ಪ್ರೀತಿಸಿ ಮದುವೆಯಾದ ಪತಿಗಾಗಿ ಪತ್ನಿ ಧರಣಿ: ಬೇರೆ ಜಾತಿ ಕಾರಣಕ್ಕೆ ಮತ್ತೊಂದು ವಿವಾಹವಾದ ಗಂಡ..!

Published : Jul 16, 2022, 01:19 PM IST
ಪ್ರೀತಿಸಿ ಮದುವೆಯಾದ ಪತಿಗಾಗಿ ಪತ್ನಿ ಧರಣಿ: ಬೇರೆ ಜಾತಿ ಕಾರಣಕ್ಕೆ ಮತ್ತೊಂದು ವಿವಾಹವಾದ ಗಂಡ..!

ಸಾರಾಂಶ

ಪತಿ ಮಂಜುನಾಥ ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ, ನನ್ನ ಪತಿ ನನಗೆ ಬೇಕೆಂದು ಕಣ್ಣೀರಿಡುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿರುವ ಸುಧಾ

ಚಿಕ್ಕಬಳ್ಳಾಪುರ(ಜು.16):  ಪ್ರೀತಿಸಿ ಮದುವೆಯಾದ ಪತ್ನಿ ಇದೀಗ ತನ್ನ ಪತಿಗಾಗಿಯೇ ಎರಡು ದಿನಗಳಿಂದ ಪತಿಯ ಮನೆ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯ ಸಾದೇನಹಳ್ಳಿಯಲ್ಲಿ ನಡೆದಿದೆ. ಪತಿಗಾಗಿ ಧರಣಿ ನಡೆಸುತ್ತಿರುವ ಸುಧಾ(ಹೆಸರು ಬದಲಾಯಿಸಲಾಗಿದೆ) ಎಂಬುವರು ತನ್ನ ಪತಿ ಮಂಜುನಾಥ ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ, ನನ್ನ ಪತಿ ನನಗೆ ಬೇಕೆಂದು ಕಣ್ಣೀರಿಡುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿದ್ದಾಳೆ.

ಗೌರಿಬಿದನೂರು ಕಸಬಾ ಹೋಬಳಿಯ ಶಂಭುಕ ನಗರದ ನಿವಾಸಿಯಾದ ಸುಧಾ 4 ವರ್ಷಗಳ ಹಿಂದೆ ಸಾದೇನಹಳ್ಳಿಯ ಮಂಜುನಾಥನನ್ನು ಪ್ರೀತಿಸಿ ವಿವಾಹ ಆಗಿದ್ದಳು. ಆದರೆ ಇತ್ತೀಚೆಗೆ ಮಂಜುನಾಥ ಮನೆ ಕಡೆಯವರು ಸುಧಾ ಪರಿಶಿಷ್ಟ ಜಾತಿಯವಳು ಎಂಬ ಕಾರಣಕ್ಕೆ ಈತನಿಗೆ ಬೇರೊಂದು ಮದುವೆ ಮಾಡಿ ಚಿಕ್ಕಬಳ್ಳಾಪುರದಲ್ಲಿ ಮನೆ ಮಾಡಿ ಇಟ್ಟಿದ್ದಾರೆ. ಇದರ ವಿರುದ್ಧ ಮೊದಲ ಪತ್ನಿ ಸುಧಾ ಪತಿಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾಳೆ.

ಅಮ್ಮನ ಹುಟ್ಟುಹಬ್ಬದಂದು ಸೂಸೈಡ್‌ ಮಾಡಿಕೊಂಡ ಮಗ, ವಿಶ್ವದ ಬೆಸ್ಟ್‌ ಗಿಫ್ಟ್‌ ಎಂದು ಡೆತ್‌ನೋಟ್‌!

ಮಂಜುನಾಥ ಬೇರೊಂದು ಯುವತಿಯ ಜೊತೆ ಮದುವೆ ಆಗಿದ್ದು ಗಂಡು ಮಗು ಸಹ ಆಗಿದೆ. ಅವರನ್ನು ಅವರ ಪೋಷಕರು ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ಮನೆ ಮಾಡಿ ಇಟ್ಟಿದ್ದಾರೆಂದು ಧರಣಿ ನಡೆಸುತ್ತಿರುವ ಪವಿತ್ರ ಮಾಧ್ಯಮಗಳಿಗೆ ತಿಳಿಸಿದ್ದಾಳೆ. ವಿಷಯ ತಿಳಿದು ಕೂಡಲೇ ಮಂಚೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪವಿತ್ರ ಜೊತೆ ಚರ್ಚೆ ನಡೆಸಿದ್ದು ಪವಿತ್ರ ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!