Daily Horoscope: ವೃಷಭಕ್ಕೆ ಕೈ ಹಿಡಿವ ಅದೃಷ್ಟ, ತುಲಾ ರಾಶಿಗೆ ಧನನಷ್ಟ

By Suvarna NewsFirst Published Mar 15, 2022, 5:00 AM IST
Highlights

15 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕಕ್ಕೆ ಒಂಟಿತನ, ನಿಮ್ಮ ರಾಶಿ ಫಲ ಏನಿದೆ ನೋಡಿ..

ಮೇಷ(Aries): ವ್ಯಾಪಾರ, ವ್ಯವಹಾರಗಳು ಅಷ್ಟಕ್ಕಷ್ಟೇ ಆಗಿದ್ದರೂ ದಿನ ಉಲ್ಲಾಸದಾಯಕವಾಗಿರಲಿದೆ. ಹತ್ತಿರದ ಸಂಬಂಧಿಗಳ ಆಗಮನ ಎಷ್ಟು ಸಂತೋಷ ತರುವುದೋ, ಅಷ್ಟೇ ಕೆಲಸಗಳು ಹೆಚ್ಚಿ ದಣಿವಾಗುವುದು. ಮೈ ಕೈ ನೋವಿನಿಂದ ದೇಹ ಜರ್ಝರಿತವಾಗುವುದು. ಕೆಂಪು ಧಾನ್ಯಗಳ ದಾನ ಮಾಡಿ. 

ವೃಷಭ(Taurus): ಇಂದು ಅದೃಷ್ಟ ಜೊತೆಗೂಡುವುದು. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ದಿನ. ಆರೋಗ್ಯ ಚೆನ್ನಾಗಿರುವುದು. ಮನೆ ಹಿರಿಯರ ಆರೋಗ್ಯಕ್ಕಾಗಿ ವೈದ್ಯರನ್ನು ಭೇಟಿಯಾಗಲಿರುವಿರಿ. ಆಂಜನೇಯ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಮಾತಿನಿಂದಲೇ ಮನ ಗೆಲ್ಲುವಿರಿ. ಆತ್ಮವಿಶ್ವಾಸದ ಮಾತುಗಳು ಮತ್ತೊಬ್ಬರ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ಷೇರು ವ್ಯವಹಾರಗಳು, ರಿಯಲ್ ಎಸ್ಟೇಟ್, ವ್ಯಾಪಾರ, ಉದ್ದಿಮೆಗಳು ಉತ್ತಮ ಲಾಭ ತಂದು ಕೊಡಲಿವೆ. ಸಂಗಾತಿಯ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕಟಕ(Cancer): ಪೋಷಕರೊಂದಿಗಿನವ ಭಿನ್ನಾಭಿಪ್ರಾಯ ಹೆಚ್ಚಬಹುದು. ಉದ್ಯೋಗರಂಗದಲ್ಲಿ ಹಿರಿಯರಿಂದ ಬೈಸಿಕೊಳ್ಳಬಹುದು. ಇಲ್ಲವೇ ಸಹೋದ್ಯೋಗಿಗಳ ಗಾಸಿಪ್‌ಗೆ ಆಹಾರವಾಗುವಿರಿ. ಮನಸ್ಸಿನ ಕಸಿವಿಸಿಯನ್ನು ಮಕ್ಕಳ ಎದುರು ತೋರಿಸಬೇಡಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ.

ಸಿಂಹ(Leo): ಮತ್ತೊಬ್ಬರ ಏಳ್ಗೆ ಕಂಡು ಕರುಬುವುದನ್ನು ಬಿಡಿ. ನಿಮ್ಮ ಏಳ್ಗೆಗಾಗಿ ನೀವೇನು ಮಾಡಬಹುದೋ ನೋಡಿ. ವಿದ್ಯಾರ್ಥಿಗಳಿಗೆ ಅಧ್ಯಯನ ಕುರಿತ ಒತ್ತಡ ಹೆಚ್ಚಿ ಆತಂಕವಾಗುವುದು. ಹೊರಾಂಗಣ ಆಟಗಳಲ್ಲಿ ತೊಡಗಿರಿ. ನವಗ್ರಹ ಪ್ರಾರ್ಥನೆ ಮಾಡಿ. 

ಈ ನಾಲ್ಕು ರಾಶಿಯ ಹುಡುಗರ ಕಡೆ ಹುಡುಗಿಯರಿಗೆ ಆಕರ್ಷಣೆ ಹೆಚ್ಚು, ಯಾಕೆ ಗೊತ್ತಾ?

ಕನ್ಯಾ(Virgo): ಹಿರಿಯರೊಂದಿಗಿನ ಮುನಿಸಿಗೆ ವಿದಾಯ ಹಾಡಲು ಅವಕಾಶಗಳು ಒದಗುವುವು. ಶೀತ, ಜ್ವರ, ಕೆಮ್ಮಿನಂಥ ಕಿರಿಕಿರಿಗಳು ಬಾಧಿಸುವುದು. ನಿಮ್ಮ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ನಿರಂತರ ಪ್ರಯತ್ನ ಅಗತ್ಯ. ಮಾತಿನ ಮೇಲೆ ಹಿಡಿತವಿರಲಿ. ಗೋ ಗ್ರಾಸ ನೀಡಿ.

ತುಲಾ(Libra): ಕಡಿವಾಣವಿಲ್ಲದ ಖರ್ಚಿನಿಂದ ಮನಸ್ಸು ವ್ಯಾಕುಲಗೊಳ್ಳುವುದು. ಆರ್ಥಿಕ ಸಂಕಷ್ಟಗಳು ಹೆಚ್ಚುವುದು. ಉದಾಸೀನತೆಯಿಂದ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ. ಬೇಗ ಎಚ್ಚೆತ್ತುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ಏಕಾಂಗಿತನ ಬಾಧಿಸುವುದು. ಜನರ ನಡುವೆಯೂ ಒಂಟಿ ಎನಿಸುವುದು. ಶೀತ, ಕೆಮ್ಮಿನಿಂಥ ಆರೋಗ್ಯ ಸಮಸ್ಯೆಗಳು ಬಾಧಿಸುವುವು. ಕಚೇರಿಯಲ್ಲಿ ಕೆಲಸ ವಿಪರೀತವಾಗುವುದು. ಮನೆಯ ನವೀಕರಣ ಕಾರ್ಯಗಳು, ಸುಣ್ಣ ಬಣ್ಣ ಹೊಡೆಸುವುದು ಮುಂತಾದ ಕೆಲಸಗಳು ನಡೆಯಲಿವೆ. ಆಂಜನೇಯನಿಗೆ ವೀಳ್ಯದೆಲೆ ಹಾರ ಅರ್ಪಿಸಿ.

Name and Astrology : ಈ ಅಕ್ಷರದಿಂದ ಹೆಸರು ಆರಂಭವಾಗುವ ಜನ ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತೆ !

ಧನುಸ್ಸು(Sagittarius): ಆಸ್ತಿ ಪಾಸ್ತಿ ಖರೀದಿ ಕೆಲಸಗಳು ಮುಂದಿನ ಹಂತ ತಲುಪುವುವು. ಬಾಡಿಗೆ ಮನೆಯಲ್ಲಿರುವವರು ಬೇರೆ ಮನೆಗೆ ಹೋಗಬಹುದು. ಉದ್ಯೋಗದಲ್ಲಿ ಪ್ರಗತಿ ಇರುವುದಾದರೂ ಕೌಶಲ್ಯ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಕಲಿಕೆಯಲ್ಲಿ ಭಾಗವಹಿಸಿ. ರಾಮ ಧ್ಯಾನ ಮಾಡಿ. 

ಮಕರ(Capricorn): ಸ್ನೇಹಿತರ ಸಹಕಾರದಿಂದ ಸಾಲ ತೀರಿಸುವಿರಿ. ವಿನಾ ಕಾರಣ ಇನ್ನೊಬ್ಬರನ್ನು ಚುಚ್ಚಿ ಮಾತಾಡಿ ನೋಯಿಸಬೇಡಿ. ಮಾತಿನಲ್ಲಿ ಸಿಹಿ ಇರಲಿ. ಯಾರನ್ನು ನೋಡಿಯೇ ತೀರ್ಪು ನೀಡಲು ಹೋಗಬೇಡಿ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ. ಕುಲದೇವರ ಸ್ಮರಣೆ ಮಾಡಿ. 

ಕುಂಭ(Aquarius): ಇಂದು ತ್ರಾಸದಾಯಕ ದಿನವಾಗಿದೆ. ಮೇಲಧಿಕಾರಿಗಳಿಂದ ಮಾತು ಕೇಳಬೇಕಾಗಿ ಬರಬಹುದು. ಸಹೋದ್ಯೋಗಿಗಳ ಗಾಸಿಪ್‌ ಕಂಗೆಡಿಸಲಿದೆ. ಉದ್ಯೋಗರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಬಹುದು. ಸಾಂಸಾರಿಕವಾಗಿ ಮೌನ ಮುನಿಸುಗಳು ಇರುವುವು. ಮನೆ ದೇವರ ಪ್ರಾರ್ಥನೆ ಮಾಡಿ.

ಮೀನ(Pisces): ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಹೊಸ ಆರ್ಥಿಕ ಮೂಲಗಳ ಬಗ್ಗೆ ತಿಳಿಯುವಿರಿ. ಮಕ್ಕಳ ಕಡೆಯಿಂದ ನೆರವು ದೊರಕಿ ಅಂದುಕೊಂಡ ಕಾರ್ಯಗಳು ಆಗುವುವು. ಹನುಮಾನ್ ಚಾಲೀಸ್ ಹೇಳಿಕೊಳ್ಳಿ. 

click me!