ಬೆಂಗಳೂರು:  ಕ್ರೂರ ಮನಸ್ಥಿತಿ.. ವರನಟ ಡಾ. ರಾಜ್ ಪುತ್ಥಳಿ ಮಂಟಪ ಧ್ವಂಸ

Published : Feb 12, 2021, 10:31 PM IST
ಬೆಂಗಳೂರು:  ಕ್ರೂರ ಮನಸ್ಥಿತಿ.. ವರನಟ ಡಾ. ರಾಜ್ ಪುತ್ಥಳಿ ಮಂಟಪ ಧ್ವಂಸ

ಸಾರಾಂಶ

ಕನ್ನಡದ ಮೇರು ನಟನ‌ ಪ್ರತಿಮೆ‌ ಉದ್ಘಾಟನೆಗೆ ಅಡ್ಡಿ/ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ ‌ದ್ವಂಸ ಗೊಳಿಸಿರುವ ಕಿಡಿಗೇಡಿಗಳು/ ವಿದ್ಯಾರಣ್ಯಪುರದ ಇಂದಿರಾ‌ಕ್ಯಾಂಟಿನ್ ಬಳಿ ಘಟನೆ/

ಬೆಂಗಳೂರು(ಫೆ. 12)  ಕನ್ನಡದ ಮೇರು ನಟನ‌ ಪ್ರತಿಮೆ ‌ಉದ್ಘಾಟನೆಗೆ ಅಡ್ಡಿ ವ್ಯಕ್ತವಾಗಿದೆ ಅದು ರಾಜಧಾನಿ ಬೆಂಗಳೂರಿನಲ್ಲಿಯೇ. ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ‌ವನ್ನು ಧ್ವಂಸಗೊಳಿಸಲಾಗಿದೆ.

ವಿದ್ಯಾರಣ್ಯಪುರದ ಇಂದಿರಾ‌ಕ್ಯಾಂಟಿನ್ ಬಳಿ ಘಟನೆ ನಡೆದಿದೆ. ಅದ್ದೂರಿಯಾಗಿ ಡಾ.‌ರಾಜ್ ಪುತ್ಥಳಿ  ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ಜಾಗದಲ್ಲಿ ಕಿಡಿಗೇಡಿಗಳು ಉಪಟಳ ಮೆರೆದಿದ್ದಾರೆ.

ವಿಷ್ಣು ಪ್ರತಿಮೆಗೆ ಅಪಮಾನ ಮಾಡಿದ್ದು ಯಾರು?

ಬಿಬಿಎಂಪಿ ವತಿಯಿಂದ ವರನಟನ‌ಪ್ರತಿಮೆಗೆ ಜಾಗ ಮೀಸಲಿಡಲಾಗಿತ್ತು. ಪುತ್ಥಳಿ ಸ್ಥಾಪನೆಯ ಬಹುತೇಕ ಕೆಲಸ ಪೂರ್ಣವಾಗಿತ್ತು. ಇಂದು ಏಕಾಏಕಿ  ಪುತ್ಥಳಿ ನಿರ್ಮಾಣ ಜಾಗದಲ್ಲಿ  ಉದ್ಧಟತನ ತೋರಿಸಿದ್ದಾರೆ. ವರನಟನಿಗೆ ಅವಮಾನ ಮಾಡಿರೋದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ಕನ್ನಡದ ಹಿರಿಯ ನಟರಿಗೆ, ಮೇರು ಕಲಾವಿದರಿಗೆ ಅವಮಾನ ಮಾಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ತೆಲುಗು ನಟನೊಬ್ಬ ಡಾ. ವಿಷ್ಣುವರ್ಧನ್ ಬಗ್ಗೆ  ಸಲ್ಲದ ಆರೋಪ ಮಾಡಿ ನಂತರ ಕ್ಷಮೆ ಕೇಳಿದ್ದ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು