Belagavi Crime: ಕ್ರಿಕೆಟ್‌ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದ ಇಬ್ಬರು ಯುವಕರನ್ನು ಕೊಂದೇ ಬಿಟ್ಟ ಪಾಪಿ

Published : Dec 26, 2022, 10:36 AM ISTUpdated : Dec 26, 2022, 10:38 AM IST
Belagavi Crime: ಕ್ರಿಕೆಟ್‌ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದ ಇಬ್ಬರು ಯುವಕರನ್ನು ಕೊಂದೇ ಬಿಟ್ಟ ಪಾಪಿ

ಸಾರಾಂಶ

ಕ್ರಿಕೆಟ್‌ ಆಡುತ್ತಿದ್ದ ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಅದನ್ನು ಪ್ರಶ್ನೆ ಮಾಡಿದ್ದ ಇಬ್ಬರು ಯುವಕರನ್ನು ಮೈದಾನದಲ್ಲಿಯೇ ಚಾಚು ಚುಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶಿಂಧೊಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿದೆ ನೋಡಿ ಘಟನೆಯ ಪೂರ್ಣ ವಿವರ...

ಬೆಳಗಾವಿ (ಡಿ.26): ಸಾಮಾನ್ಯವಾಗಿ ನಾವು ಆಟವಾಡುವಾಗ ಯಾರಾದರೂ ಬೇಕಂತಲೇ ಅಡ್ಡಪಡಿಸಿದರೆ ಅವರ ಮೇಲೆ ಸಿಟ್ಟು ಮಾಡಿಕೊಂಡು ಬೇರೆಡೆ ಹೋಗಿ ಎಂದು ಹೇಳುವುದು ಸಾಮಾನ್ಯ. ಆದರೆ, ಕ್ರಿಕೆಟ್‌ ಆಡುತ್ತಿದ್ದ ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಅದನ್ನು ಪ್ರಶ್ನೆ ಮಾಡಿದ್ದ ಇಬ್ಬರು ಯುವಕರನ್ನು ಮೈದಾನದಲ್ಲಿಯೇ ಚಾಚು ಚುಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶಿಂಧೊಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸವು, ಆತ್ಮಹತ್ಯೆ, ಕೊಲೆಗಳು ನಡೆಯುವುದು ನೋಡಿದರೆ ಮನ್ಯಷ್ಯ ಜೀವನ ಇಷ್ಟೊಂದು ಕೀಲಾಗಿ ಹೋಯಿತೇ ಎಂದು ಅಸಹ್ಯ ಹುಟ್ಟಿಸುವಂತಿದೆ. ಇಲ್ಲಿಯೂ ಕೂಡ ಕ್ರಿಕೆಟ್‌ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದು ಹೇಳಿದ್ದ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಯು ಕ್ರಿಕೆಟ್‌ ಆಡುತ್ತಿದ್ದ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಆತನ ಮನಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಇಬ್ಬರು ಯುವಕರು ಪ್ರಾಣ ಚೆಲ್ಲಿದ್ದು ಮಾತ್ರ ಭರಿಸಲಾಗದ ನಷ್ಟ ಉಂಟು ಮಾಡಿರುವುದಂತೂ ಸತ್ಯವಾಗಿದೆ.

Bengaluru crime: ಉದ್ಯಮಿ ಮನೆಯಲ್ಲಿ ಜೋಡಿ ಕೊಲೆ: ಚಿನ್ನಾಭರಣ ಲೂಟಿ

ನೋಡ ನೋಡುತ್ತಿದ್ದಂತೆ ಚಾಕು ಚುಚ್ಚಿಯೇಬಿಟ್ಟ: ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದಲ್ಲಿ ರಾತ್ರಿ ನಡೆದ ಘಟನೆ ನಡೆದಿದೆ. ಬಸವರಾಜ್ ಬೆಳಗಾಂವ್ಕರ್ (22), ಗಿರೀಶ ನಾಗಣ್ಣವರ (22) ಕೊಲೆಯಾದ ದುರ್ದೈವಿಗಳು ಆಗಿದ್ದಾರೆ. ಮೃತರ ಪೈಕಿ ಬಸವರಾಜ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದರೆ, ಗಿರೀಶ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದನು. ಇನ್ನು ಕುಟುಂಬದ ನಿರ್ವಹಣೆ ನೋಡಿಕೊಳ್ಳಬೇಕಾದ ಯುವಕರು ಇಲ್ಲದಂತಾಗಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಇನ್ನು ಕೊಲೆ ಮಾಡಿದ ತಕ್ಷಣವೇ ದುಷ್ಕರ್ಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದಿದ್ದು ಹೇಗೆ?: ಶಿಂಧೊಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಯುವಕರು ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮೈದಾನದಲ್ಲಿ ವಾಹನ ನುಗ್ಗಿಸಿದ್ದಾನೆ. ಇದರಿಂದ ಯುವಕರು ಮೈದಾನಕ್ಕೆ ಕಾರು ನುಗ್ಗಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವಕರ ಆಕ್ಷೇಪಕ್ಕೆ ಸಿಟ್ಟಾದ ಚಾಲಕ ವಾಹನದಿಂದ ಕೆಳಗಿಳಿದು ಚಾಕುವಿನಿಂದ ಚುಚ್ಚಿ ಯುವಕರಿಬ್ಬರ ಬರ್ಬರ ಹತ್ಯೆ ಮಾಡಿದ್ದಾನೆ. ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟ ಯುವಕರ ಮೃತ ದೇಹಗಳನ್ನು ಬಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. 

ಇದನ್ನೂ ಓದಿ: Yadagiri Crime: ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿಯನ್ನು ಕೊಡಲಿಯಿಂದ ಕತ್ತರಿಸಿ ಕೊಂದ ಪತಿ

ಜಿಲ್ಲಾಸ್ಪತ್ರೆಯ ಬಳಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ: ಇನ್ನು ಘಟನೆ ನಡೆದ ಶಿಂಧೊಳ್ಳಿ ಗ್ರಾಮದ ಕ್ರಿಕೆಟ್‌ ಮೈದಾನದ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೊಲೆಗೆ ಕಾರಣವಾಗಿರುವ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ. ಇನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹ ಇಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಗಲಾಟೆ ಸಂಭವಿಸುವ ಆತಂಕವಿದೆ. ಆದ್ದರಿಂದ ಭದ್ರತೆ ಮತ್ತು ಸಾರ್ವಜನಿಕ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ