Daily Horoscope: ಕಟಕಕ್ಕೆ ಮುಂದಿಟ್ಟ ಹೆಜ್ಜೆ ಹಿಂದಿಟ್ಟರೆ ನಷ್ಟ

By Suvarna NewsFirst Published Dec 6, 2021, 5:06 AM IST
Highlights

6 ಡಿಸೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹಕ್ಕೆ ಕಹಿ, ಕನ್ಯಾ ರಾಶಿಗೆ ಸಿಹಿ

ಮೇಷ(Aries): ದೇಹಬಲ ಕುಗ್ಗುತ್ತದೆ, ಆರೋಗ್ಯದ ಕಡೆ ಗಮನ ಕೊಡಿ. ಏನೋ ಸಣ್ಣ ಸಮಸ್ಯೆ ಎಂದುಕೊಂಡು ಕಡೆಗಣಿಸದೆ ವೈದ್ಯರನ್ನು ಕಾಣಿ. ಹಲ್ಲು ನೋವು ಬಾಧಿಸಬಹುದು. ಮಕ್ಕಳ ಸಹಕಾರದಿಂದ ನೆಮ್ಮದಿ. ದೈವಾನುಕೂಲ ಇರಲಿದೆ, ವೃತ್ತಿಯಲ್ಲಿ ಸಾಮಾನ್ಯ ದಿನ. ಆದಿತ್ಯ ಹೃದಯ ಪಠಿಸಿ.

ವೃಷಭ(Taurus): ಬಟ್ಟೆ, ಕಬ್ಬಿಣ, ವಾಹನ ವ್ಯಾಪಾರಿಗಳಿಗೆ ನಷ್ಟ, ಅಧಿಕ ಖರ್ಚು. ಉದ್ಯೋಗಿಗಳಿಗೆ ಸಣ್ಣ ಮಟ್ಟಿನ ಪ್ರಗತಿ, ಪ್ರಶಂಸೆ. ವಿದ್ಯಾರ್ಥಿಗಳಿಗೆ ಒತ್ತಡ ಕಾಡುವುದು. ಆಪ್ತರನ್ನು ಕಳೆದುಕೊಳ್ಳುವ ಸನ್ನಿವೇಶ. ಮನಸ್ಸಿನ ಸಮಾಧಾನಕ್ಕಾಗಿ ಲಲಿತಾ ಸಹಸ್ರನಾಮ ಪಠಿಸಿ. 

ಮಿಥುನ(Gemini): ಅನೇಕ ಕೆಲಸಗಳ ಜವಾಬ್ದಾರಿ ನಿಮ್ಮ ಹೆಗಲಿಗೆ ಬಿದ್ದು ಒತ್ತಡವೆನಿಸಬಹುದು. ಬುದ್ಧಿಬಲವಿರುವುದರಿಂದ ಒಂದಾದ ಮೇಲೊಂದರಂತೆ ಕೆಲಸವನ್ನು ಸಮಾಧಾನವಾಗಿ ನಿರ್ವಹಿಸಿದರೆ  ದಿನಾಂತ್ಯಕ್ಕೆ ಖುಷಿ. ವ್ಯಾಪಾರದಲ್ಲಿ ಅನುಕೂಲ, ಧನ ಸಮೃದ್ಧಿ, ಶತ್ರುಗಳು ದೂರಾಗುತ್ತಾರೆ, ಮನೆ ದೇವರ ಪ್ರಾರ್ಥನೆ ಮಾಡಿ.

ಕಟಕ(Cancer): ಕೆಲ ವಿಚಾರಗಳಲ್ಲಿ ಈಗಾಗಲೇ ಹೆಜ್ಜೆ ಮುಂದಿರಿಸಿದ್ದೀರಿ. ಅದನ್ನು ಕೈ ಬಿಡುವ ಯೋಚನೆ ಶುರುವಾಗಿರಬಹುದು. ಆದರೆ, ಕೈ ಬಿಡುವುದರಿಂದಲೇ ನಷ್ಟ ಎಂದು ನಂಬಿ ಮುಂದೆ ನಡೆದರೆ ಲಾಭವಿದೆ. ಕೆಲಸದಲ್ಲಿ ಲಾಭ, ಹಣಕಾಸಿನಲ್ಲಿ ಚೇತರಿಕೆ, ಮಕ್ಕಳಿಂದ ಸಹಾಯ, ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ, ಗಣಪತಿ ಪ್ರಾರ್ಥನೆ ಮಾಡಿ.

Aries Woman: ಹೀಗಿರುತ್ತೆ ಮೇಷ ರಾಶಿಯ ಮಹಿಳೆಯ ಗುಣ ಸ್ವಭಾವ

ಸಿಂಹ(Leo): ತಂದೆ-ಮಕ್ಕಳಲ್ಲಿ ವಿರೋಧದಿಂದ ಮನಸ್ಸಿಗೆ ಕಸಿವಿಸಿ, ಏಕಾಗ್ರತೆ ತಪ್ಪಿ ತಪಸ್ಸು ಭಂಗವಾಗಲಿದೆ. ಕಾಡುವ ಆಲಸ್ಯ, ಉದ್ಯೋಗದಲ್ಲಿ ಬಲ ಕಡಿಮೆ. ಚಂಚಲವಾಗಿ ಓಡುವ ಮನಸ್ಸನ್ನು ಎಳೆ ತರಲು ಧ್ಯಾನದ ಸಹಾಯ ಪಡೆಯಿರಿ. ಸರಸ್ವತಿ ಸ್ಮರಣೆ ಮಾಡಿ.

ಕನ್ಯಾ(Virgo): ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ರೈತರಿಗೆ ನಷ್ಟ ಫಲ, ಸೋಲುಂಟಾಗುವ ಸಾಧ್ಯತೆ. ವಸ್ತ್ರ ವ್ಯಾಪಾರಿಗಳು, ಕಲಾವಿದರಿಗೆ ಅನುಕೂಲ, ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗಲಿವೆ. ಜಾಣ್ಮೆಯಿಂದ ಆಯ್ದುಕೊಳ್ಳಿ. ಸುಬ್ರಹ್ಮಣ್ಯ ಸ್ಮರಣೆ ಮಾಡಿ.

ತುಲಾ(Libra): ಬಾಂಧವ್ಯದಲ್ಲಿ ಅಸಮಾಧಾನ, ದಾಂಪತ್ಯದಲ್ಲೂ ಬೇಸರ. ಸಣ್ಣ ಸಣ್ಣ ವಿಷಯಗಳಲ್ಲೇ ಖುಷಿ ಇರುವಾಗ ಯಾವುದೇ ಹಳೆಯ ವಿಷಯ ಜಗ್ಗಾಡಿ ಮನಸ್ಸು, ಸಂಬಂಧ ಹಾಳು ಮಾಡಿಕೊಳ್ಳುವುದು ಬಿಡಿ. ವಿದೇಶ ಪ್ರಯಾಣದಲ್ಲಿ ತೊಡಕು, ಅಂಜಿಕೆ ಕಾಡಬಹುದು. ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ.

Warding off Evil eye: ದೃಷ್ಟಿ ನಿವಾಳಿಸುವುದು ಹೇಗೆ?

ವೃಶ್ಚಿಕ(Scorpio): ದೇಹಬಲ ಇರಲಿದ್ದು ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಉತ್ಸಾಹ.  ವ್ಯಾಪಾರದಲ್ಲಿ ಲಾಭವೂ ಇದೆ, ಸ್ವಲ್ಪ ನಷ್ಟವೂ ಇದೆ. ಹೀಗೆ ಬಂದ ದುಡ್ಡು ಹಾಗೆ ಹೋಗುವುದು, ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಶತ್ರುಗಳ ಬಾಧೆ, ಹೊಟ್ಟೆಕಿಚ್ಚು ತಣಿಸಲು ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ನಷ್ಟಫಲ, ಬುದ್ಧಿ ಮಂದವಾಗುತ್ತದೆ. ವ್ಯಾಜ್ಯಗಳ ವಿಚಾರಣೆ ಮುಂದೆ ಹೋಗುತ್ತದೆ. ನೀರು, ವಾಹನ ವಿಚಾರದಲ್ಲಿ ಎಚ್ಚರ ಇರಲಿ, ಸಹಿ ಹಾಕುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಸಹಜ ದಿನ. ಮಕ್ಕಳಿಂದ ನೆಮ್ಮದಿ. ವಿಷ್ಣು ಸಹಸ್ರನಾಮ ಪಠಿಸಿ.

ಮಕರ(Capricorn): ಪ್ರಯಾಣದಲ್ಲಿ ತೊಡಕು, ಬೆಂಕಿ ವಿಚಾರದಲ್ಲಿ ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ, ಪತ್ನಿಯಿಂದ ಅನುಕೂಲವಿದೆ. ಮಹಿಳೆಯರು ದೇವತಾ ಕಾರ್ಯಗಳಲ್ಲಿ ಭಾಗಿ. ಸಣ್ಣ ಪುಟ್ಟ ಕಸುಬುದಾರರಿಗೆ ಲಾಭ, ರೈತರಿಗೆ ಸಂತಸ, ಗ್ರಾಮ ದೇವತೆಗೆ ಪ್ರಾರ್ಥನೆ ಮಾಡಿ.

ಕುಂಭ(Aquarius): ಅಧೀರತೆ, ಅಂಜಿಕೆ, ಸಹೋದರರ ಬಾಂಧವ್ಯ ಹಾಳಾಗಲಿದೆ. ಅವಿವಾಹಿತರಿಗೆ ನಿರಾಸೆ, ವೃತ್ತಿಯಲ್ಲಿ ಬಲ, ಹಾಗಂಥ ಅತಿಯಾದ ನಿರೀಕ್ಷೆ ಸಲ್ಲದು. ವಿವಾಹಿತರ ನಡುವೆ ಮಾತುಕತೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಯಿಂದ ಮನಸ್ಸು ಹಾಳು, ಆಂಜನೇಯ ಪ್ರಾರ್ಥನೆ ಮಾಡಿ.

ಮೀನ(Pisces): ಆರೋಗ್ಯದ ಸಮಸ್ಯೆಯಿಂದ ಕುಟುಂಬದಲ್ಲಿ ಅಸೌಖ್ಯ. ಮನೆಯ ವಾತಾವರಣ ಕಹಿಯಾಗಿರಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಲಿದೆ. ವಾಹನ ಸವಾರರಿಗೆ ಹೆಚ್ಚಿನ ಜಾಗ್ರತೆ ಅಗತ್ಯ. ಯಾವ ದೊಡ್ಡ ನಿರ್ಧಾರವನ್ನೂ ಇಂದು ತೆಗೆದುಕೊಳ್ಳಬೇಡಿ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಾಲಯಕ್ಕೆ ಹೋಗಿ ನಮಸ್ಕರಿಸಿ. 

click me!