ವರದಕ್ಷಿಣೆಯಲ್ಲ, ವಧು ದಕ್ಷಿಣೆ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

Published : Aug 24, 2021, 11:53 AM ISTUpdated : Aug 24, 2021, 01:43 PM IST
ವರದಕ್ಷಿಣೆಯಲ್ಲ, ವಧು ದಕ್ಷಿಣೆ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಸಾರಾಂಶ

ವಧು ದಕ್ಷಿಣೆ ಕಾಟ ಜೋರಾಯ್ತು, ವ್ಯಕ್ತಿ ಆತ್ಮಹತ್ಯೆ ಹೆಂಡತಿ, ಅತ್ತೆ ಮನೆಯ ಕಾಟ ತಾಳದೆ ಸಾಯುತ್ತಿರುವುದಾಗಿ ಡೆತ್‌ನೋಟ್

ಪುಣೆ(ಆ.24): ವರ ದಕ್ಷಿಣೆ ಕಿರುಕುಳದಿಂದ ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ದಿನನಿತ್ಯ ನೋಡುತ್ತಿರುತ್ತೇವೆ. ಆದರೆ ಇಲ್ಲೊಂದು ಕಡೆ ವಧು ದಕ್ಷಿಣೆ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಸಾವಿಗೆ ಹೆಂಡತಿ ಹಾಗೂ ಅತ್ತೆ ಮನೆಯವರ ಕಾಟವೇ ಕಾರಣ ಎಂದೂ ಬರೆದಿಡಲಾಗಿದೆ.

ಪುಣೆಯ ಗೋಖಲೆನಗರ ಪ್ರದೇಶದ ತನ್ನ ಮನೆಯಲ್ಲಿ ತನ್ನ 30 ರ ಹರೆಯದ ವ್ಯಕ್ತಿ ಸೋಮವಾರ ತನ್ನ ಪತ್ನಿ ಮತ್ತು ಅತ್ತೆ ಮಾವಂದಿರ ಮೇಲೆ ದೋಷಾರೋಪಣೆ ಮಾಡಿದ ಪತ್ರವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆ ವ್ಯಕ್ತಿ ಆತ್ಮಹತ್ಯೆ ಮಾಡಿರುವ ಸ್ಥಿತಿಯಲ್ಲಿ ಆತನ ಕುಟುಂಬದವರು ಕಂಡಿದ್ದಾರೆ. ನಂತರ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅವರಿಗೆ ತಾಯಿ ಹಾಗೂ ಮಗುವಿತ್ತು.

ಆ ವ್ಯಕ್ತಿ ತನ್ನ ಪತ್ರದಲ್ಲಿ ತನ್ನ ಹೆಂಡತಿ ಮತ್ತು ಆಕೆಯ ಪೋಷಕರು ಮತ್ತು ಸಂಬಂಧಿಕರು 130,000 ತೆಗೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಮರಾಠಿಯಲ್ಲಿ ಡೆತ್ ನೋಟ್ ಎಂಬ ಶೀರ್ಷಿಕೆಯ ಅವನ ಪತ್ರದ ಒಂದು ಭಾಗವನ್ನು ಆಗಸ್ಟ್ 22, 2021 ರಂದು ಬರೆಯಲಾಗಿದೆ. ನನ್ನ ಮಗುವನ್ನು ನನ್ನಂತೆ ಭಾವಿಸಿ ಮತ್ತು ನನ್ನ ಮಗುವನ್ನು ನೋಡಿಕೊಳ್ಳಿ. ಇದಕ್ಕೆ ಕಾರಣರಾದವರಿಗೆ ಮಹಾರಾಷ್ಟ್ರ ಪೊಲೀಸರು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೇಳಲಾಗಿದೆ.

ಗಂಡನ ಮನೆ ಕಾಟ ತಾಳಲಾರೆ, ಮೆಸೇಜ್‌ ಕಳಿಸಿ ನೇಣಿಗೆ ಶರಣಾದ ನವವಿವಾಹಿತೆ

ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ಅವನ ಹೆಂಡತಿ ದೂರವಾಗಿದ್ದಳು. ಆಕೆಯ ಕುಟುಂಬವು ಆಕೆಯ ಗರ್ಭಪಾತಕ್ಕಾಗಿ ಆತನಿಂದ ಹಣವನ್ನು ತೆಗೆದುಕೊಂಡಿತು. ನಂತರ ಮದುವೆಗೆ ಖರ್ಚು ಮಾಡಿದ 7 ಲಕ್ಷವನ್ನು ಹಿಂದಿರುಗಿಸುವಂತೆ ಕೇಳಿಕೊಂಡರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

ಚತುರ್‌ಶೃಂಗಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಾಗಿದ್ದರೂ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜಕುಮಾರ ವಾಘಚೌರೆ, ಇಲ್ಲಿಯವರೆಗೆ ಪ್ರಕರಣದಲ್ಲಿ ಎಡಿಆರ್ ಇದೆ. ನಮ್ಮ ಬಳಿ ಆತ್ಮಹತ್ಯೆ ಪತ್ರವಿದ್ದು, ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುವುದು. ಅದರಲ್ಲಿನ ಆರೋಪಗಳು ಸಾಬೀತಾದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ