ಆನ್‌ಲೈನ್ ಗೇಮ್‌ ಸಾಲದ ಸುಳಿಗೆ ಸಿಲುಕಿ ಯುವಕರಿಬ್ಬರು ಆತ್ಮಹತ್ಯೆ

Published : Jul 13, 2024, 09:30 AM IST
ಆನ್‌ಲೈನ್ ಗೇಮ್‌ ಸಾಲದ ಸುಳಿಗೆ ಸಿಲುಕಿ ಯುವಕರಿಬ್ಬರು ಆತ್ಮಹತ್ಯೆ

ಸಾರಾಂಶ

ಬೆಳಗಾವಿ ವಡಗಾಂವಿ ಪ್ರದೇಶದ ಆನಂದ ನಗರದ ವಿಕ್ರಮ್ ಸಿಂಗ್ ಧಾರಾಸಿಂಗ್ ಶೇಖಾವತ, ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ ಆತ್ಮಹತ್ಯೆಗೆ ಶರಣಾದ ಯುವಕರು. 

ಹುಬ್ಬಳ್ಳಿ/ಬೆಳಗಾವಿ(ಜು.13):  ಆನ್‌ಲೈನ್ ಗೇಮ್‌ ಗೀಳಿನಿಂದ ಹಣ ಕಳೆದುಕೊಂಡಿದ್ದ ಯುವಕರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ವಡಗಾಂವಿ ಪ್ರದೇಶದ ಆನಂದ ನಗರದ ವಿಕ್ರಮ್ ಸಿಂಗ್ ಧಾರಾಸಿಂಗ್ ಶೇಖಾವತ (26), ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ (22) ಆತ್ಮಹತ್ಯೆಗೆ ಶರಣಾದ ಯುವಕರು. 

ರಾಜಸ್ಥಾನ ಮೂಲಕ ಯುವಕ ವಿಕ್ರಂ ಸಿಂಗ್‌ ಆನ್‌ಲೈನ್‌ ಗೇಮ್‌ ಹವ್ಯಾಸ ಬೆಳೆಸಿಕೊಂಡು ಅದಕ್ಕಾಗಿ ಸಾಲ ಮಾಡಿ, ಸಾಲ ಮರು ಪಾವತಿಸಲಾಗದೇ ಮನನೊಂದು ಮನೆಯ ಕೋಣೆಯಲ್ಲಿ ಟವಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಲಬಾಧೆ ತಾಳದೇ ಬೆಳಗಾವಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ!

ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್) 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಕೇಶ ಆನ್‌ಲೈನ್‌ ಗೇಮಿಂಗ್‌ ಗೀಳು ಹಚ್ಚಿಕೊಂಡು ಅದರಲ್ಲಿ ದುಡ್ಡು ಕಳೆದುಕೊಂಡಿದ್ದ. ಈ ಕಾರಣದಿಂದಾಗಿಯೇ ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ