Daily Horoscope: ವೃಷಭಕ್ಕೆ ಲಾಭದ ದಿನ, ಸಿಂಹಕ್ಕೆ ಹೆಚ್ಚಲಿರುವ ಕಸಿವಿಸಿ

By Suvarna NewsFirst Published Mar 8, 2022, 5:06 AM IST
Highlights

8 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗಿದೆ ಭಡ್ತಿ ಸಾಧ್ಯತೆ, ನಿಮ್ಮ ರಾಶಿಫಲ ಏನಿದೆ ನೋಡಿ

ಮೇಷ(Aries): ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ ಶುಭ ದಿನ. ಉದ್ಯೋಗಿಗಳಿಗೆ ಹೆಚ್ಚಿನ ಆರ್ಥಿಕ ಮೂಲಗಳಿಂದ ಲಾಭವಾದೀತು. ನಡೆ ನುಡಿಯಲ್ಲಿ ಅಹಂಕಾರ ನುಗ್ಗದಂತೆ ಎಚ್ಚರ ವಹಿಸಿ. ಹಾಗೊಂದು ವೇಳೆ ಅಹಂಕಾರ ತೋರಿದರೆ ಸಂಬಂಧಗಳಲ್ಲಿ ಬಿರುಕು ಎದುರಿಸಬೇಕಾದೀತು. ಆಂಜನೇಯ ಸ್ಮರಣೆ ಮಾಡಿ.

ವೃಷಭ(Taurus): ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಆಸ್ತಿ ಖರೀದಿ ಮಾಡಬಹುದು. ಮನೆ ಮಂದಿಯೊಂದಿಗೆ ಜಗಳ ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳಬೇಡಿ. ಅವರು ಹೇಳುವ ಮಾತಿನಲ್ಲಿ ಸತ್ಯ ಇರಬಹುದೇ ಎಂದು ಅವಲೋಕಿಸಿ. ನವಗ್ರಹ ಪೂಜೆ ಮಾಡಿ. 

Latest Videos

ಮಿಥುನ(Gemini): ರೈತರಿಗೆ ಲಾಭ ಹೆಚ್ಚಿ ಸಂತಸವಾಗುವುದು. ಮನೆಯ ಸದಸ್ಯರ ಆರೋಗ್ಯ ಸಮಸ್ಯೆಗಳು ಕೊಂಚ ಆತಂಕ ತರಲಿವೆ. ಸಾಲ ಹಿಂದಿರುಗಿ ಬರದೆ ಕಳವಳವಾಗುವುದು. ಹೂಡಿಕೆಯಲ್ಲಿ ನಷ್ಟಭಯ ಕಾಡುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಬೈಸಿಕೊಳ್ಳಬಹುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಕಟಕ(Cancer): ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಹಿಡಿಯುವುದೇ ನಿಮ್ಮ ಪಾಲಿಗೆ ಮುಳುವಾದೀತು. ಕೆಲವೊಂದಕ್ಕೆ ತಾಳ್ಮೆ ಹೇಗೆ ಅಗತ್ಯವೋ, ಮತ್ತೆ ಕೆಲ ನಿರ್ಧಾರಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂಬ ಅರಿವು ಮೂಡಿಸುವಂತ ಸನ್ನಿವೇಶಗಳು ಎದುರಾಗಲಿವೆ. ಕೆಂಪು ಧಾನ್ಯ ದಾನ ಮಾಡಿ. 

ಸಿಂಹ(Leo): ಯಾವುದೂ ಅಂದುಕೊಂಡಂತಾಗುತ್ತಿಲ್ಲ ಎನಿಸಿ ಕಸಿವಿಸಿಯಾಗಬಹುದು. ತೆಗೆದುಕೊಂಡ ನಿರ್ಧಾರಗಳಿಗೆ ಅಡ್ಡಿ ಆತಂಕ ಎದುರಾಗಲಿದೆ. ಬಹುಕಾಲದ ಯೋಜನೆಯೊಂದು ತಲೆ ಕೆಳಗಾಗಿ ಟಕ್ಕರ್ ಕೊಡಲಿದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದುವರಿಯಿರಿ. ಆಂಜನೇಯನಿಗೆ ವೀಳ್ಯದೆಲೆ ಹಾರ ಮಾಡಿ ಹಾಕಿ. 

Rudrabhishek Puja: ನಿಮ್ಮೆಲ್ಲ ಆಸೆ ಈಡೇರಬೇಕಂದ್ರೆ ಪ್ರತಿ ಸೋಮವಾರ ಹೀಗೆ ಮಾಡಿ

ಕನ್ಯಾ(Virgo): ಮನೆಯಲ್ಲಿ ನಿಮ್ಮ ಭವಿಷ್ಯ, ನಡೆಯ ವಿಚಾರವಾಗಿ ಬಹಳಷ್ಟು ಚರ್ಚೆಗಳಾಗಬಹುದು. ಎಲ್ಲದಕ್ಕೂ ಮೂಕ ಪ್ರೇಕ್ಷಕರಾಗದೆ, ನಿಮ್ಮ ನಿಲುವನ್ನು ವ್ಯಕ್ತಪಡಿಸಿ. ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ ಇದೆ. ಹೊಸ ಪ್ರದೇಶಕ್ಕೆ ವರ್ಗಾವಣೆ ಸಾಧ್ಯತೆಯೂ ಇದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ತುಲಾ(Libra): ನಿಮ್ಮ ಕೆಲಸಗಳು ಕಚೇರಿಯ ದೊಡ್ಡ ಹುದ್ದೆಯಲ್ಲಿರುವವರ ಗಮನಕ್ಕೆ ಬರಲಿವೆ. ಅದಕ್ಕೆ ಕೆಲ ಆಪ್ತರು ಸಹಾಯ ಮಾಡಬಹುದು. ಇದರಿಂದ ಮುಂಭಡ್ತಿ ಸಿಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಿದೆ. ವೈವಾಹಿಕ ಜೀವನದಲ್ಲಿ ಸಂತೋಷವಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಂಪು ವಸ್ತ್ರ ದಾನ ಮಾಡಿ.

ವೃಶ್ಚಿಕ(Scorpio): ನಿಮ್ಮನ್ನು ಸ್ನೇಹಿತರು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನಿಸಬಹುದು. ಅದಕ್ಕೆ ಮನಸ್ಸು ಹಾಳು ಮಾಡಿಕೊಳ್ಳದೆ ನಿಮ್ಮ ಒಳ್ಳೆಯತನ ಮುಂದುವರಿಸಿ. ಒಳ್ಳೆತನ ಎಂದಿಗೂ ಕಾಯುತ್ತದೆ ಎಂದು ನಂಬಿ. ಉದ್ಯೋಗದಲ್ಲಿ ಏಳ್ಗೆ ಇರಲಿದೆ. ಗೋ ಗ್ರಾಸ ನೀಡಿ. 

Chanakya Niti: ನಿಮ್ಮ ಇಂಥ ನಡತೆಯಿಂದಾಗಿ ಕುಟಂಬಕ್ಕೇ ಶತ್ರುವಾದೀರಿ, ಹುಷಾರ್!

ಧನುಸ್ಸು(Sagittarius): ಪರಿಚಿತರು ಹೇಳಿದ ಮಾತನ್ನು ನಂಬಿ ಯಾರನ್ನೋ ದ್ವೇಷಿಸುವುದು, ಅನುಮಾನಿಸುವುದು, ಸಿಟ್ಟಾಗುವುದು ಮಾಡಬೇಡಿ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಿ. ನಿಮ್ಮ ಭಾವನೆಗಳು ಯಾರಿಗೂ ಅರ್ಥವಾಗುತ್ತಿಲ್ಲ ಎನಿಸಬಹುದು. ಆಂಜನೇಯನ ಸ್ಮರಣೆ ಮಾಡಿ. 

ಮಕರ(Capricorn): ವಿವಾಹ ವಿಚಾರದಲ್ಲಿ ಅಡಚಣೆಗಳು ಮುಂದುವರಿದು ಆತಂಕ ಹೆಚ್ಚುವುದು. ನಿರುದ್ಯೋಗಿಗಳು ಭರವಸೆ ಕಳೆದುಕೊಳ್ಳಬಹುದು. ಆದರೆ, ಸ್ವಂತ ಉದ್ಯೋಗ ಮಾಡಲು ಯೋಚಿಸುವವರು ಆ ಸಂಬಂಧ ಸಂಪೂರ್ಣ ತೊಡಗಿಸಿಕೊಂಡರೆ ಒಳಿತಾಗುವುದು. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಕುಂಭ(Aquarius): ಉದ್ಯೋಗ ಕಳೆದುಕೊಳ್ಳುವ ಭೀತಿ ಆವರಿಸಬಹುದು. ಇಲ್ಲವೇ ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳು ಎದುರಾಗಿ ಆತಂಕಕ್ಕೀಡಾಗುವಿರಿ. ಇದರಿಂದ ಭವಿಷ್ಯವನ್ನು ಯೋಜಿಸಲು ಕಷ್ಟವಾಗಬಹುದು. ಮಕ್ಕಳ ವಿಷಯದಲ್ಲಿ ಇದ್ದ ಆತಂಕ ಕಡಿಮೆಯಾಗುವುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮೀನ(Pisces): ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಲು ಹೋಗಬೇಡಿ. ಕೆಲವೊಂದನ್ನು ತಮಾಷೆಯಾಗಿಯೂ, ಮತ್ತೆ ಕೆಲವನ್ನು ಲೆಕ್ಕಕ್ಕಿಲ್ಲದಂತೆ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಎಲ್ಲದಕ್ಕೂ ಅಳುವುದೇ ಪರಿಹಾರವಲ್ಲ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!