
ಚಿಕ್ಕಮಗಳೂರು (ಜ.12): ಕ್ರಿಕೆಟ್ ಪಂದ್ಯ ಆಡಿ ಕುಳಿತಿದ್ದ ಪಶು ವೈದ್ಯ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಮೃತ ದುರ್ದೈವಿ.
ಪಶು ಇಲಾಖೆಯಿಂದ ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಮೆಂಟ್. ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿದ್ದು, ಕೊಡಗು ಕ್ರಿಕೆಟ್ ತಂಡದಲ್ಲಿ ಇಂದು ಒಂದು ಪಂದ್ಯ ಆಟವಾಡಿದ್ದ ಶಿವಪ್ಪ. ಪಂದ್ಯವಾಡಿ ದಣಿದು ವಿಶ್ರಾಂತಿಗೆ ಕುಳಿತಿದ್ದಾಗ ವೈದ್ಯನಿಗೆ ಹೃದಯಾಘಾತ. ಕುಳಿತಲ್ಲೇ ಕುಸಿದುಬಿದ್ದು ಸಾವನ್ನಪ್ಪಿ ವೈದ್ಯ. ವೈದ್ಯರ ಸಾವಿನಿಂದ ಕ್ರಿಕೆಟ್ ಟೂರ್ನಮೆಂಟ್ ಸ್ಥಗಿತಗೊಳಿಸಲಾಯಿತು.
ಸ್ಮೋಕ್ ಮಾಡೋರಿಗೆ ಮಾತ್ರವಲ್ಲ, ಸಿಗರೇಟ್ ಹೊಗೆ ಕುಡಿಯೋರಿಗೂ ಹಾರ್ಟ್ ಅಟ್ಯಾಕ್ ಆಗ್ಬಹುದು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ