Daily Horoscope: ಆರೋಗ್ಯ ಸಮಸ್ಯೆಗೆ ತುಲಾ ತತ್ತರ, ವೃಷಭಕ್ಕೆ ಧನ ಲಾಭ

By Suvarna NewsFirst Published Jan 18, 2022, 5:00 AM IST
Highlights

18 ಜನವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತಪ್ಪಿನಿಂದ ಅವಮಾನ ಎದುರಿಸುವ ಸ್ಥಿತಿ ಕನ್ಯಾ ರಾಶಿಯದು, ನಿಮ್ಮ ರಾಶಿ ಫಲ ಏನು ನೋಡಿ..

ಮೇಷ(Aries): ನಿಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸುವಿರಿ. ವಕೀಲರು, ಮನರಂಜನಾ ವೃತ್ತಿಯಲ್ಲಿರುವವರು ಸೇರಿದಂತೆ ಮಾತಿನ ಬಲ ಬೇಕಾಗುವ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ವೃಷಭ(Taurus): ನಿಮ್ಮ ಶ್ರಮ, ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಶೇರು, ಲೇವಾದೇವಿ ವ್ಯವಹಾರಗಳಲ್ಲಿ ಲಾಭವಿರಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಹವ್ಯಾಸಗಳಿಂದ ಧನ ಲಾಭವಿದೆ. ಕೆಂಪು ಧಾನ್ಯವನ್ನು ದಾನ ಮಾಡಿ. 

ಮಿಥುನ(Gemini): ವ್ಯಾಪಾರ, ವಹಿವಾಟು ಕೊಂಚ ಸುಧಾರಣೆ ಕಾಣಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹ ತೋರಿ ಬರಲಿದೆ. ಆಪ್ತರು ಮಾಡುತ್ತಿರುವ ಮೋಸ ಬೆಳಕಿಗೆ ಬರಬಹುದು. ಅಧ್ಯಯನಶೀಲರಿಗೆ ಗೌರವ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಗಣಪತಿಗೆ ಕಡಲೆ ನೈವೇದ್ಯ ಮಾಡಿ.

ಕಟಕ(Cancer): ಸಣ್ಣ ಪುಟ್ಟ ವಿಷಯಗಳಿಗೂ ಕೋಪ ಬರಬಹುದು. ಇದರ ಪರಿಣಾಮ ಜೊತೆಯಲ್ಲಿರುವವರಿಗೆ ಕಿರಿಕಿರಿ ಉಂಟು ಮಾಡುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಹಿನ್ನಡೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ. ಅಸೂಯಾಪರರಿಂದ ಉದ್ಯೋಗದಲ್ಲಿ ಕಿರಿಕಿರಿ. ಆಂಜನೇಯನ ಸ್ಮರಣೆ ಮಾಡಿ. 

ಸಿಂಹ(Leo): ಈ ರಾಶಿಯ ನಿರುದ್ಯೋಗಿಗಳಿಗೆ ಇದು ಸುದಿನ. ನಿಮ್ಮ ಸ್ನೇಹಿತರ ಸಹಾಯದಿಂದ ಹೊಸ ಕೆಲಸ ದೊರೆಯಲಿದೆ. ಹವ್ಯಾಸಗಳಿಂದ ಮನಸ್ಸಿಗೆ ಸಂತೋಷ. ಮನೆಯ ಜವಾಬ್ದಾರಿಗಳಿಂದ ನುಣಚಿ ಕೊಳ್ಳುವ ಅಭ್ಯಾಸ ಬಿಡಿ. ಈ ಬಗ್ಗೆ ಪೋಷಕರ ಚಿಂತೆಯನ್ನು ನೀಗಿಸಿ. ಪೋಷಕರ ಆಶೀರ್ವಾದ ಪಡೆಯಿರಿ. 

ಕನ್ಯಾ(Virgo): ಮಕ್ಕಳು ಮಾಡುವ ತಪ್ಪಿಗೆ ದೊಡ್ಡವರು ತಲೆ ತಗ್ಗಿಸುವ ಸ್ಥಿತಿ ಬರಬಹುದು. ಮಾತಿನ ತಪ್ಪಿನಿಂದ ಇಲ್ಲವೇ ಕೆಲಸದ ಎಡವಟ್ಟಿನಿಂದ ಅವಮಾನ ಎದುರಿಸಬೇಕಾಗಬಹುದು. ಯಾರಿಗೂ ಸಾಲ ಕೊಡಲು ಹೋಗಬೇಡಿ. ಹೋಟೆಲ್ ವ್ಯವಹಾರದಲ್ಲಿ ಲಾಭ ಇರಲಿದೆ. ವಿಷ್ಣು ಸಹಸ್ರನಾಮ ಪಠಿಸಿ. 

ತುಲಾ(Libra): ಆರೋಗ್ಯ ಸಮಸ್ಯೆಗಳು ಮನಸ್ಸನ್ನು ಕೆಡಿಸಲಿವೆ. ಮನೆಮದ್ದನ್ನು ಮಾಡಿಕೊಳ್ಳುತ್ತಾ ಕೂರುವ ಬದಲು ವೈದ್ಯರ ಭೇಟಿ ಮಾಡಿ. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ನೀಡಲಾಗದೆ ಒದ್ದಾಡುವಿರಿ. ಉದ್ಯೋಗದಲ್ಲಿ ಏರುಪೇರಿಲ್ಲ. ರಾಮಸ್ಮರಣೆ ಮಾಡಿ. 

Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

ವೃಶ್ಚಿಕ(Scorpio): ಉತ್ಸಾಹದಿಂದ ತುಂಬಿರುವಿರಿ. ನಿಮ್ಮ ಸಕಾರಾತ್ಮಕ ಮನಸ್ಥಿತಿಯಿಂದಾಗಿ ಎಲ್ಲ ಒಳಿತಾಗಲಿದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಲಿದೆ. ಮಕ್ಕಳು ಹೊಸ ಕಲಿಕೆಯಲ್ಲಿ ಆಸಕ್ತಿ ತೋರಿಸುವರು. ಹನುಮಾನ್ ಚಾಲೀಸ್ ಹೇಳಿ. 

ಧನುಸ್ಸು(Sagittarius): ಈ ದಿನ ಮಾಡುವ ಸಣ್ಣ ಹೂಡಿಕೆಗಳು ಮುಂದೆ ಉತ್ತಮ ಲಾಭ ತರಲಿವೆ. ಸಂಗಾತಿಯ ಆರೋಗ್ಯ ಸುಧಾರಣೆಯಿಂದ ಮನಸ್ಸು ನಿರಾಳವಾಗುವುದು. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಸಂತೋಷ ತರಲಿವೆ. ಆಂಜನೇಯನಿಗೆ ಕೆಂಪು ವಸ್ತ್ರ ದಾನ ಮಾಡಿ.

ಮಕರ(Capricorn): ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಅಲ್ಪಶ್ರಮದಿಂದ ಕಾರ್ಯ ಸಾಧನೆ ಆಗುವುದು. ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಸರ್ಕಾರಿ ಕೆಲಸಗಳು ಸುಸೂತ್ರವಾಗಿ ಜರುಗಿ ಮನಸ್ಸಿಗೆ ನೆಮ್ಮದಿ. ಆಂಜನೇಯ ಧ್ಯಾನ ಮಾಡಿ. 

Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

ಕುಂಭ(Aquarius): ವಿರೋಧಿಗಳ ಉಪದ್ರವ ಹೆಚ್ಚಬಹುದು. ಸರಿಯಾಗಿ ತಾಕುವಂತ ಪ್ರತಿಕ್ರಿಯೆ ನೀಡಿ. ಇಲ್ಲಿದದ್ದಲ್ಲಿ ಅವರ ತೊಂದರೆ ಅಸಹನೀಯವಾಗಬಹುದು. ವೃಥಾ ಅಪವಾದ ಕೇಳಿ ಬರಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ಮಾತಿನ ಚಕಮಕಿ ಆಗಲಿದೆ. ರಾಮ ಧ್ಯಾನ ಮಾಡಿ. 

ಮೀನ(Pisces): ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಮತ್ತೊಬ್ಬರ ಪ್ರಗತಿ ಕಂಡು ಕರುಬುವುದನ್ನು ಬಿಡಿ. ನಿಮ್ಮ ಪ್ರಗತಿಯ ಕಡೆ ಹೆಚ್ಚಿನ ಗಮನ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದ್ದರೂ ಖರ್ಚೂ ಹೆಚ್ಚಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 
 

click me!