
ಕಾರಟಗಿ(ಜು.02): ಸರ್ಕಾರಿ ಶಾಲೆಯ ಶಿಕ್ಷಕನೋರ್ವ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ, ಮಕ್ಕಳೊಂದಿಗೂ ಅಸಭ್ಯವಾಗಿ ವರ್ತಿಸಿದ ವಿಡಿಯೋಗಳು ಬಯಲಾಗಿದ್ದು, ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ತಕ್ಷಣ ಸೇವೆಯಿಂದ ಅಮಾನತು ಮಾಡಿದೆ.
ಪಟ್ಟಣದ ಜೆಪಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ ಅಜರುದ್ದೀನ್ ಎಂಬ ಈ ಶಿಕ್ಷಕ ಪಕ್ಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.
ಮಹಿಳೆ ಜತೆ ರಾಸಲೀಲೆ, ಮಕ್ಕಳ ಗುಪ್ತಾಂಗ ಮುಟ್ಟಿ ಆನಂದ: ಶಿಕ್ಷಕನ ಕಾಮದಾಟ ಬಯಲು ಮಾಡಿದ ಚಿಪ್
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ನಿತ್ಯ ರಾತ್ರಿ ಆಟ- ಪಾಠದ ನೆಪದಲ್ಲಿ ನಂತರ ಅವರ ಬಟ್ಟೆಗಳನ್ನು ಕಳಚಲು ಮುಂದಾಗುತ್ತಾನೆ. ಇತರೆ ಮಕ್ಕಳಿಂದ ಮಕ್ಕಳ ಬಟ್ಟೆ ಕಳಚಲು ಸೂಚಿಸಿ ಅವರ ಅಂಗಾಂಗಗಳ ಮೇಲೆ ಕೈಯಾಡಿಸಿ ವಿಕೃತ ಸಂತೋಷ ಪಡುತ್ತಿರುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಸಿಂಧನೂರು ಬಿಇಒ ಶರಣಪ್ಪ ವಟಗಲ್ ತಿಳಿಸಿದ್ದಾರೆ.
‘ಕನ್ನಡಪ್ರಭ’ಕ್ಕೆ ಲಭ್ಯವಾದ ವಿಡಿಯೋಗಳಲ್ಲಿ ಈ ಶಿಕ್ಷಕ ಮಕ್ಕಳೊಂದಿಗಿನ ಆಟ ಚೆಲ್ಲಾಟ ಮತ್ತು ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆ ಮಾಡಿದ್ದಾನೆ. ರಾಸಲೀಲೆಯ ಕ್ಷಣಗಳನ್ನು ಸ್ವತಃ ಶಿಕ್ಷಕನೇ ಸೆಲ್ಫಿ ರೀತಿಯಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಕೊಪ್ಪಳ: ಗ್ರಾಮಕ್ಕೆ ನುಗ್ಗಿದ 3 ಕರಡಿಗಳು, ಬೆನ್ನತ್ತಿ ಓಡಿಸಿದ ಗ್ರಾಮಸ್ಥರು
ಪಾಲಕರಿಂದ ಧರ್ಮದೇಟು:
ಮತ್ತೊಂದೆಡೆ ಜೆಪಿ ನಗರದಲ್ಲಿನ ಕೆಲ ಬಾಲಕರು ಶಿಕ್ಷಕನ ವರ್ತನೆ ಕುರಿತು ತಮ್ಮ ಪಾಲಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪಾಲಕರು ಇತ್ತೀಚೆಗೆ ಶಿಕ್ಷಕನ ಮನೆಗೆ ತೆರಳಿ ಧರ್ಮದೇಟು ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಿಕ್ಷಕ ಕಳೆದ ಮೂರು ದಿನಗಳಿಂದ ಶಾಲೆಗೆ ಹಾಜರಾಗಿಲ್ಲ ಮತ್ತು ಕಾರಟಗಿ ಜೆಪಿ ನಗರದ ಬಾಡಿಗೆ ಮನೆಯಲ್ಲೂ ಕಾಣುತ್ತಿಲ್ಲವೆಂದು ಹೇಳಲಾಗುತ್ತಿದೆ.
ಈ ವಿಷಯ ಅರಿತ ರಾಯಚೂರು ಡಿಡಿಪಿಐ ವೃಷಭೇಂದ್ರ ಹಾಗೂ ಸಿಂಧನೂರು ಬಿಇಒ ಶರಣಪ್ಪ ವಟಗಲ್ ಶಿಕ್ಷಕನನ್ನು ಕಚೇರಿಗೆ ಕರೆತರಲು ಸಂಜೆಯವರೆಗೂ ಹರಸಾಹಸ ಪಟ್ಟಿದ್ದಾರೆ. ಶಿಕ್ಷಕ ತನ್ನ ಮೊಬೈಲ್ ಸ್ವಿಚ್್ಡ ಆಫ್ ಮಾಡಿಕೊಂಡಿದ್ದಾನಂತೆ. ಈ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕನನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ ಎಂದು ಸಿಂಧನೂರು ಬಿಇಒ ಶರಣಪ್ಪ ವಟಗಲ್ ಖಚಿತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ