ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

Published : Sep 18, 2020, 02:40 PM ISTUpdated : Sep 18, 2020, 04:38 PM IST
ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

ಸಾರಾಂಶ

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು/  ನಿರೂಪಕ, ನಟ ಅಕುಲ್ ಬಾಲಾಜಿಗೆ ಸಿಸಿಬಿ ನೋಟೀಸ್ / ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ/ ಸಿಸಿಬಿ ನೊಟೀಸ್ ತಲುಪಿದೆ ಶನಿವಾರ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ ಎಂದ ಬಾಲಾಜಿ  

ಬೆಂಗಳೂರು( ಸೆ.18) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನಲ್ಲಿ ಹೊಸ ಹೊಸ ಹೆಸರುಗಳು ಕೇಳಿಬರುತ್ತಿದ್ದು  ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.

"

ಸದ್ಯ ಹೈದರಾಬಾದ್ ನಲ್ಲಿರುವ ಅಕುಲ್ ಬಾಲಾಜಿ  ಸಿಸಿಬಿ ನೊಟೀಸ್ ತಲುಪಿದೆ  ಎಂದಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗಲು ತಿಳಿಸಿದ್ದು ಬರುತ್ತೇನೆ ಎಂದು  ಸುವರ್ಣ ನ್ಯುಸ್ ಗೆ ಅಕುಲ್ ಬಾಲಾಜಿ ಹೇಳಿಕೆ ನೀಡಿದ್ದಾರೆ.

ರಾಗಿಣಿಯನ್ನು ಜೈಲಿನಲ್ಲೇ ಬಿಗಿದಪ್ಪಿದ ಸಂಜನಾ

ಈಗ ತಾನೆ ಸಿಸಿಬಿ ನೋಟೀಸ್ ನೋಡಿದೆ . ಯಾವುದೇ ಸಮಸ್ಯೆ ಇಲ್ಲ. ಸದ್ಯ ನಾನು ಹೈದ್ರಾಬಾದ್ ನಲ್ಲಿದ್ದೆನೆ . ಮೂರು‌ ತಿಂಗಳಿಂದ ಫ್ಯಾಮಿಲಿ ಜೊತೆ ಇಲ್ಲೇ ಇದ್ದೆವೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅಕುಲ್ ತಿಳಿಸಿದ್ದಾರೆ.

"

ಅಕುಲ್ ಜತೆಗೆ ವಿ.ದೇವರಾಜ್ ಮಗ ಯುವರಾಜ್, ಸಂತೋಷ್ ಗೆ ನೋಟಿಸ್ ನೀಡಲಾಗಿದ್ದು ವಿಚಾರಣೆಗೆ ಬರಲುನ ಸೂಚಿಸಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ಸಂಜನಾ ಹಾಗೂ ನಟಿ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿಚಾರಣೆ ಸಿಸಿಬಿ ನಡೆಸಿದ್ದು ಇದು ಮತ್ತೊಂದು ಹಂತ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!