'ಸಿಡಿ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿದೆ' JDS ನಾಯಕ ಸ್ಫೋಟ!

Published : Mar 27, 2021, 07:33 PM IST
'ಸಿಡಿ ಪ್ರಕರಣದಲ್ಲಿ ಹಣದ ವ್ಯವಹಾರ ನಡೆದಿದೆ' JDS ನಾಯಕ ಸ್ಫೋಟ!

ಸಾರಾಂಶ

ಸಿಡಿ ಪ್ರಕರಣದಲ್ಲಿ  ಹಣದ ವ್ಯವಹಾರ ನಡೆದಿದೆ/ ಸರ್ಕಾರದ ಮೇಲೆ ರಮೇಶ್ ಜಾರಕಿಹೋಳಿ ಹಿಡಿತ ಇನ್ನು ಇದೆ/ ಎಸ್ ಐ ಟಿ ಪೊಲೀಸ್ ತನಿಖೆಯಲ್ಲಿ ವಿಫಲರಾಗಿದ್ದಾರೆ/ ಯುವತಿ ಪೋಷಕರಿಗೆ ರಮೇಶ್ ಜಾರಕಿಹೋಳಿ ಹಣ ಕೊಟ್ಟಿರಬಹುದು / ಯುವತಿಗೆ ಡಿ ಕೆ ಶಿವಕುಮಾರ್ ಹಣ ಕೊಟ್ಟಿರಬಹುದು / ಯುವತಿ ಇಂತಹ ರಾಕೆಟ್ನನಲ್ಲಿ ಒಳಗಾಗಲು ಹಣ ಆಮಿಷವೇ ಕಾರಣವಿರಬಹುದು.

ಚಿಕ್ಕಮಗಳೂರು (ಮಾ. 27)  ಸಿಡಿ ಪ್ರಕರಣದಲ್ಲಿ  ಹಣದ ವ್ಯವಹಾರ ನಡೆದಿದೆ. ಸರ್ಕಾರದ ಮೇಲೆ ರಮೇಶ್ ಜಾರಕಿಹೋಳಿ ಹಿಡಿತ ಇನ್ನು ಇದೆ. ಎಸ್ ಐ ಟಿ  ಮತ್ತು ಪೊಲೀಸ್ ತನಿಖೆಯಲ್ಲಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್ ವಕ್ತಾರ ಎಸ್ ಎಲ್ ಭೋಜೇಗೌಡ  ಹೇಳಿದ್ದಾರೆ.

ಯುವತಿ ಪೋಷಕರಿಗೆ ರಮೇಶ್ ಜಾರಕಿಹೋಳಿ ಹಣ ಕೊಟ್ಟಿರಬಹುದು. ಯುವತಿಗೆ ಡಿ ಕೆ ಶಿವಕುಮಾರ್ ಹಣ ಕೊಟ್ಟಿರಬಹುದು. ಯುವತಿ ಇಂತಹ ರಾಕೆಟ್ನನಲ್ಲಿ ಒಳಗಾಗಲು ಹಣ ಆಮಿಷವೇ ಕಾರಣವಿರಬಹುದು. ಕಾರಣವಿಲ್ಲದೆ ಇಂತಹ ಜಾಲದಲ್ಲಿ ಯುವತಿ ಸಿಲುಕಿಕೊಳ್ಳಲು ಸಾಧ್ಯವಿಲ್ಲ,. ಈ ಪ್ರಕರಣದಲ್ಲಿ ಯುವತಿ ಹೇಳಕೆ ಮುಖ್ಯ ಎಂದು ಜೆಡಿಎಸ್ ವಕ್ತಾರ ಎಸ್ ಎಲ್ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಿಡಿ ಲೇಡಿ ಯಾವಾಗ ಹಾಜರ್‌ ಆಗ್ತಾರೆ? ವಕೀಲರು  ಕೊಟ್ಟ ಮಾಹಿತಿ

ಸಿಡಿ ಸ್ಫೋಟವಾದ ನಂತರ ದಿನಕ್ಕೊಂದು, ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಅಂತಿಮವಾಗಿ ಮಹಾನ್ ನಾಯಕ ಎನ್ನುತ್ತಿದ್ದ ರಮೇಶ್ ಡಿಕೆಶಿ ಹೆಸರನ್ನು ಹೇಳಿದ್ದಾರೆ. ಇನ್ನೊಂದು ಕಡೆ ಯುವತಿ ಪೋಷಕರು ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ. ನಮ್ಮ ಮಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದೆಲ್ಲದರ ಜತೆಗೆ ಕಮಿಷನರ್ ಕಚೇರಿಗೆ ಸಿಡಿ ಲೇಡಿ ಪರ ವಕೀಲರು ಭೇಟಿ ಕೊಟ್ಟು ಮನವಿ ಮಾಡಿಕೊಂಡಿದ್ದಾರೆ. ಸೂಕ್ತ ಭದ್ರತೆ ಕೊಟ್ಟರೆ ಸಿಡಿ ಲೇಡಿ  ಹಾಜರ್ ಆಗುತ್ತಾರೆಯೇ ?  ಎಂಬುದಕ್ಕೂ ಉತ್ತರ ಕೊಟ್ಟಿಲ್ಲ. ಸಿಡಿ ಲೇಡಿ ಹಾಜರಾಗಿ ಬಹಿರಂಗ ಹೇಳಿಕೆ ನೀಡುವವರೆಗೂ ಇದು  ಮುಂದುವರಿಯುತ್ತಲೆ ಇರುತ್ತದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!