ಯಾದಗಿರಿ: ಪ್ರಚೋದನಕಾರಿ ರೀಲ್ಸ್‌, ಯುವಕರಿಬ್ಬರ ಬಂಧನ

Published : Aug 10, 2023, 09:45 PM IST
ಯಾದಗಿರಿ: ಪ್ರಚೋದನಕಾರಿ ರೀಲ್ಸ್‌, ಯುವಕರಿಬ್ಬರ ಬಂಧನ

ಸಾರಾಂಶ

'ಪೈಗಂಬರ್‌ ಬಗ್ಗೆ ಯಾರಾದರೂ ಅವಹೇಳನ ಮಾಡಿದರೆ ರುಂಡವನ್ನು ಮುಂಡದಿಂದ ಕತ್ತರಿಸಿ ಹಾಕಿ, ಮುಸ್ಲಿಂ ಯುವತಿಯರನ್ನು ಸೆಳೆಯುವವರು ಗಂಡಸರೇ ಆಗಿದ್ದರೆ ಬನ್ನಿ, ಹದಿನೈದು ನಿಮಿಷಗಳಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ, ಕಾಫಿರರನ್ನು ನರಕಕ್ಕೆ ಕಳುಹಿಸುತ್ತೇವೆ..’’ ಎಂಬುದಾಗಿ ರೀಲ್ಸ್‌ ಮಾಡಿ ಹಂಚಿಕೊಂಡಿದ್ದ ಬಂದಿತ ಆರೋಪಿಗಳು. 

ಯಾದಗಿರಿ(ಆ.10):  ಇಸ್ಲಾಂ ಧರ್ಮಗುರು ಪೈಗಂಪರ್‌ ವಿರುದ್ಧ ಮಾತನಾಡಿದರೆ ಅಂತಹವರ ರುಂಡವನ್ನು ಮುಂಡದಿಂದ ಕತ್ತರಿಸಿ ಬೇರ್ಪಡಿಸುವಂತೆ ಹಾಗೂ ಕಾಫಿರರನ್ನ ನರಕಕ್ಕೆ ಕಳುಹಿಸುವಂತೆ ದ್ವೇಷಪೂರಿತ ಹೇಳಿಕೆಗಳನ್ನು ಇನ್ಸ್ಟಾಗ್ರಾಂ ರೀಲ್ಸ್‌ನಲ್ಲಿ ಹರಿಬಿಟ್ಟಿದ್ದ ಯಾದಗಿರಿಯ ಯುವಕರಿಬ್ಬರನ್ನು ಐಪಿಸಿ ಕಲಂ 153 ಹಾಗೂ ಐಪಿಸಿ 505/2 ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಯಾದಗಿರಿ ಸಮೀಪದ ಆಶನಾಳ್‌ ಗ್ರಾಮದ ಅಕ್ಬರ್‌ ಸೈಯ್ಯದ್‌ ಬಹದ್ದೂರ್‌ ಅಲಿ (23) ಹಾಗೂ ಹತ್ತಿಕುಣಿ ಕ್ರಾಸ್‌ ನಿವಾಸಿ ಮೊಹ್ಮದ್‌ ಅಯಾಜ್‌ (21)ರನ್ನು ನಗರದ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

‘ಪೈಗಂಬರ್‌ ಬಗ್ಗೆ ಯಾರಾದರೂ ಅವಹೇಳನ ಮಾಡಿದರೆ ರುಂಡವನ್ನು ಮುಂಡದಿಂದ ಕತ್ತರಿಸಿ ಹಾಕಿ, ಮುಸ್ಲಿಂ ಯುವತಿಯರನ್ನು ಸೆಳೆಯುವವರು ಗಂಡಸರೇ ಆಗಿದ್ದರೆ ಬನ್ನಿ, ಹದಿನೈದು ನಿಮಿಷಗಳಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ, ಕಾಫಿರರನ್ನು ನರಕಕ್ಕೆ ಕಳುಹಿಸುತ್ತೇವೆ..’’ ಎಂಬುದಾಗಿ ರೀಲ್ಸ್‌ ಮಾಡಿ ಹಂಚಿಕೊಂಡಿದ್ದರು. ಅಕ್ಬರ್‌ ಖಾಸಗಿ ಕಂಪನಿ ಉದ್ಯೋಗಿ, ಮೊಹ್ಮದ್‌ ಅಯಾಜ್‌ ಚಿಕನ್‌ ವ್ಯಾಪಾರಿ.

ಚಿಕ್ಕಬಳ್ಳಾಪುರ: ಬಂಧಿತರ ಬಳಿ ಇದ್ದ ಹಣ ದೋಚಿದ ಪೊಲೀಸರು

ಕೋಮುಭಾವನೆ ಕೆರಳಿಸುವ ‘ರೀಲ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇವರಿಬ್ಬರು, ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಟ್ಟುಕೊಳ್ಳುವವರನ್ನು ನರಕಕ್ಕೆ ಕಳುಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇವರು ಮಾಡಿದ್ದ ‘ರೀಲ್ಸ್‌’ ಅನ್ನು ಖಂಡಿಸಿ ನೀರಜ ಅತ್ರಿ ಎನ್ನುವವರು ಟ್ವೀಟ್‌ ಮುಖಾಂತರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಟ್ವೀಟ್‌ ಪ್ರಧಾನಿ ಮೋದಿ ಅವರ ಖಾತೆಗೆ ಟ್ಯಾಗ್‌ ಮಾಡಲಾಗಿತ್ತು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಥಳೀಯ ಪೊಲೀಸ್‌ ಇಲಾಖೆ ಗಮನಕ್ಕೆ ತಂದಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಆರೋ​ಪಿ​ಗ​ಳನ್ನು ಬಂಧಿ​ಸ​ಲಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ