ಸಂಕ್ರಾಂತಿ ಹಬ್ಬಕ್ಕೆ ಗಂಡ ಒಡವೆ ಕೊಡಿಸದ್ದಕ್ಕೆ ಮನನೊಂದು ಜೀವ ಕಳ್ಕೊಂಡ ಪತ್ನಿ!

Published : Jan 17, 2025, 07:37 PM IST
ಸಂಕ್ರಾಂತಿ ಹಬ್ಬಕ್ಕೆ ಗಂಡ ಒಡವೆ ಕೊಡಿಸದ್ದಕ್ಕೆ ಮನನೊಂದು ಜೀವ ಕಳ್ಕೊಂಡ ಪತ್ನಿ!

ಸಾರಾಂಶ

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸಲಿಲ್ಲವೆಂಬ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯೊಂದಿಗೆ ಗಲಾಟೆ ನಡೆದ ಬಳಿಕ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.17): ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣ ಗೃಹಿಣಿಯೋರ್ವಳ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೊಮ್ಮನಹಳ್ಳಿಯ ಗಾರೇಪಾಳ್ಯದಲ್ಲಿ ನಡೆದಿದೆ.

ಅಕ್ಷತಾ(24), ಮೃತ ದುರ್ದೈವಿ. ಮೂಲತಃ ಉತ್ತರ ಪ್ರದೇಶದವರಾದ ಅಕ್ಷತಾ-ಧೀರಜ್ ದಂಪತಿ ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಬೊಮ್ಮನಹಳ್ಳಿಯ ಗಾರೇಪಾಳ್ಯದಲ್ಲಿ ವಾಸವಾಗಿದ್ದರು. ಮೃತ ಮಹಿಳೆಯ ಪತಿ ಪಾನಿಪೂರಿ ಮಾರಾಟ ಜೀವನ ಸಾಗಿಸುತ್ತಿದ್ದ. ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸುವಂತೆ ಕೇಳಿದ್ದ ಪತ್ನಿ. ಆದರೆ ಒಡವೆಗೆ ಹಣ ಇಲ್ಲವೆಂದು ನಿರಾಕರಿಸಿದ್ದ ಪತಿ. ಅಷ್ಟಕ್ಕೆ ಸುಮ್ಮನಾಗದ ಅಕ್ಷತಾ. ಪದೇಪದೆ ಗಂಡನೊಂದಿಗೆ ಈ ವಿಚಾರವಾಗಿ ಕೇಳಿದ್ದಾಳೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

ಇದನ್ನೂ ಓದಿ: ದಪ್ಪ ಇರೋದಕ್ಕೆ ಮದುವೆಯಾಗಲೊಪ್ಪದ ಯುವತಿಯರು, ಮನನೊಂದು ಜೀವ ಕಳೆದುಕೊಂಡ ಯುವಕ!

ಪತ್ನಿಯ ಒಡವೆ ಆಸೆಗೆ ಬೇಸತ್ತಿದ್ದ ಪತಿ. ಪ್ರತಿದಿನ ಒಡವೆ ವಿಚಾರವಾಗಿ ಜಗಳ ಹಿನ್ನೆಲೆ ಕುಡಿದು ಬಂದು ಪತ್ನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಇದರಿಂದ ಮನನೊಂದು ಅಕ್ಷತಾ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನೆ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿರುವ ಬೊಮ್ಮನಹಳ್ಳಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!