ಇನ್ಸ್ಟಾಗ್ರಾಂ ರೀಲ್ಸ್‌ ಪೋಸ್ಟ್‌ ಮಾಡಿದ್ದಕ್ಕೆ ಹೆಂಡತಿಗೆ ತಲಾಖ್‌; ಕೊಲೆ ಬೆದರಿಕೆಯನ್ನೂ ಹಾಕಿದ ಪಾಪಿ ಪತಿ

Published : Jun 07, 2023, 03:45 PM IST
ಇನ್ಸ್ಟಾಗ್ರಾಂ ರೀಲ್ಸ್‌ ಪೋಸ್ಟ್‌ ಮಾಡಿದ್ದಕ್ಕೆ ಹೆಂಡತಿಗೆ ತಲಾಖ್‌; ಕೊಲೆ ಬೆದರಿಕೆಯನ್ನೂ ಹಾಕಿದ ಪಾಪಿ ಪತಿ

ಸಾರಾಂಶ

ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಿರುವ ವಿಡಿಯೋವನ್ನು ಡಿಲೀಟ್‌ ಮಾಡದಿದ್ದರೆ ಕೊಲೆ ಮಾಡುವುದಾಗಿಯೂ ಪತಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ

ಮುಂಬೈ (ಜೂನ್ 7, 2023): ಮುಂಬೈನ ಸಹರ್ ಪೊಲೀಸರು ಸೋಮವಾರ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಪ್ರಕಣ ದಾಖಲಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಪೋಸ್ಟ್ ಮಾಡಿದ್ದಕ್ಕೆ ತ್ರಿವಳಿ ತಲಾಖ್‌ ನೀಡಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ, ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಿರುವ ವಿಡಿಯೋವನ್ನು ಡಿಲೀಟ್‌ ಮಾಡದಿದ್ದರೆ ಕೊಲೆ ಮಾಡುವುದಾಗಿಯೂ ಪತಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಗಂಡ ಮತ್ತು ತನ್ನ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪಗಳನ್ನು ಸಹ ಹೊರಿಸಿದ್ದಾಳೆ.

ಇದನ್ನು ಓದಿ: ಅಯ್ಯೋ ಪಾಪ! ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ: ಸತ್ತಿದ್ದಾದ್ರೂ ಹೇಗೆ?

ದೂರುದಾರರಾದ ಕುರ್ಲಾ ನಿವಾಸಿ ರುಖ್ಸಾರ್ ಮುತಕೀಮ್ ಸಿದ್ದಿಕಿ (23) ಅವರು ಕಳೆದ ವರ್ಷ ಮಾರ್ಚ್ 22 ರಂದು ಅಂಧೇರಿ (ಪೂರ್ವ) ನಿವಾಸಿ ಮುತಕೀಮ್ ಸಿದ್ದಿಕಿ ಅವರನ್ನು ವಿವಾಹವಾದರು. ರುಖ್ಸಾರ್ ಅವರ ದೂರಿನ ಪ್ರಕಾರ, ಪತಿ ಮುತಕೀಮ್, ಅವರ ಪೋಷಕರು ಮತ್ತು ಸಹೋದರಿಯರು ವರದಕ್ಷಿಣೆಗಾಗಿ 5 ಲಕ್ಷ ರೂಪಾಯಿಗೆ ಒತ್ತಾಯಿಸಿ ಕಿರುಕುಳ ನೀಡಿದ್ದರು. ಅಲ್ಲದೆ, ಮುತಕೀಮ್ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಆಕೆ ನಮ್ಮ ಮನೆಗೂ ಬರುತ್ತಾಳೆ ಎಂದೂ ರುಖ್ಸಾರ್ ಆರೋಪಿಸಿದ್ದಾರೆ.

ಇನ್ನು, ಫೆಬ್ರವರಿ 2023 ರಲ್ಲಿ, ರುಖ್ಸಾರ್ ಅವರು ಅನಾರೋಗ್ಯಕ್ಕೆ ಒಳಗಾದ ನಂತರ ತನ್ನ ಪೋಷಕರ ನಿವಾಸಕ್ಕೆ ಹೋದರು ಮತ್ತು ಅಲ್ಲಿಯೇ ಇದ್ದರು. ಏಪ್ರಿಲ್‌ನಲ್ಲಿ, ಅವಳು ಮುತಕೀಮ್ ಜೊತೆಗೆ ತನ್ನನ್ನು ಒಳಗೊಂಡಿರುವ Instagram ರೀಲ್ಸ್‌ ಅನ್ನು ಪೋಸ್ಟ್ ಮಾಡಿದ್ದಾಳೆ ಎಂದೂ ಮಹಿಳೆ ಹೇಳಿಕೊಂಡಿದ್ದಾರೆ. ಆದರೆ, “ಮುತಕೀಮ್ ಈ ರೀಲ್ಸ್‌ನಿಂದ ಕೋಪಗೊಂಡರು ಮತ್ತು ಅದನ್ನು ತಕ್ಷಣ ಡಿಲೀಟ್‌ ಮಾಡುವಂತೆ ಕೇಳಿಕೊಂಡರು. ಡಿಲೀಟ್‌ ಮಾಡಲು ರುಖ್ಸಾರ್ ನಿರಾಕರಿಸಿದ್ದಕ್ಕೆ ಆಕೆಗೆ ಕೊಲೆ ಬೆದರಿಕೆಯನ್ನೂ ಪತಿ ಹಾಕಿದ್ದಾನೆ. ನಂತರ ಆಕೆ ಚುನಭಟ್ಟಿ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಲೀಪರ್ ಕೋಚ್ ಬಸ್‌ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು: ಬಲಿಯಾದ ಯುವತಿ, ಯುವಕ ಡಿಸ್ಚಾರ್ಜ್‌

ಏಪ್ರಿಲ್ 26 ರಂದು, ದೂರುದಾರರು, ಆಕೆಯ ತಾಯಿ ಮತ್ತು ಸಹೋದರಿ ರುಖ್ಸಾರ್‌ನನ್ನು ತನ್ನ ಗಂಡನ ನಿವಾಸಕ್ಕೆ ಹಿಂತಿರುಗಿಸಲು ಮುತಕೀಮ್‌ನ ಸ್ಥಳಕ್ಕೆ ಹೋದಾಗ, ಅವರನ್ನು ಮನೆಗೆ ಪ್ರವೇಶಿಸದಂತೆ ತಡೆಯಲಾಯಿತು. ನಂತರ ಮುತಕೀಮ್ ಮೂರು ಬಾರಿ ತಲಾಖ್ ಹೇಳಿದ್ದು, ಅಕ್ರಮವಾಗಿ ಪತ್ನಿಗೆ ವಿಚ್ಛೇದನ ನೀಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಎರಡೂ ಕಡೆಯ ಸಂಬಂಧಿಕರು ಮತ್ತು ಕುಟುಂಬ ಸ್ನೇಹಿತರು ವಾರಗಟ್ಟಲೆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ ವ್ಯರ್ಥವಾಗಿದೆ ಎಂದೂ ತಿಳಿದುಬಂದಿದೆ.

ಸೋಮವಾರ, ಮುತಕೀಮ್ ಮತ್ತು ಅವರ ಕುಟುಂಬದ ವಿರುದ್ಧ ರುಖ್ಸಾರ್ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ಮತ್ತು ಐಪಿಸಿ ಸೆಕ್ಷನ್ 498A (ಗಂಡ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪುರುಷ ಮತ್ತು ಅವನ ಕುಟುಂಬದ ಸದಸ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ