Daily Horoscope: ಮೇಷ, ವೃಷಭ, ಧನಸ್ಸು, ಮೀನಕ್ಕೆ ಅದೃಷ್ಟದ ದಿನ

By Suvarna NewsFirst Published Feb 26, 2022, 5:00 AM IST
Highlights

26 ಫೆಬ್ರವರಿ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನ ರಾಶಿಯವರ ವಂಚನೆ ಬಯಲಿಗೆ

ಮೇಷ(Aries): ಮಂಗಳ ಗೋಚಾರದಿಂದಾಗಿ ಕೈಯಿಟ್ಟಲೆಲ್ಲ ಚಿನ್ನವಾಗುವ ದಿನವಿದು. ಹೂಡಿಕೆಗೆ, ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಶುಭ ದಿನ. ಹಣದ ವಿಷಯದಲ್ಲಿ ಸಾಕಷ್ಟು ಕಾಡಿಸಿದ್ದ ಹಣವೂ ಕೈಗೆ ಬರಲಿದೆ. ಕುಟುಂಬ ಸದಸ್ಯರ ವಿಚಾರವಾಗಿ ಕಡೆಗಣನೆ ಬೇಡ. ಎಲ್ಲರನ್ನೂ ಪ್ರೀತಿಯಿಂದ ನಡೆಸಿಕೊಳ್ಳಿ. ಕಪ್ಪು ಧಾನ್ಯ ದಾನ ಮಾಡಿ.  

ವೃಷಭ(Taurus): ಅದೃಷ್ಟದ ದಿನ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಬರಲಿದೆ. ಅವಿವಾಹಿತರಿಗೆ ಕಂಕಣಬಲ ಸಿಗಲಿದೆ. ಇನ್ನು ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮ ಅವಕಾಶಗಳು, ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶ ದೊರಕಲಿದೆ. ಹೊಸ ಸ್ನೇಹಿತರು ಸಿಕ್ಕು ಕೆಲಸ ಕಾರ್ಯಗಳು ಸುಗಮವಾಗಲಿವೆ. ಶನಿ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ನೀವು ಪರರಿಗೆ ಮಾಡಿರುವ ವಂಚನೆ ಬಯಲಿಗೆ ಬರುವ ಸಾಧ್ಯತೆ. ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದಲ್ಲಿ ಮತ್ತಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾದೀತು. ತೆಗೆದುಕೊಂಡ ಸಣ್ಣಪುಟ್ಟ ಸಾಲವನ್ನು ಇಂದೇ ತೀರಿಸಿ. ನಂತರವಷ್ಟೇ ಕಾರ್ಯಗಳಲ್ಲಿ ಧನಲಾಭ ಮಾಡಬಹುದು. ಅಶ್ವತ್ಥ ಮರಕ್ಕೆ ನಮಸ್ಕರಿಸಿ. 

ಕಟಕ(Cancer): ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ. ಹಣ ಎಲ್ಲೆಲ್ಲಿ ವ್ಯರ್ಥ ಪೋಲಾಗುತ್ತಿದೆ ಎಂಬ ಬಗ್ಗೆ ಅವಲೋಕನ ಅಗತ್ಯ. ದೊಡ್ಡದೊಂದು ಕನಸಿಗೆ ಕೈ ಹಾಕುವ ಮುನ್ನ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಹತ್ತಿಯೇ ಮೇಲೆ ಹೋಗಬೇಕೆಂಬುದು ನೆನಪಿಡಿ. ಕಪ್ಪು ವಸ್ತ್ರ ದಾನ ಮಾಡಿ. 

ಸಿಂಹ(Leo): ನಿಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ. ಮನಸ್ಸು ಚಂಚಲವಾಗಿರುವುದು. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಎಲ್ಲರೂ ನಿಮ್ಮ ಮಾತಿನಂತೆ ನಡೆಯಬೇಕು ಎಂಬ ಪ್ರವೃತ್ತಿಯಿಂದ ಅಸಹನೆ ಹೆಚ್ಚಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Mars Transit: ಮಂಗಳ ಗೋಚಾರದಿಂದ ಈ ನಾಲ್ಕು ರಾಶಿಗೆ ಲಾಟ್ರಿ

ಕನ್ಯಾ(Virgo): ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ, ನಿಮ್ಮ ಮೇಲೆ ಅಧಿಕ ಕೆಲಸದ ಒತ್ತಡ ಹೇರುವುದನ್ನು ತಪ್ಪಿಸಿ. ನಿಮ್ಮ ತಂದೆ ವಿಚಾರದಲ್ಲಿ ಮನಸ್ಸಿಗೆ ಬೇಸರ ಆಗಬಹುದು. ಕೋಪ ಹೆಚ್ಚಾಗಬಹುದು. ಆಸೆ ಹೆಚ್ಚಬಹುದು. ತಾಳ್ಮೆಯನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಿ. ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ಒಡಹುಟ್ಟಿದವರೊಂದಿಗಿನ ವಿವಾದಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು.  ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಗೆಳೆಯರ ಭೇಟಿಯಲ್ಲಿ ವಾಗ್ವಾದವಾಗಬಹುದು. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ವೃಶ್ಚಿಕ(Scorpio): ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಅಂದುಕೊಂಡದ್ದನ್ನು ಮಾಡುವುದು ಸಾಧ್ಯವಾಗುತ್ತದೆ. ಧನಾನುಕೂಲಗಳು ಚೆನ್ನಾಗಿರುತ್ತದೆ. ಗುರುವಿನ ಮಾರ್ಗದರ್ಶನದಲ್ಲಿ ಮುಂದಡಿ ಇಡಿ. ಸ್ನೇಹಿತರ ಸಹಕಾರ ಸಿಗಲಿದೆ. ಶಿವ ಶತನಾಮಾವಳಿ ಹೇಳಿ.

Life Lessons: ಮಹಾದೇವನ ಜೀವನದಿಂದ ನಾವು ಕಲಿಯಲೇಬೇಕಾದ ಕನಿಷ್ಠ ವಿಷಯಗಳಿವು..

ಧನುಸ್ಸು(Sagittarius): ಕೊಟ್ಟ ಸಾಲ ವಾಪಸ್ ಬರಲಿದೆ. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಶುಭಸುದ್ದಿ ಇಂದು ಕೇಳಿ ಬರಲಿದೆ. ಸಂಗಾತಿಯ ಸಲಹೆ ಪಡೆಯದೆ ಯಾವೊಂದು ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ದಂಪತಿಗೆ ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಮಕರ(Capricorn): ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಈ ಸಮಯದಲ್ಲಿ ನೀವು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಿ. ಸ್ವಂತ ಉದ್ಯೋಗದಲ್ಲಿರುವವರು ಅಭಿವೃದ್ಧಿ ಪಡೆಯುವಿರಿ. ದೈವಕಾರ್ಯವನ್ನು ಮಾಡುತ್ತೀರಿ. ದೇವರ ಮೇಲೆ ನಂಬಿಕೆ ಬರುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ಶನಿಯನ್ನು ಸ್ಮರಿಸಿ. 

ಕುಂಭ(Aquarius): ನೀವು ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿದರೆ, ನಿಮ್ಮ ವೃತ್ತಿಪರ ಜೀವನವು ಭವಿಷ್ಯದಲ್ಲಿ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಆಲಸ್ಯ(laziness) ಕಾಡಬಹುದು. ವಿವಾದಗಳಿಂದ ದೂರವಿರಿ. ಆರೋಗ್ಯ ಸಮಸ್ಯೆ ಹೈರಾಣಾಗಿಸಬಹುದು. ಎಳ್ಳೆಣ್ಣೆ ದಾನ ಮಾಡಿ.

ಮೀನ(Pisces): ಹಣದ ವಿಷಯದಲ್ಲಿ ಅದೃಷ್ಟದ ದಿನ. ಒಳ್ಳೆಯ ಸುದ್ದಿ ಕೇಳುವುದರಿಂದ ದಿನ ಪ್ರಾರಂಭವಾಗುವುದು. ಹೀಗಾಗಿ ದಿನವಿಡೀ ಖುಷಿಯಾಗಿರುವಿರಿ. ಪಟ್ಟ ಪರಿಶ್ರಮಕ್ಕೆ ಅಭಿವೃದ್ಧಿ, ಲಾಭ ಉಂಟಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಫಲವಿದೆ. ಆಂಜನೇಯ ಸ್ಮರಣೆ ಮಾಡಿ. 

click me!