
ಹೈದರಾಬಾದ್(ಅ. 11) ಕರ್ನಾಟಕ(Karnataka) ಮಾತ್ರವಲ್ಲ ಹೈದಾರಾಬಾದಿನಲ್ಲಿ ( Hyderabad) ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಿಕ್ಕಿರುವ ಹಣ ನೋಡಿ ಅಧಿಕಾರಿಗಳ ಜತೆ ಸೋಶಿಯಲ್ ಮೀಡಿಯಾ(Social Media) ಕಂಗಾಲಾಗಿದೆ.
ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿರುವಂತೆ ಲೆಕ್ಕವಿಲ್ಲದ 550 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಹೈದರಾಬಾದ್ ಮೂಲದ ಫಾರ್ಮಾ ಕಂಪನಿಗೆ ಸೇರಿದ 142.87 ಕೋಟಿ ರೂ. ವಶಕ್ಕೆ ಪಡೆದಿದ್ದು ಪೋಟೋಗಳನ್ನು ಕಂಡವರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಗಳಲ್ಲಿಯೂ ಈ ಕಂಪನಿ ತನ್ನ ಶಾಖೆ ಹೊಂದಿದೆ ಎಂಬ ಮಾಹಿತಿ ಇದೆ.
ಕೋಟಿ ಕೋಟಿ ಒಡೆಯನಾದರೂ ಬಾಡಿಗೆ ಮನೆಯಲ್ಲಿದ್ದ ಉಮೇಶ
ಆದರೆ ಎಲ್ಲರ ಗಮನವನ್ನು ಸೆಳೆದಿರುವುದು ಕಬೋರ್ಡ್ ತುಂಬಾ ತುಂಬಿರುವ ನೋಟಿನ ಕಂತೆಗಳು. ಹಣವನ್ನೇ ಈ ರೀತಿ ಕಪಾಟಿನಲ್ಲಿ ತುಂಬಿದರೆ ಇವರು ಬಟ್ಟೆ ಎಲ್ಲಿ ತುಂಬಿಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಫಾರ್ಮಾ ಕಂಪನಿ ಇಷ್ಟೊಂದು ಹಣ ಕ್ಯಾಶ್ ನಲ್ಲಿ ಯಾಕೆ ವ್ಯವರಿಸುತ್ತಿದೆ ಎಂಬುದು ಅರ್ಥವಾಗಲ್ಲ ಎಂದಿದ್ದಾರೆ.
ನಾಲ್ಕು ದಿನಗಳ ಹಿಂದೆ ಕರ್ನಾಟಕದಲ್ಲಿಯೂ ಆದಾಯ ತೆರಿಗೆ ಅಧಿಕಾರಿಗಳು ಹಲವು ಕಡೆ ದಾಳಿ ಮಾಡಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಂದು ಕರೆಸಿಕೊಂಡಿದ್ದ ಉಮೇಶ್ ಎಂಬುವರಿಗೆ ಸೇರಿದ್ದ ಆಸ್ತಿಗಳ ಮೇಲೂ ದಾಳಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ