ಗೋವಾ ಜೈಲ್‌ನಿಂದ ಎಸ್ಕೆಪ್ ಮಾಡಿಸಿದ್ದ ಪೇದೆಗೆ ಕೈಕೊಟ್ಟ ಕುಖ್ಯಾತ ರೌಡಿ ಸಿದ್ದಿಕಿ..!

Published : Dec 15, 2024, 07:00 PM IST
ಗೋವಾ ಜೈಲ್‌ನಿಂದ ಎಸ್ಕೆಪ್ ಮಾಡಿಸಿದ್ದ ಪೇದೆಗೆ ಕೈಕೊಟ್ಟ ಕುಖ್ಯಾತ ರೌಡಿ ಸಿದ್ದಿಕಿ..!

ಸಾರಾಂಶ

ರೌಡಿ ಸುಲೇಮಾನ್ ಸಿದ್ದೀಕಿ ಇಲ್ಲಿ ಪರಾರಿಯಾಗುತ್ತಿದ್ದಂತೆ ಕಂಗಾಲಾದ ಪೇದೆ ಅಮಿತ್ ನಾಯಕ ಹಳೆ ಹುಬ್ಬಳ್ಳಿ ಠಾಣೆಗೆ ಶರಣಾಗಿದ್ದಾನೆ. ಇಲ್ಲಿನ ಪೊಲೀಸರು ಶನಿವಾರ ಬೆಳಗ್ಗೆ ಪೇದೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಹುಬ್ಬಳ್ಳಿ(ಡಿ.15):  ಅಂತಾರಾಜ್ಯ ಕುಖ್ಯಾತ ರೌಡಿಯೋರ್ವನನ್ನು ಗೋವಾ ಜೈಲಿನಿಂದ ಎಸ್ಟೇಪ್ ಮಾಡಿಸಿ ಆತನ ಜೊತೆಯೇ ಹುಬ್ಬಳ್ಳಿಗೆ ಬಂದಿದ್ದ ಗೋವಾ ಸಶಸ್ತ್ರ ಮೀಸಲು ಪಡೆಯ ಪೇದೆಗೆ ಅದೇ ರೌಡಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ. 

ಸುಲೇಮಾನ್ ಸಿದ್ದಿಕಿ ಅಂತರಾಜ್ಯ ಕುಖ್ಯಾತ ರೌಡಿ. ಈತನಿಗೆ ಗೋವಾ ಜೈಲಿನಿಂತ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಗೋವಾ ಮೀಸಲು ಪಡೆಯ ಹುಬ್ಬಳ್ಳಿಯ ವರೆಗೆ ಇಬ್ಬರೂ ಜೊತೆಯಲ್ಲೇ ಬಂದಿದ್ದರು. ರೌಡಿ ಸುಲೇಮಾನ್ ಸಿದ್ದೀಕಿ ಇಲ್ಲಿ ಪರಾರಿಯಾಗುತ್ತಿದ್ದಂತೆ ಕಂಗಾಲಾದ ಪೇದೆ ಅಮಿತ್ ನಾಯಕ ಹಳೆ ಹುಬ್ಬಳ್ಳಿ ಠಾಣೆಗೆ ಶರಣಾಗಿದ್ದಾನೆ. ಇಲ್ಲಿನ ಪೊಲೀಸರು ಶನಿವಾರ ಬೆಳಗ್ಗೆ ಪೇದೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಮಹಾಕುಂಭ ಮೇಳ-2025: ಪ್ರಯಾಗರಾಜ್‌ ರೈಲ್ವೆ ನಿಲ್ದಾಣದಲ್ಲಿ ವೇಟಿಂಗ್‌ ಲಾಂಜ್‌, ಭಕ್ತರಿಗೆ ಅನುಕೂಲ!

ಗೋವಾ ಜೈಲಿನಿಂದ ಎಸ್ಕೆಪ್: 

ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಹಲ್ಲೆ ವಂಚನೆ, ಭೂ ಮಾಫಿಯಾದಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಸುಲೇಮಾನ್ ಸಿದ್ದಿಕಿಯ ಮೇ ೮ ಹೈದ್ರಾಬಾದ್, ಪುಣೆ, ದೆಹಲಿ, ಪೊಲೀಸ್ ಪೇದೆ ಅಮಿತ್ ನಾಯಕ, ಗೋವಾ ರಾಜ್ಯ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ. ಹಾಗಾಗಿ ಇವನನ್ನು ಗೋವಾ ಜೈಲಿನಲ್ಲಿ ಪ್ರತ್ಯೇಕ ಬ್ಯಾರೆಕ್‌ನಲ್ಲಿ ಇಡಲಾಗಿತ್ತು. ಇವನ ಭದ್ರತೆಗಾಗಿ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅಮಿತ್ ನಾಯಕನನ್ನು ನಿಯೋಜಿಸಲಾಗಿತ್ತು. 

ಹಣದ ಆಸೆಗಾಗಿ ಶುಕ್ರವಾರ ರಾತ್ರಿ ಸುಲೇಮಾನ್‌ನನ್ನು ಜೈಲಿನಿಂದ ಎಸ್ಕೆಪ್ ಮಾಡಿಸಿದ್ದ ಅಮಿತ್, ಅವನೊಂದಿಗೆ ಹುಬ್ಬಳ್ಳಿಗೆ ಬಂದಿದ್ದರು. ಇಲ್ಲಿಗೆ ಬರುತ್ತಿದ್ದಂತೆ ಪೇದೆಗೆ ರೌಡಿ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ದಾರಿಕಾಣದಾದ ಪೇದೆ ಕೊನೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಶರಣಾಗಿ ಆಗಿರುವ ಘಟನೆಯ ಕುರಿತು ಮಾಹಿತಿ ನೀಡಿದ್ದಾನೆ. ನಂತರ ಹಳೇ ಹುಬ್ಬಳ್ಳಿ ಪೊಲೀಸರು ಪೊಲೀಸರಿಗೆ ಮಾಹಿತಿ ನೀಡಿ ಪೇದೆಯನ್ನು ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಣದ ಕೊರತೆಯಿಂದ ಅರ್ಧಕ್ಕೆ ನಿಂತ ಕಾಮಗಾರಿ: ಧಾರವಾಡ ಜನರ ಶ್ವಾಸಕೋಶ ತುಂಬುತ್ತಿದೆ 

ಹಣದ ಆಮಿಷ ನೀಡಿದ್ದ: 

ಆರೋಪಿ ಸುಲೇಮಾ ನ್ ಸಿದ್ದಿಕಿ ತಾನು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದರೆ 1 ಕೋಟಿ ಹಣ ನೀಡುವುದಾಗಿ ಪೇದೆ ಅಮಿತ್‌ನಿಗೆ ಆಮಿಷ ಒಡ್ಡಿದ್ದ ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ. ಹಣದ ಆಸೆಗೆ ಬಿದ್ದ ಪೇದೆಯು ಆರೋಪಿಯನ್ನು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಲ್ಲದೇ ಅವನೊಂದಿಗೆ ತಾನೂ ಹುಬ್ಬಳ್ಳಿಗೆ ಬಂದಿದ್ದಾನೆ. 

ಹುಬ್ಬಳ್ಳಿಯಲ್ಲಿ ಹಣ ನೀಡುವುದಾಗಿ ಹೇಳಿದ್ದನಂತೆ. ಶುಕ್ರವಾರ ತಡರಾತ್ರಿ ಹುಬ್ಬಳ್ಳಿಗೆ ಬರುತ್ತಿ ದ್ದಂತೆ ಸುಲೇಮಾನ ಪೇದೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇದರಿಂದಾಗಿ ಪೇದೆಯು ಬೇರೆ ದಾರಿಯಿಲ್ಲದೇ ಹಳೇ ಹುಬ್ಬಳ್ಳಿಯ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧಿಗೆ ಜೈಲಾದರೆ, ಅವರ ದಿನನಿತ್ಯದ ಖರ್ಚನ್ನೂ ಕೇಸ್​ ಹಾಕಿದೋರೇ ಕೊಡಬೇಕು! ಇಲ್ಲದಿದ್ರೆ ಏನಾಗತ್ತೆ? ಕಾನೂನು ಹೇಳೋದೇನು?
ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!