ಗೋಕರ್ಣ ಕಡಲಲ್ಲಿ ಮುಳುಗಿ ಬೆಂಗಳೂರಿನ ಮೂವರ ದುರ್ಮರಣ

Published : Jan 21, 2021, 07:30 PM IST
ಗೋಕರ್ಣ ಕಡಲಲ್ಲಿ ಮುಳುಗಿ ಬೆಂಗಳೂರಿನ ಮೂವರ ದುರ್ಮರಣ

ಸಾರಾಂಶ

ಈಜಲು ತೆರಳಿದ್ದ ಮೂವರು ಪ್ರವಾಸಿಗರ ಸಾವು/ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಘಟನೆ/ ಸುಮಾ(21), ತಿಪ್ಪೇಶ(20) ಹಾಗೂ ರವಿ(35) ಮೃತರು/ ಮೃತರು ಬೆಂಗಳೂರಿನ ಹೆಬ್ಹಗೋಡಿಯ ತಿರುಪಾಳ್ಯ ಮೂಲದವರು

ಕಾರವಾರ(ಜ.  21)  ಈಜಲು ತೆರಳಿದ್ದ ಮೂವರು ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ.  ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ದುರ್ಘಟನೆ ನಡೆದಿದೆ. ಸುಮಾ(21), ತಿಪ್ಪೇಶ(20) ಹಾಗೂ ರವಿ(35) ಮೃತಪಟ್ಟಿದ್ದಾರೆ.

ಮೃತರು ಬೆಂಗಳೂರಿನ ಹೆಬ್ಹಗೋಡಿಯ ತಿರುಪಾಳ್ಯ ಮೂಲದವರು. 16 ಜನ ದೇವರ ದರ್ಶನಕ್ಕೆ ಗೋಕರ್ಣಕ್ಕೆ ಆಗಮಿಸಿದ್ದರು. ದರ್ಶನದ ನಂತರ ಕಡಲ ತೀರದಲ್ಲಿ ಈಜಲು ತೆರಳಿದಾಗ ಅವಘಡ ಸಂಭವಿಸಿದೆ. ಮುಳುಗುತ್ತಿದ್ದ ಇಬ್ಬರನ್ನು ಪ್ರವಾಸಿ ಬೋಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಧಾರವಾಡ ಅಪಘಾತ ಘೋರ; ಬಾಲ್ಯ ಗೆಳತಿಯರೆಲ್ಲ ಮಸಣಕ್ಕೆ

ಸಮುದ್ರ ತೀರದಲ್ಲಿ ಈಜುವ ಮುನ್ನ ಎಚ್ಚರಿಕೆ ಬೋರ್ಡ್ ಗಳನ್ನು ಹಾಕಿರುತ್ತಾರೆ. ಪ್ರವಾಸಿಗರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಒಮ್ಮೊಮ್ಮೆ ಇಂಥ ಅವಘಡಗಳು ಸಂಭವಿಸಿ ಬಿಡುತ್ತದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!