ಬೆಂಗಳೂರು: ಸ್ನೇಹಿತನ ಹೆಂಡತಿಯ ಜೀವ ಉಳಿಸಲು ಕಳ್ಳತನ, ಇಬ್ಬರ ಬಂಧನ

Published : Jul 23, 2024, 01:34 PM ISTUpdated : Jul 23, 2024, 02:03 PM IST
ಬೆಂಗಳೂರು: ಸ್ನೇಹಿತನ ಹೆಂಡತಿಯ ಜೀವ ಉಳಿಸಲು ಕಳ್ಳತನ, ಇಬ್ಬರ ಬಂಧನ

ಸಾರಾಂಶ

ಸ್ನೇಹಿತ ಪತ್ನಿಗೆ ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹೀಗಾಗಿ ಸತೀಶ್ ಜೊತೆ ಸೇರಿ ಅಶೋಕ್ ಕಳ್ಳತನಕ್ಕಿಳಿದಿದ್ದನು. ಸದ್ಯ ಆರೋಪಿಗಳಿಂದ 10 ಲಕ್ಷ ಬೆಲೆ ಬಾಳುವ 8 ಬೈಕ್‌ಗಳನ್ನ ಜಪ್ತಿ ಮಾಡಿಕೊಂಡ ಪೊಲೀಸರು.   

ಬೆಂಗಳೂರು(ಜು.23):  ಸ್ನೇಹಿತನ ಹೆಂಡತಿಯ ಜೀವ ಉಳಿಸಲು ಕಳ್ಳತನಕ್ಕಿಳಿದ ಘಟನೆ ನಗರದಲ್ಲಿ ನಡೆದಿದೆ. ಕಳ್ಳತನಕ್ಕಿಳಿದಿದ್ದ ಕಳ್ಳ ಹಾಗೂ ಮತ್ತೊಬ್ಬನನ್ನ ಬಂಧನ ಪೊಲೀಸರು ಬಂಧಿಸಿದ್ದಾರೆ. ಸತೀಶ್, ಅಶೋಕ್ ಬಂಧಿತ ಆರೋಪಿಗಳಾಗಿದ್ದಾರೆ. 

ಬಂಧಿತ ಆರೋಪಿಗಳು ರಾತ್ರಿ ಹೊತ್ತು ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಪೈಕಿ ಅಶೋಕನ ಸ್ನೇಹಿತನ ಹೆಂಡತಿಗೆ ಸ್ತನ ಕ್ಯಾನ್ಸರ್ ಇತ್ತು. ಗೆಳೆಯನ ಹೆಂಡತಿ ಅಶೋಕನಿಗೆ ತಾಯಿ ಪ್ರೀತಿ ತೋರಿಸಿ ಸ್ವಂತ ಅಣ್ಣನಂತೆ ನೋಡಿಕೊಳ್ಳುತ್ತಿದ್ದಳಂತೆ. ಇದರಿಂದ ಆರೋಪಿ ಅಶೋಕ ಸಾಕಷ್ಟು ನೊಂದಿದ್ದನಂತೆ.  

ಧಾರವಾಡ: ಲೇಔಟ್ ವಿಚಾರಕ್ಕೆ ಯುವಕನ ಬರ್ಬರ ಕೊಲೆ?

ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಬೇಕಾಗಿತ್ತು. ಹೀಗಾಗಿ ಸತೀಶ್ ಜೊತೆ ಸೇರಿ ಅಶೋಕ್ ಕಳ್ಳತನಕ್ಕಿಳಿದಿದ್ದನು.  ಸದ್ಯ ಆರೋಪಿಗಳಿಂದ 10 ಲಕ್ಷ ಬೆಲೆ ಬಾಳುವ 8 ಬೈಕ್‌ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್