ಬ್ಯಾಡಗಿ: ಕೌಟುಂಬಿಕ ಕಲಹ, ತಮ್ಮನಿಂದಲೇ ಅಣ್ಣನ ಕೊಲೆ

Kannadaprabha News   | Asianet News
Published : Oct 15, 2020, 10:53 AM IST
ಬ್ಯಾಡಗಿ: ಕೌಟುಂಬಿಕ ಕಲಹ, ತಮ್ಮನಿಂದಲೇ ಅಣ್ಣನ ಕೊಲೆ

ಸಾರಾಂಶ

ಅಣ್ಣನನ್ನು ಕೊಂದ ತಮ್ಮ| ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ನಿತ್ಯವೂ ಕುಡಿದ ಮತ್ತಿನಲ್ಲಿ ತಂದೆ- ತಾಯಿ ಹಾಗೂ ಸಹೋದರರ ಜತೆ ಜಗಳಕ್ಕಿಳಿಯುತ್ತಿದ್ದ ಕೊಲೆಯಾದ ವ್ಯಕ್ತಿ| 

ಬ್ಯಾಡಗಿ(ಅ.15): ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನೇ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ನಾಗರಾಜ ಗೊರವರ(22) ಕೊಲೆಯಾದ ವ್ಯಕ್ತಿ. ಬುಡಪನಹಳ್ಳಿ ಗ್ರಾಮದ ನಿವಾಸಿಗಳಾದ ನಾಗಾರಾಜ ಗೊರವರ ಹಾಗೂ ದಿಳ್ಳೆಪ್ಪ ಗೊರವರ ಅಣ್ಣ ತಂಮ್ಮಂದಿರು. ಮೃತ ನಾಗರಾಜ ಕಳೆದ ಹಲವಾರು ವರ್ಷಗಳಿಂದ ಮದ್ಯವಸನಿಯಾಗಿದ್ದು, ನಿತ್ಯವೂ ಕುಡಿದ ಮತ್ತಿನಲ್ಲಿ ತಂದೆ- ತಾಯಿ ಹಾಗೂ ಸಹೋದರರ ಜತೆ ಜಗಳ ಕ್ಕಿಳಿಯುತ್ತಿದ್ದ. ಅಲ್ಲದೆ ಎಲ್ಲರನ್ನೂ ಕೊಲ್ಲುವ ಬೆದರಿಕೆ ಹಾಕುತ್ತಾ ಬಂದಿದ್ದ ಎನ್ನಲಾಗಿದೆ.

ಮನೆಗೆ ಬರ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ಸುರಿಮಳೆ

ಹಿರಿಯ ಸಹೋದರನ ವರ್ತನೆಯಿಂದ ಬೇಸತ್ತಿದ್ದ ತಮ್ಮ ದಿಳ್ಳೆಪ್ಪ ಇವರಿಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು. ಆದರೆ ಮಂಗಳವಾರ ದಿಳ್ಳೆಪ್ಪ ಮನೆಯಲ್ಲಿದ್ದ ಕೊಡಲಿಯಿಂದ ಹಿರಿಯ ಸಹೋದರ ನಾಗರಾಜನನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಕಳೆದ 2018ರಲ್ಲಿ ತನ್ನ ಕೊಲೆಯಾದ ನಾಗರಾಜ ಪೋಕ್ಸೊ ಕಾಯಿದೆಯಡಿಯಲ್ಲಿ ಶಿಕ್ಷೆ ಕೂಡ ಅನುಭವಿಸಿ ಬಂದಿದ್ದಾಗಿ ತಿಳಿದುಬಂದಿದೆ. ಹತ್ಯೆಯ ಬಳಿಕ ಆರೋಪಿ ದಿಳ್ಳೆಪ್ಪ ಗೊರವರ ಖುದ್ದಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ದೇವರಾಜ್‌, ಅಡಿಶನಲ್‌ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪರೀಶಿಲನೆ ನಡೆಸಿದರು. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ