
ಬೆಂಗಳೂರು(ಡಿ.14): ಸ್ಪಾ ಕಂಪನಿಯಲ್ಲಿ ಎಸ್ಕಾರ್ಟ್ ಸರ್ವೀಸ್ ನೌಕರಿ ಕೊಡಿಸುವುದಾಗಿ ಯುವಕನಿಗೆ ನಂಬಿಸಿದ ಅಪರಿಚಿತರು, 1 ಲಕ್ಷ ಹಣ ಹಾಕಿಸಿಕೊಂಡು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಮಹದೇವಪುರ ನಿವಾಸಿ ವಿಶ್ವನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಅಮಿತ್, ನಿಖಿತಾ ಹಾಗೂ ಪ್ರಿಯಾ ಶರ್ಮಾ ಎಂಬುವರ ವಿರುದ್ಧ ವೈಟ್ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹ ಆಗೋದಾಗಿ ನಂಬಿಸಿ ವಂಚನೆ: ಕಂಗಾಲಾದ ಯುವತಿ
ವಿಶ್ವನಾಥ್ ಕೆಲಸ ಹುಡುಕಲು ಆನ್ಲೈನ್ನಲ್ಲಿ ಸ್ವವಿವರ ಅಪ್ಲೋಡ್ ಮಾಡಿದ್ದರು. ರಿಚ್ ಸ್ಪಾ ಕಂಪನಿಯಲ್ಲಿ ಕೆಲಸ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಮಿತ್ ಎಂಬುವರಿಗೆ ಕರೆ ಮಾಡಿದಾಗ ‘ಎಸ್ಕಾಟ್ಸ್ರ್ ಸರ್ವೀಸ್’ ನೌಕರಿಗೆ ನೇಮಿಸಿಕೊಳ್ಳುವುದಾಗಿ ಹೇಳಿದ್ದ. ದಾಖಲೆ ಸಿದ್ಧಪಡಿಸಲು ಒಂದು ಲಕ್ಷ ಸಂದಾಯ ಮಾಡಿಸಿಕೊಂಡಿದ್ದ. ಬಳಿಕ ನಿಖಿತಾ ಮತ್ತು ಪ್ರಿಯಾ ಶರ್ಮಾ ಎಂಬುವರು ಕರೆ ಮಾಡಿ ಮತ್ತೆ 18 ಸಾವಿರ ಪಾವತಿಸುವಂತೆ ಒತ್ತಾಯಿಸಿದ್ದರು. ಮಸಾಜ್ ಬಾಯ್ ಕೆಲಸ ಮಾಡುವಂತೆ ಪೀಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ