Daily Horoscope: ಈ ರಾಶಿಯ ಹಣಕಾಸಿನ ವಂಚನೆ ಬೆಳಕಿಗೆ

By Suvarna NewsFirst Published Jan 20, 2022, 5:00 AM IST
Highlights

20 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಧನ ಲಾಭ, ತುಲಾಗೆ ಹಿತಶತ್ರುಗಳ ಕಾಟ

ಮೇಷ(Aries): ನಿಮ್ಮ ಮಾತಿನಿಂದ ಇತರರಿಗೆ ಬೇಜಾರಾಗಬಹುದು. ಹೇಳುವುದನ್ನು ನಯವಾಗೂ ಹೇಳಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಭೂ ವ್ಯವಹಾರಗಳಿಂದ ಲಾಭವಿದೆ. ಇದ್ದಕ್ಕಿದ್ದಂತೆ ಪ್ರಯಾಣ ಯೋಗವೂ ಒದಗಿ ಬರಬಹುದು. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ವೃಷಭ(Taurus): ಖರ್ಚುಗಳು ಹೆಚ್ಚಿ ಚಿಂತೆಯಾಗಲಿದೆ. ಆರೋಗ್ಯ ಯತಾಸ್ಥಿತಿಯಲ್ಲಿರುವುದು. ಸ್ತ್ರೀಯರನ್ನು ಅವಮಾನಿಸಿ ಪಶ್ಚಾತ್ತಾಪ ಪಡುವ ಸ್ಥಿತಿ ಬರಬಹುದು. ಯಾರೊಡನೆಯೂ ವೃಥಾ ವಾದ, ಜಗಳ ಬೇಡ. ಲಲಿತಾ ಸಹಸ್ರನಾಮ ಶ್ರವಣ ಮಾಡಿ. 

ಮಿಥುನ(Gemini): ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಕಾಡುತ್ತಿರುವ ಒತ್ತಡಗಳಿಂದ ಮುಕ್ತಿಯಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕುವ ಮುನ್ನ ಕೂಲಂಕುಷವಾಗಿ ಅದರ ಪರಿಶೀಲನೆ ಮಾಡಿ. ಮಕ್ಕಳ ಮನೋವೇದನೆಗಳಿಗೆ ಕಿವಿ ಕೊಡಿ. ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ. 

ಕಟಕ(Cancer): ವೃತ್ತಿರಂಗದಲ್ಲಿ ವಂಚನೆಗೆ ಆಸ್ಪದವಿದೆ. ಕೈ ಕೆಳಗಿನವರನ್ನು ಚೆನ್ನಾಗಿಟ್ಟುಕೊಳ್ಳಿ. ನ್ಯಾಯ ತಕರಾರುಗಳಲ್ಲಿ ವಿಳಂಬ. ಗೃಹಿಣಿಯರಿಗೆ ಬಿಡುವಿಲ್ಲದ ಕಾರ್ಯದಿಂದ ದೇಹಾಯಾಸ ಹೆಚ್ಚಲಿದೆ. ರೈತರಿಗೆ ಲಾಭವಿದೆ. ರಾಘವೇಂದ್ರ ಶತನಾಮಾವಳಿ ಹೇಳಿ. 

ಸಿಂಹ(Leo): ಸಂಗಾತಿ ಹಾಗೂ ಮಕ್ಕಳ ಸಹಕಾರವಿದ್ದರೂ ಉದ್ವೇಗಕ್ಕೊಳಗಾಗುವ ಪರಿಸ್ಥಿತಿಗಳು ಎದುರಾಗಬಹುದು. ಹಣಕಾಸಿನ ವಿಚಾರದ ವಂಚನೆ ಬೆಳಕಿಗೆ ಬರಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಗೆ ಭಂಗ ಉಂಟಾಗುವುದು. ರಾಮ ನಾಮ ಜಪ ಮಾಡಿ. 

ಕನ್ಯಾ(Virgo): ಬ್ಯಾಂಕ್ ವ್ಯವಹಾರ ಹಾಗೂ ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಮನೆಯಲ್ಲಿ ಮಂಗಲ ಕಾರ್ಯಕ್ಕೆ ನಾಂದಿ ಹಾಡಲಿದ್ದೀರಿ. ಶುಭ ಕಾರ್ಯ ನಿಮಿತ್ತ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸಂಧಿ ವಾತ, ಕಫ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡಿ. 

ತುಲಾ(Libra): ವೃತ್ತಿಯಲ್ಲಿ ಸಹೋದ್ಯೋಗಿಗಳ ಹೊಟ್ಟೆಕಿಚ್ಚು, ಅಪವಾದ ಭೀತಿ, ಗಾಸಿಪ್ ಹೆಚ್ಚಲಿದೆ. ಸರಕಾರಿ ಕೆಲಸಗಳಿಗೆ ತಡೆಗಳು ಎದುರಾಗಿ ಮನಸ್ಸಿಗೆ ಕಿರಿಕಿರಿ ಹೆಚ್ಚಲಿದೆ. ಬ್ಯಾಂಕ್ ಕೆಲಸಗಳು ಹಿಂದುಳಿಯಲಿವೆ. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ ಆಗಬಹುದು. ಗಣಪತಿಗೆ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ಪ್ರಯತ್ನಕ್ಕೆ ಮೀರಿದ ಫಲವಿರಲಿದೆ. ಪ್ರಗತಿ ಪಥದಲ್ಲಿ ಸಾಗುವಿರಿ. ನಿರುದ್ಯೋಗಿಗಳು, ಅವಿವಾಹಿತರು, ಉನ್ನತ ಶಿಕ್ಷಣಕ್ಕೆ ಪರೀಕ್ಷೆಗೆ ಸಿದ್ಧರಾಗುತ್ತಿರುವವರು ಇಂದು ಹೆಚ್ಚಿನ ಪ್ರಯತ್ನ ಹಾಕಿ ನೋಡಬಹುದು. ವ್ಯವಸಾಯ ಹಾಗೂ ರಾಜಕೀಯ ಜೀವನದಲ್ಲಿ ಏರುಪೇರಿಲ್ಲ. ರಾಮ ಸ್ಮರಣೆ ಮಾಡಿ. 

Numerology Prediction: ಪಾದಾಂಕ ಮೂರು, ಎದುರಿಸಬೇಕು ಹಲವು ಏರುಪೇರು

ಧನುಸ್ಸು(Sagittarius): ಹಿರಿಯರೊಡನೆ ಮನಸ್ತಾಪ ಹೆಚ್ಚಿ ಮನಸ್ಸು ಕದಡುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿ ಸಮಾಧಾನ ತರಲಿದೆ. ಪ್ರಯಾಣದಿಂದ ಆದಾಯ ಹೆಚ್ಚಲಿದೆ. ಕುಲದೇವತಾ ಸ್ಮರಣೆ ಮಾಡಿ. 

ಮಕರ(Capricorn): ಕೈಗೊಂಡ ದೊಡ್ಡ ಯೋಜನೆಗಳಿಗೆ ದೈವಾನುಗ್ರಹ ಕೂಡಿ ಬರಲಿದೆ. ಹಿರಿಯರ ಸಹಕಾರವೂ ದೊರೆಯಲಿದೆ. ಶತ್ರುಪೀಡೆ ಕಡಿಮೆ ಇದ್ದು, ಮಾನಸಿಕ ನೆಮ್ಮದಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಸಿ. ಮನೆ ದೇವರನ್ನು ಸ್ಮರಿಸಿ. 

Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!

ಕುಂಭ(Aquarius): ಮನೆಗೆ ಹೊಸ ಪೀಠೋಪಕರಣಗಳ ಖರೀದಿ ಮಾಡಲಿರುವಿರಿ. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಲಿವೆ. ಬೇರೆಯವರ ಅಸೂಯೆಯ ಮಾತುಗಳನ್ನು ಕಡೆಗಣಿಸಿ. ಅವಿವಾಹಿತರಿಗೆ ವಿವಾಹಯೋಗ ಕೂಡಿಬಂದೀತು. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಮೀನ(Pisces): ನಿಮ್ಮ ಮನೆಯ ಸಮಸ್ಯೆಗಳು ಮೂರನೆಯವರ ಮೂಗು ತೂರಿಸುವಿಕೆಯಿಂದ ಹೆಚ್ಚಾದಾವು. ಅವರನ್ನು ದೂರವಿಡುವ ಕಡೆ ಗಮನ ಕೊಡಿ. ವಾಹನ ಸಂಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಾಮಾಜಿಕವಾಗಿ ಗೌರವ ದೊರೆಯಲಿದೆ. ಭಗವದ್ಗೀತೆ ಶ್ರವಣ ಮಾಡಿ. 

click me!