶ ಅಲ್ಲ, ಅದಕ್ಕಾಗಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರುತ್ತಿಲ್ಲ. ಯೋಗ್ಯ ಶಿಕ್ಷಣ, ಉಪನ್ಯಾಸಕರಿಗೆ ವೇತನ ಇತ್ಯಾದಿ ವೆಚ್ಚಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಯಾರೂ ತಪ್ಪು ಅಭಿಪ್ರಾಯ ಹೊಂದಿರಬಾರದು. ಪಿಯು ವಿಭಾಗದ ಜತೆ ಸಮನ್ವಯತೆ ಸಾಧಿಸಲೂ ಈ ಸಂಘಟನೆಯಿಂದ ಸಾಧ್ಯವಾಗಲಿದೆ ಎಂದರು. ಸಂಘದ ಕಾರ್ಯದರ್ಶಿ ಪ್ರೊ.ನರೇಂದ್ರ ನಾಯಕ್‌, ಗೌರವಾಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್‌, ಕೆ.ಸಿ.ನಾಯಕ್‌, ರಾಧಾಕೃಷ್ಣ ಶೆಣೈ ಇದ್ದರು.

ಸಾಂಕ್ರಾಮಿಕ ಕೆಂಗಣ್ಣು ಸಮಸ್ಯೆ: 5 ದಿನ ಶಾಲೆಗೆ ಬರದಂತೆ ದಕ್ಷಿಣ ಕನ್ನಡ ಶಿಕ್ಷಣ ಇಲಾಖೆ ಸೂಚನೆ

ಸದಸ್ಯತ್ವ ಅಭಿಯಾನ ಶುರು: ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಸದಸ್ಯತ್ವ ಹೊಂದಲು 10 ಸಾವಿರ ರು. ಪ್ರಾಥಮಿಕ ಶುಲ್ಕ, 1 ಸಾವಿರ ರು. ವಾರ್ಷಿಕ ಶುಲ್ಕ ಸೇರಿ ಒಟ್ಟು 11 ಸಾವಿರ ರು. ಶುಲ್ಕ ನಿಗದಿಪಡಿಸಲಾಗಿದೆ. ಈ ಮೊತ್ತವನ್ನು ನೇರ ಖಾತೆಗೆ ಜಮೆ ಮಾಡಿಸಿಕೊಳ್ಳಲಾಗುತ್ತಿದೆ. ಆರಂಭದ ಹಂತದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಬಳಿಕ ವಿವಿಧ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗುವುದು ಎಂದು ಡಾ.ಮೋಹನ ಆಳ್ವ ಸ್ಪಷ್ಟಪಡಿಸಿದರು.

click me!