ಯಾದಗಿರಿ: ಪತ್ರಗಳನ್ನ ತಲುಪಿಸದೇ ನಿರ್ಲಕ್ಷ್ಯದಿಂದ ರಸ್ತೆಗೆ ಬಿಸಾಡಿದ್ರಾ ಪೋಸ್ಟ್‌ಮ್ಯಾನ್!?

Published : May 26, 2024, 01:00 PM ISTUpdated : May 26, 2024, 01:06 PM IST
ಯಾದಗಿರಿ: ಪತ್ರಗಳನ್ನ ತಲುಪಿಸದೇ ನಿರ್ಲಕ್ಷ್ಯದಿಂದ ರಸ್ತೆಗೆ ಬಿಸಾಡಿದ್ರಾ ಪೋಸ್ಟ್‌ಮ್ಯಾನ್!?

ಸಾರಾಂಶ

ಅಂಚೆ ಪತ್ರಗಳನ್ನ ಸರಿಯಾದ ವಿಳಾಸಕ್ಕೆ ತಲುಪಿಸದೇ ಪೋಸ್ಟ್‌ಮ್ಯಾನ್ ರಸ್ತೆ ಮೇಲೆ ಬಿಸಾಡಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ. ವಿಶಾಲಾಕ್ಷಮ್ಮ, ಪತ್ರಗಳನ್ನು ಗ್ರಾಮದಲ್ಲಿ ವಿತರಿಸದೇ ರಸ್ತೆ ಪಾಲು ಮಾಡಿದ್ದಾರೆಂದು ಆರೋಪಿಸಲಾಗಿದೆ

ಯಾದಗಿರಿ (ಮೇ.26): ಅಂಚೆ ಪತ್ರಗಳನ್ನ ಸರಿಯಾದ ವಿಳಾಸಕ್ಕೆ ತಲುಪಿಸದೇ ಪೋಸ್ಟ್‌ಮ್ಯಾನ್ ರಸ್ತೆ ಮೇಲೆ ಬಿಸಾಡಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ.

ವಿಶಾಲಾಕ್ಷಮ್ಮ, ಪತ್ರಗಳನ್ನು ಗ್ರಾಮದಲ್ಲಿ ವಿತರಿಸದೇ ರಸ್ತೆ ಪಾಲು ಮಾಡಿದ್ದಾರೆಂದು ಆರೋಪಿಸಲಾಗಿದೆ. ಕೊಂಕಲ್ ಗ್ರಾಮದಲ್ಲಿ ಪೋಸ್ಟ್‌ಮ್ಯಾನ್ ಆಗಿಕಾರ್ಯನಿರ್ವಹಿಸುತ್ತಿರುವ ಮಹಿಳೆ. ನಿನ್ನೆ ಸಂಜೆ ಅಂಚೆ ಕಚೇರಿಯಲ್ಲಿ ಪತ್ರಗಳನ್ನ ವಿತರಣೆ ಮಾಡುವಂತೆ ನೀಡಲಾಗಿತ್ತು. ಅದರಂತೆ ಗ್ರಾಮಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಪತ್ರಗಳನ್ನ ನೀಡಬೇಕಿತ್ತು. ಆದರೆ ನಿರ್ಲಕ್ಷ್ಯದಿಂದ ವಿತರಣೆ ಮಾಡದೇ ಅಂಚೆ ಪತ್ರಗಳನ್ನ ರಸ್ತೆ ಮೇಲೆ ಎಸೆದಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಬಿದ್ದಿರುವ ಪತ್ರಗಳು ಒಂದು ದಿನ ಕಳೆದರೂ ಅವುಗಳನ್ನು ಸಂಗ್ರಹಿಸಿ ತಲುಪಿಸದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವ ಮಹಿಳೆ. ರಸ್ತೆಯಲ್ಲಿ ಬಿದ್ದ ಅಂಚೆ ಪತ್ರಗಳನ್ನು ಸ್ಥಳೀಯರು ಸಂಗ್ರಹಿಸಿ ರಕ್ಷಣೆ ಮಾಡಿದ್ದಾರೆ. ನಿರ್ಲಕ್ಷ್ಯವಹಿಸಿದ ಪೋಸ್ಟ್‌ಮ್ಯಾನ್ ಮಹಿಳೆ ಮೇಲೆ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯಾದಗಿರಿ: ಮಿನರಲ್ ವಾಟರ್ ಬಾಟೆಲ್‌ನಲ್ಲಿ ಸತ್ತ ಜಿರಳೆ ಪತ್ತೆ!

ಆಧುನಿಕ ಜಗತ್ತು ಎಷ್ಟೇ ಮುಂದುವರಿದರು. ಪಿಂಚಣಿ, ಸರ್ಕಾರದ ಕೆಲಸ ಕಾರ್ಯಗಳು, ಬ್ಯಾಂಕಿಂಗ್ ಸೇವೆಗಳು ಈಗಲೂ ಹೆಚ್ಚು ಅಂಚೆ ಇಲಾಖೆಯನ್ನೇ ಆವಲಂಬಿಸಿವೆ ಹೀಗಿರುವಾಗ ಅಂಚೆಪತ್ರಗಳನ್ನ ನಿರ್ಲಕ್ಷ್ಯ ಮಾಡುವಂತಿಲ್ಲ ಬಿಸಾಡುವಂತಿಲ್ಲ. ಆದರೆ ಈ ರೀತಿ ರಸ್ತೆ ಮೇಲೆ ಚೆಲ್ಲಾಪಿಲ್ಲಿ ಎಸೆದಿರುವುದು ಮತ್ತು ಒಂದು ದಿನವಾದರೂ ಪತ್ರಗಳನ್ನ ಸಂಗ್ರಹಿಸಿ ವಿಳಾಸಕ್ಕೆ ತಲುಪಿಸಿದಿರುವುದು ನಿರ್ಲಕ್ಷ್ಯ, ಕರ್ತವ್ಯಲೋಪ ಎಸೆಗಿರುವ ಪೋಸ್ಟ್ ಮ್ಯಾನ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!