
ಮಧ್ಯಪ್ರದೇಶ: ಪತ್ನಿಗೆ ಅನೈತಿಕ ಸಂಬಂಧವಿದೆಯೆಂದು ಶಂಕಿಸಿ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಮೇ 21ರಿಂದ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರದ ಅವಶೇಷಗಳನ್ನು ಐಂತ್ಖೇಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಪ್ರಮೋದ್ ಕುಮಾರ್ ಸಿನ್ಹಾ ಮಾತನಾಡಿ, ನಿಶಾತ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕತ್ತರಿಸಿ, ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಗಬಾರದೆಂದು ಬಾಡಿ ಪಾರ್ಟ್ಸ್ನ್ನು ಭೋಪಾಲ್ನ ವಿವಿಧ ಪ್ರದೇಶಗಳಲ್ಲಿ ಬಿಸಾಡಿದ್ದಾನೆ. ಐಂತ್ಖೇಡಿ ಮತ್ತು ನಿಶಾತ್ಪುರ ಪೊಲೀಸರ ಜಂಟಿ ತಂಡವು ವ್ಯಕ್ತಿಯನ್ನು ಬಂಧಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮಹಿಳೆಯ ಅಸ್ಥಿಪಂಜರದ ಅವಶೇಷಗಳನ್ನು ಅರ್ವಾಲಿಯಾ ಖಾಂತಿಯಿಂದ ಐಂಟ್ಖೇಡಿ ಪೊಲೀಸರು ಶನಿವಾರ ಪತ್ತೆ ಮಾಡಿದ್ದಾರೆ. ನಿಶಾತ್ಪುರ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಐಂತ್ಖೇಡಿ ಪೊಲೀಸರು ಮಹಿಳೆ ಮೇ 21ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೇ 21ರಂದು ನಾದಿಮುದ್ದೀನ್ ಅವರ ಪತ್ನಿ ಸಾನಿಯಾ ಖಾನ್ ನಾಪತ್ತೆ ದೂರು ದಾಖಲಾದಾಗಿನಿಂದ ಪರಾರಿಯಾಗಿದ್ದರು.
ಮೈಸೂರಿನಲ್ಲಿ ಗುರಾಯಿಸಿ ನೋಡಿದಕ್ಕೆ ಯುವಕನ ಕೊಲೆ: ನಾಲ್ವರ ಬಂಧನ
ವಿಚಾರಣೆಯ ಸಮಯದಲ್ಲಿ, ನಾದಿಮುದ್ದೀನ್ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಐಂತ್ಖೇಡಿ ಪೊಲೀಸರ ನಿರಂತರ ವಿಚಾರಣೆಯ ನಂತರ ಸಾನಿಯಾಳ ದೇಹವನ್ನು ತುಂಡು ತುಂಡು ಮಾಡಿ ಎಸೆದಿರುವುದಾಗಿ ನೈಮುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ.
ತಲೆಬುರುಡೆ ಮತ್ತು ಸ್ನಾಯುಗಳು ಸೇರಿದಂತೆ ಸಾನಿಯಾ ಖಾನ್ ಅವರ 14 ಅಸ್ಥಿಪಂಜರದ ಅವಶೇಷಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಂಪತ್ಯ ದ್ರೋಹದ ಶಂಕೆಯಲ್ಲಿ ನದಿಯುಮುದ್ದೀನ್ ಸಾನಿಯಾ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಸಾನಿಯಾ ಸಂಬಂಧಿಕರು ಆರೋಪಿಸಿದ್ದಾರೆ ಎಂದು ಎಸ್ಪಿ ಪ್ರಮೋದ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ತನ್ನಿಂದ ಅತ್ಯಾಚಾರಕ್ಕೊಳಗಾದ ವಧುವಿನ ಅಪಹರಣಕ್ಕೆ ಕತ್ತಿ ಹಿಡಿದು ಬಂದ
ಎರಡು ತಿಂಗಳ ಹಿಂದೆ ಸಾನಿಯಾ ಅವರ ಆರು ತಿಂಗಳ ಮಗಳು ಆಕಸ್ಮಿಕವಾಗಿ ಕುದಿಯುವ ನೀರು ಬಿದ್ದು ಸಾವನ್ನಪ್ಪಿದ್ದಳು. ಅಲ್ಲಿಂದ ನೈಮುದ್ದೀನ್ ಜೊತೆ ಸಾನಿಯಾ ಸಂಬಂಧ ಹಳಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ