
ಬೆಂಗಳೂರು (ಜೂ.13): ನಟ ದರ್ಶನ್ 2ನೇ ಹೆಂಡತಿ ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆಂಬ ಕೋಪಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಬೀಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಜಿಮ್ ಮಾಡುತ್ತಿದ್ದ ನಟ ದರ್ಶನ್ನನ್ನು ಮುಲಾಜಿಲ್ಲದೇ ವಶಕ್ಕೆ ಪಡೆದು, ಅರೆಸ್ಟ್ ಮಾಡಿದ್ದರು. ಜೊತೆಗೆ, ಕೋರ್ಟ್ನಿಂದ ಪೊಲೀಸ್ ಕಸ್ಟಡಿಗೆ ಪಡೆದು ಸ್ಥಳ ಮಹಜರ್ ಮಾಡಲಿಕ್ಕೂ ದರ್ಶನ್ ಹಾಗೂ ಅವರ ಗ್ಯಾಂಗ್ನ 13 ಜನರನ್ನೂ ಕರೆದೊಯ್ಯಲಾಗಿತ್ತು. ಆದರೆ, ಕಠಿಣವಾಗಿ ಕೊಲೆ ಕೇಸಿನ ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಸರ್ಕಾರದಿಂದ ಎತ್ತಂಗಡಿ ಮಾಡಲಾಗಿದೆ.
ಚಿತ್ರದುರ್ಗದ ಸಾಮಾನ್ಯ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಬೀಸಾಡಿದ್ದ ಆರೋಪಿಗಳು, ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದರು. ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು, ಸರೆಂಡರ್ ಆಗಿದ್ದ ಕೊಲೆ ಆರೋಪಿಗಳನ್ನು ವಿಚಾರಣೆ ಮಾಡಿದಾಗ, ನಟ ದರ್ಶನ್ನನ್ನು ಉಳಿಸಲು ಹತ್ತಾರು ಕಥೆ ಕಟ್ಟಿದ್ದಾರೆ. ನಂತರ, ಆರೋಪಿಗಳ ಫೋನ್ ಕಾಲ್ ಡಿಟೇಲ್ಸ್ ಮತ್ತಿತರ ತಾಂತ್ರಿಕ ಸಾಕ್ಷಗಳ ಪರಿಶೀಲನೆ ಮಾಡಿದಾಗ ಸುಳ್ಳು ಹೇಳುತ್ತಿರುವುದು ತಿಳಿದಿದೆ. ಆಗ ಪೊಲೀಸರು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ನಟ ದರ್ಶನ್ ಮತ್ತು ಆತನ ಹೆಂಡತಿ ಪವಿತ್ರಾಗೌಡ ಪಾತ್ರ ಇರುವುದನ್ನೂ ಬಾಯಿ ಬಿಟ್ಟಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್ ಬಚಾವ್ ಮಾಡಲು ಸಚಿವರ ಶತಪ್ರಯತ್ನ; ತನಿಖಾ ಪೊಲೀಸರಿಗೆ 128 ಬಾರಿ ಕರೆ
ನಟ ದರ್ಶನ್ ಹೆಸರೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರು ಹಿರಿಯ ಅಧಿಕಾರಿಗಳ ಮೂಲಕ ಗೃಹ ಸಚಿವರಿಗ ಮಾಹಿತಿ ನೀಡಿದ್ದಾರೆ. ಆಗ ಗೃಹ ಸಚಿವರೂ ಕಾನೂನಿನಲ್ಲಿ ಇರುವ ಎಲ್ಲ ನಂತರ, ನಟ ದರ್ಶನ್ ಕೊಲೆ ಕೇಸಿನಲ್ಲಿ ಪಾಲ್ಗೊಂಡ ಬಗ್ಗೆ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿ ಸೀದಾ ಮೈಸೂರಿಗೆ ತೆರಳಿ ಬೆಳ್ಳಂಬೆಳಗ್ಗೆ ಜಿಮ್ ಮಾಡುತ್ತಿದ್ದ ನಟ ದರ್ಶನ್ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಇದಾದ ನಂತರ, ಪೊಲೀಸರಿಗೆ ಸಿಕ್ಕ ಸಾಕ್ಷ್ಯಗಳಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್ ಕೈವಾಡ ಇರುವುದೂ ತಿಳಿಯುತ್ತಿದ್ದಂತೆ, ಅರೆಸ್ಟ್ ಮಾಡಿದ್ದರು. ನಂತರ ಕಾನೂನು ಪ್ರಕ್ರಿಯೆಯಂತೆ ಮೆಡಿಕಲ್ ಟೆಸ್ಟ್, ಕೋರ್ಟ್ ಪ್ರೊಡೂಸ್, ಪೊಲೀಸ್ ಕಸ್ಟಡಿಗೆ ಪಡೆಯುವುದು ಹಾಗೂ ಸ್ಥಳ ಮಹಜರು ಮಾಡುವುದು ಎಲ್ಲ ಕಾರ್ಯವನ್ನೂ ಮಾಡಿದ್ದರು. ಆದರೆ, ಈಗ ತನಿಖಾಧಿಕಾರಿಯನ್ನೇ ಬದಲಾವಣೆ ಮಾಡಿದ್ದಾರೆ.
ರೇಣುಕಾಸ್ವಾಮಿ ಮರ್ಮಾಂಗದ ಮೇಲೆ ಕ್ರೂರ ದಾಳಿ; ಪೋಸ್ಟ್ಮಾರ್ಟಮ್ ವರದಿಯಲ್ಲಿ ಹಲ್ಲೆಯ ಇಂಚಿಂಚೂ ಮಾಹಿತಿ ಬಹಿರಂಗ
ಇಂದಿನಿಂದಲೇ ತನಿಖಾಧಿಕಾರಿ ಬದಲಾವಣೆ: ರೇಣುಕಾಸ್ವಾಮಿ ಕೊಲೆ ಕೇಸ್ ನೂತನ ತನಿಖಾಧಿಕಾರಿಯಾಗಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೇಮಕವಾಗಿದ್ದಾರೆ. ಇಷ್ಟು ದಿನ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ತನಿಖಾಧಿಕಾರಿಯಾಗಿದ್ದರು. ಇಂದಿನಿಂದ ಎಸಿಪಿ ಚಂದನ್ ತನಿಖಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ಚುನಾವಣೆ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಗಿರೀಶ್ ನಾಯ್ಕ್ ಅವರು ಕಾಮಾಕ್ಷಿಪಾಳ್ಯಕ್ಕೆ ವರ್ಗಾವಣೆ ಆಗಿದ್ದರು. ಆದರೆ, ಕಳೆದ ಎರಡು ದಿನಗಳ ಹಿಂದೆ ಪುನಃ ವಾಪಸ್ ತಮ್ಮ ಠಾಣೆಗಳಿಗ ಹೋಗಲು ಆದೇಶ ಬಂದಿತ್ತು. ಹೀಗಾಗಿ ಮುಂದಿನ ತನಿಖೆ ದೃಷ್ಟಿಯಿಂದ ತನಿಖಾಧಿಕಾರಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ