ಹಾವೇರಿ: ಪತ್ನಿಯನ್ನ ಮನೆಗೆ ಕಳಿಸದ್ದಕ್ಕೆ ಸಿಟ್ಟಿಗೆದ್ದು ಮಾವನ ಅಡಕೆ ತೋಟ ನಾಶ ಮಾಡಿದ ಅಳಿಯ..!

By Kannadaprabha NewsFirst Published Sep 27, 2024, 7:57 AM IST
Highlights

ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

ಹಾನಗಲ್ಲ(ಹಾವೇರಿ)(ಸೆ.27):  ಪತ್ನಿಯನ್ನು ತನ್ನ ಮನೆಗೆ ಕಳುಹಿಸದ್ದಕ್ಕೆ ಕುಪಿತಗೊಂಡ ಅಳಿಯನೋರ್ವ ಮಾವನ ಅಡಕೆ ತೋಟವನ್ನೇ ನಾಶಪಡಿಸಿದ ಘಟನೆ ಹಾನಗಲ್ಲ ತಾಲೂಕಿನ ಬಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

ದೇವೇಂದ್ರಪ್ಪ ಗಾಣಿಗೇರ ಅವರು ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ತಮ್ಮ ಅಳಿಯ ಬಸವರಾಜ ತನ್ನ ಹೊಲದಲ್ಲಿನ 2 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ. 

Latest Videos

ರಾಣೆಬೆನ್ನೂರು: ಅಂಗನವಾಡಿಯಲ್ಲಿ ಮಕ್ಕಳನ್ನು ಸೊಳ್ಳೆಪರದೆಯಲ್ಲಿ ಕೂರಿಸಿ ಪಾಠ..!

ಬಸವರಾಜ ಸೊರಬದ ಬೈದವಟ್ಟಿ ಗ್ರಾಮದವ. 10 ವರ್ಷ ಹಿಂದೆ ದೇವೇಂದ್ರಪ್ಪರ ಮಗಳ ಜತೆ ವಿವಾಹವಾಗಿದ್ದರು. ಆದರೆ ಗಂಡನ ಕಿರುಕುಳ ತಾಳಲಾರದೇ ಆತನ ಪತ್ನಿ 3 ತಿಂಗಳ ಹಿಂದೆ ತವರಿಗೆ ತೆರಳಿದ್ದರು. ಪತ್ನಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಬಸವರಾಜ ಪರಿಪರಿಯಾಗಿ ಕೇಳಿಕೊಂಡರೂ ಮಾವ ಕಳುಹಿಸಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂದ ಬಸವರಾಜ ಸೆ.23ರಂದು ಅಡಕೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.

click me!