16 ಸೆಕೆಂಡ್‌ನಲ್ಲಿ ಸೂಸೈಡ್‌, ಲಿಫ್ಟ್‌ ಹತ್ತಿ ಬಂದಾತ ಐಷಾರಾಮಿ ಮಾಲ್‌ನಿಂದ ಹಾರಿ ಆತ್ಮಹತ್ಯೆ!

Published : Jul 09, 2022, 06:49 PM IST
16 ಸೆಕೆಂಡ್‌ನಲ್ಲಿ ಸೂಸೈಡ್‌, ಲಿಫ್ಟ್‌ ಹತ್ತಿ ಬಂದಾತ ಐಷಾರಾಮಿ ಮಾಲ್‌ನಿಂದ ಹಾರಿ ಆತ್ಮಹತ್ಯೆ!

ಸಾರಾಂಶ

* ರಾಜಸ್ಥಾನದ ರಾಜಧಾನಿ ಜೈಪುರದಲ್ಲಿರುವ ಪಂಚತಾರಾ ಮಾಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ * ನೋಡ ನೋಡುತ್ತಿದ್ದಂತೆಯೇ ನಡೆಯಿತು ಶಾಕಿಂಗ್ ಘಟನೆ * ಲಿಫ್ಟ್‌ನಿಂದ ಮೇಲಕ್ಕೆ ಬಂದು ನಂತರ ಓಡುತ್ತಾ ಕೆಳಗೆ ಜಿಗಿದ ಎಂದ ಪ್ರತ್ಯಕ್ಷದರ್ಶಿಗಳು   

ಜೈಪುರ(ಜು.09): ರಾಜಸ್ಥಾನದ ರಾಜಧಾನಿ ಜೈಪುರದಲ್ಲಿರುವ ಪಂಚತಾರಾ ಮಾಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಲೈವ್ ವಿಡಿಯೋವೊಂದು ಹೊರಬಿದ್ದಿದೆ. ವೀಡಿಯೊದಲ್ಲಿ, ಯುವಕನೊಬ್ಬ ಮಾಲ್‌ನೊಳಗಿನ ಮೂರು ಮಹಡಿಗಳಿಂದ ಕೆಳಗೆ ಜಿಗಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಪೂರ್ಣ ಘಟನೆಯ 16 ಸೆಕೆಂಡುಗಳ ವಿಡಿಯೋ ಹೊರಬಿದ್ದಿದೆ. ಮೃತ ಯುವಕನನ್ನು ಪೊಲೀಸರು ಗುರುತಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೃತ ಯುವಕ ಕೆಂಪು ಟೀ ಶರ್ಟ್ ಮತ್ತು ಬಿಳಿ ಪೈಜಾಮಾ ಧರಿಸಿದ್ದಾರೆ. ಕೈಯಲ್ಲಿ ಬ್ಯಾಂಡೇಜ್ ಕಟ್ಟಲಾಗಿದೆ. ಈತ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಬಂದಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಅದು ಯಾವ ಆಸ್ಪತ್ರೆ ಎಂಬುದಕ್ಕೆ ತನಿಖೆ ನಡೆಯುತ್ತಿದೆ. ಈ ಮಾಲ್ ಟ್ರಿಟಾನ್ ಮಾಲ್ ಝೋತ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

ಲಿಫ್ಟ್‌ನಿಂದ ಮೇಲಕ್ಕೆ ಬಂದು ನಂತರ ಓಡುತ್ತಾ ಕೆಳಗೆ ಜಿಗಿದ ಎಂದ ಪ್ರತ್ಯಕ್ಷದರ್ಶಿಗಳು 

ವಿಷಯದ ಬಗ್ಗೆ ಮಾಹಿತಿ ಪಡೆದ ನಂತರ ಜೈಪುರ ಪಶ್ಚಿಮ ಜಿಲ್ಲೆಯ ನೂತನ ಡಿಸಿವಿ ವಂದಿತಾ ರಾಧಾ, ಎಸಿಪಿ ಪ್ರಮೋದ್ ಸ್ವಾಮಿ, ಎಸ್‌ಎಚ್‌ಒ ಜೊತ್ವಾರಾ ಸೇರಿದಂತೆ ಇತರ ಅಧಿಕಾರಿಗಳು ಆಗಮಿಸಿದರು. ತನಿಖೆಯ ಸಮಯದಲ್ಲಿ, ಪ್ರತ್ಯಕ್ಷದರ್ಶಿಯೊಬ್ಬರು ಯುವಕನ ವಯಸ್ಸು ಸುಮಾರು ಇಪ್ಪತ್ತೈದರಿಂದ ಮೂವತ್ತು ವರ್ಷ ಎಂದು ಪೊಲೀಸರಿಗೆ ತಿಳಿಸಿದರು. ಆತ ಮೊದಲು ಲಿಫ್ಟ್‌ ಮೂಲಕ ಮೇಲೆ ಬಂದ. ಮಾಲ್‌ನಲ್ಲಿ ಬಹಳ ಹೊತ್ತು ಸುತ್ತಾಡಿ, ಕೆಲವು ಅಂಗಡಿಗಳ ಹೊರಗೆ ನಿಂತು ಬಳಿಕ ಇದ್ದಕ್ಕಿದ್ದಂತೆ ಮೂರನೇ ಮಹಡಿಗೆ ಬಂದ. ಅವನು ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದ, ನೋಡ ನೋಡುತ್ತಿದ್ದಂತರೆಯೇ ರೇಲಿಂಗ್ ಬಳಿ ಓಡಿ ಬಂದು ಕೆಳಗೆ ಹಾರಿದ್ದು, ಇಡೀ ಘಟನೆ ಹದಿನಾರು ಸೆಕೆಂಡುಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿ.ಕಾಂ ವಿದ್ಯಾರ್ಥಿಯಾಗಿದ್ದ, ಸಿಎಗೆ ತಯಾರಿ ನಡೆಸುತ್ತಿದ್ದ, ಒತ್ತಡದಲ್ಲಿದ್ದ

ಮೃತನ ಬಳಿ ದೊರೆತ ದಾಖಲೆಗಳ ಆಧಾರದ ಮೇಲೆ ಆತನನ್ನು ಝೋತ್ವಾರಾ ಪ್ರದೇಶದ ಕಲ್ವಾರ್ ರಸ್ತೆಯ ನಿವಾಸಿ ರೋಹಿತ್ ಜೈನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಸಿಎ ಕೂಡ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಒತ್ತಡದಲ್ಲಿದ್ದರು. ಅವರ ಚಿಕಿತ್ಸೆಯೂ ನಡೆಯುತ್ತಿತ್ತು. ಈ ವಿಷಯ ಮನೆಯವರಿಗೆ ತಿಳಿದಾಗ ಗಲಾಟೆಯಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!