ಮಗನ ದೇಹ ಮಣ್ಣು ಮಾಡಿದ ಪೋಷಕರು, 5 ವರ್ಷದ ನಂತರದ DNA ವರದಿ ಹೇಳಿದ್ದೇ ಬೇರೆ!

Published : Jan 29, 2020, 08:36 PM ISTUpdated : Jan 29, 2020, 08:55 PM IST
ಮಗನ ದೇಹ ಮಣ್ಣು ಮಾಡಿದ ಪೋಷಕರು, 5 ವರ್ಷದ ನಂತರದ DNA ವರದಿ ಹೇಳಿದ್ದೇ ಬೇರೆ!

ಸಾರಾಂಶ

ಕಳೆದು ಹೋಗಿದ್ದ ಬಾಲಕನ ಕತೆ/ ಪೊಲೀಸರು ಕೊಟ್ಟ ಬಾಡಿಗೂ ಡಿಎನ್ ಎ ವರದಿಗೂ ಮ್ಯಾಚ್ ಆಗ್ತಿಲ್ಲ/ ಕುಟುಂಬ ಕಣ್ಣೀರ ಕತೆ ಯಾರಿಗೂ ಬೇಡ

ಬೆಂಗಳೂರು(ಜ. 29)  2014ರಲ್ಲಿ ನಾಪತ್ತೆಯಾದ 12 ವರ್ಷದ ಬಾಲಕನ ಶವದ ಸುತ್ತಲಿನ ಕತೆ.  ಬಾಲಕ ನಾಪತ್ತೆಯಾಗಿದ್ದು  ದೂರು ದಾಖಲಾದ ಮೇಲೆ ಪೊಲೀಸರು ಬಾಡಿಯೊಂದನ್ನು ಪತ್ತೆ ಮಾಡುತ್ತಾರೆ.  ಹುಡುಗನ್ನದೇ ದೇಹ  ಎಂದು ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ. ಆದರೆ ಇದೀಗ ಬರೋಬ್ಬರಿ 5 ವರ್ಷದ ನಂತರ ಡಿಎನ್ ಎ ವರದಿ ಬಂದಿದ್ದು ವರದಿ ಅದು ಕಳೆದುಹೋಗಿದ್ದ ಹುಡುಗನದ್ದಲ್ಲ ಎಂದು ಹೇಳಿದೆ!

ಇದು ನಮ್ಮ ಹುಡುಗನ ದೇಹವಲ್ಲ. ಆತನ ಎತ್ತರಕ್ಕೂ ಸಿಕ್ಕಿರುವ ಹೆಣದ ಎತ್ತರಕ್ಕೂ ಮ್ಯಾಚ್ ಆಗುತ್ತಿಲ್ಲ ಎಂದು ಕುಟುಂಬ ಅಂದೇ ಹೇಳಿತ್ತು. ಆದರೆ ಪೊಲೀಸರು ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದರು.

ಕೇರಳದ ಈ ಸಲಿಂಗಿಗಳು ಹೈಕೋರ್ಟ್ ಕದ ತಟ್ಟಲು ಏನು ಕಾರಣ!

ಮುನ್ನಾವರ್ ಬಾಶಾ(45) ಮತ್ತು ಪ್ರವಿಣ್ ತಾಜ್(40) ದಂಪತಿ ಮುನಿರೆಡ್ಡಿಪಾಳ್ಯದ ಸ್ಮಶಾನದಲ್ಲಿ ಹುಡುಗನ ಅಂತ್ಯಕ್ರಿಯೆ ಮುಸ್ಲಿಂ ಪದ್ಧತಿಯಂತೆ ನರೆವೇರಿಸಿದ್ದರು.

ಡಿಸೆಂಬರ್  2019ರಲ್ಲಿ ಡಿಎನ್ ಎ ವರದಿ ಕೈ  ಸೇರಿದ್ದು ಯಾವ ನಾಪತ್ತೆಯಾಗಿದ್ದನೋ ಆ ಹುಡುಗನ ಶವ ಅಲ್ಲ ಎಂದು ಹೇಳಿದೆ.  ಬಾಶಾ ಮುಂಬೈಗೆ ತಿರುಗಾಡಿ ಈಗಾಗಲೇ 4 ಲಕ್ಷ ರೂ. ಗೂ ಅಧಿಕ ಹಣ ವ್ಯಯಿಸಿದ್ದಾರೆ. ದಂಪತಿ ಈಗಲೂ ತಮ್ಮ ಮಗ ಬದುಕಿದ್ದಾನೆ ಎಂಬ ನಿರೀಕ್ಷೆಯಲ್ಲಿ ಜೀವನ ಮಾಡುತ್ತಿದ್ದಾರೆ.

ಆಂಗ್ಲ ಭಾಷೆಯಲ್ಲಿಯೂ ಓದಿ

 

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು