Bengaluru crime: ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನು ಕೊಂದು ಪರಾರಿಯಾದ ನಾಸೀರ್!

Published : Jan 17, 2023, 03:30 PM IST
Bengaluru crime: ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನು ಕೊಂದು ಪರಾರಿಯಾದ ನಾಸೀರ್!

ಸಾರಾಂಶ

ಶೀಲ ಶಂಕಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು  ಗಂಡ ಮನೆಯಿಂದಲೇ ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.  ತಾವರೆಕೆರೆಯ ಸುಭಾಷ್ ನಗರದ ನಿವಾಸಿ 22 ವರ್ಷದ ನಾಜ್ ಕೊಲೆಯಾದ ಮಹಿಳೆ.

ಬೆಂಗಳೂರು (ಜ.17) : ಶೀಲ ಶಂಕಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು  ಗಂಡ ಮನೆಯಿಂದಲೇ ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.  ತಾವರೆಕೆರೆಯ ಸುಭಾಷ್ ನಗರದ ನಿವಾಸಿ 22 ವರ್ಷದ ನಾಜ್ ಕೊಲೆಯಾದ ಮಹಿಳೆ. ನಾಜ್ 6 ತಿಂಗಳ ಹಿಂದಷ್ಟೇ ಖಾಸಗಿ ಕಂಪನಿ ಉದ್ಯೋಗಿ ನಾಸೀರ್ ಹುಸೇನ್ ಎಂಬುವವನನ್ನ ಪ್ರೀತಿಸಿ, ಪೋಷಕರ ಅನುಮತಿ ಪಡೆದು ಮದುವೆಯಾಗಿದ್ದಳು. ನಾಸೀರ್ ಹುಸೇನ್ ಗೆ ತಂದೆ ತಾಯಿ ಇರದ ಕಾರಣ ಮದುವೆಯ ಬಳಿಕ ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ವಾಸವಿದ್ದರು.

ಇತ್ತೀಚೆಗಷ್ಟೇ ನಾಜ್ ಗರ್ಭಿಣಿಯಾಗಿದ್ದರು. ಹೆಂಡತಿ ಗರ್ಭಿಣಿಯಾಗಿರೋದು ಖಚಿತವಾಗ್ತಿದ್ದಂತೆ ಹೆಂಡತಿ ಮೇಲೆ ನಾಸೀರ್ ಸಂದೇಹಪಡಲು ಶುರು ಮಾಡಿದ್ದ. ಅದು ತನ್ನ ಮಗುವಲ್ಲ ಎಂದು ಕಿರಿಕ್ ತೆಗೆದ ಗರ್ಭಿಣಿ ಪತ್ನಿಯೊಂದಿಗೆ ಜಗಳವಾಡಿದ್ದ, ಜಗಳ ವಿಕೋಪಕ್ಕೆ ಹೋಗಿ ಹೆಂಡತಿ ಕೊಲೆಗೈದು ನಾಸೀರ್ ಪರಾರಿ ಆಗಿದ್ದಾನೆ.

ಶೀಲ ಶಂಕಿಸಿ ಪತ್ನಿಯ ಬರ್ಬರ್ ಹತ್ಯೆ; ಪತಿ‌ ನೇಣಿಗೆ ಶರಣು!

 ಅಲ್ಲದೆ ಕೊಲೆ‌ ಮಾಡಿದ ಬಳಿಕ ಪತ್ನಿ ನಾಜ್ ಸಹೋದರಿನಿಗೆ ನಿನ್ನ ತಂಗಿಯನ್ನು ಕೊಂದಿದ್ದೇನೆ ಹೋಗಿ ಹೆಣ ತೆಗೆದುಕೋ ಎಂದು ಮೆಸೆಜ್‌ ಮಾಡಿದ್ದಾನೆ. ಅಲ್ಲದೆ, ಯಾವ ವ್ಯಕ್ತಿಯ ಜೊತೆ ಸಂಬಂಧ ಇದೆಯೋ ಆ ವ್ಯಕ್ತಿಯನ್ನೂ ಕೊಲೆ ಮಾಡುತ್ತೇನೆ ಎಂದು ಮೆಸೆಜ್ ಮಾಡಿದ್ದಾನೆ.  

ಕೊಲೆಗೆ ಮೊದಲೇ ಪ್ಲಾನ್ ಮಾಡಿದ್ದ:

ಅರೋಪಿ ನಾಸಿರ್(Nazeer) ಮೂಲತಃ ಪಶ್ಚಿಮ ಬಂಗಾಳ(west bengal) ಮೂಲದವನಾಗಿದ್ದು, ಕೊಲೆ ಮಾಡುವ ಮೊದಲೇ ಪಕ್ಕಾ ಪ್ಲಾನ್ ಮಾಡಿದ್ದ. ಕೊಲೆ ಮಾಡುವ ಮೊದಲೇ ದೆಹಲಿಗೆ ಫ್ಲೈಟ್ ಟಿಕೆಟ್(Flight ticket) ಬುಕ್ ಮಾಡಿದ್ದ  ನಾಸಿರ್. ಅಲ್ಲದೆ ಏರ್ಪೋರ್ಟ್(Airport ಗೆ ಟ್ಯಾಕ್ಸಿ ತೆರಳಿದ್ದು,  ಟ್ಯಾಕ್ಸಿ ಚಾಲಕನಿಗೆ 4000 ಹಣ ಫೋನ್ ಪೇ ಮಾಡಿದ್ದ. ಬಳಿಕ ಮೂರು ಸಾವಿರದ ಐದುನೂರು ಹಣವನ್ನು ವಾಪಸ್ಸು ಪಡೆದುಕೊಂಡಿದ್ದ. ಪ್ಲೈಟ್ ಟೇಕ್ ಆಫ್ ಅಗುವ ಕೊನೆ ಕ್ಷಣದಲ್ಲಿ ಪತ್ನಿ ನಾಝ್ ಸಹೋದರನಿಗೆ ಕೊಲೆ ಬಗ್ಗೆ ಮೆಸೇಜ್ ಮಾಡಿದ್ದ. 

ಫೋನ್‌ನಲ್ಲೇ ಮುಳುಗಿರುತ್ತಿದ್ದ ಪತ್ನಿ, ಶೀಲ ಶಂಕಿಸಿ ಕೊಂದ ಪತಿ!

ನಿನ್ನ ತಂಗಿ ಅಕ್ರಮ ಸಂಬಂಧಕ್ಕೆ ಬೇಸತ್ತು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಬಾಡಿ ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿ ಮೊಬೈಲ್ ಆಫ್ ಮಾಡಿದ್ದಾನೆ.  ವಿಷಯ ತಿಳಿದ‌ ಕೂಡಲೇ ಸುದ್ದುಗುಂಟೆಪಾಳ್ಯ ಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು