
ಹಲವರು ತಮ್ಮ ಬೇಸರ ನೀಗಿಸಿಕೊಳ್ಳಲು ಆನ್ಲೈನ್ ವಿಡಿಯೋ ಹಾಗೂ ಟೀವಿ ಸೀರಿಯಲ್ಗಳನ್ನು ನೋಡು ತ್ತಾರೆ ಎಂಬ ಭಾವನೆಯಿದೆ. ಆದರೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕಳವು ಮಾಡುವ ತರಬೇತಿಗಾಗಿ ಇಂಥ ವಿಡಿಯೋಗಳನ್ನು ವ್ಯಕ್ತಿಯೊಬ್ಬ ನೋಡುತ್ತಿದ್ದ ಎಂದರೆ, ನಂಬಲು ಸಾಧ್ಯವೇ?
ಉದ್ಧವ್ ಟೀಕಿಸಿದ ವ್ಯಕ್ತಿಯ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು!
ಹೌದು, ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ, ಆನ್ಲೈನ್ ಹಾಗೂ ಟೀವಿ ಸೀರಿಯಲ್ಗಳನ್ನು ನೋಡಿಯೇ ೨ ತಿಂಗಳಲ್ಲಿ ೭ ದರೋಡೆ ಕೃತ್ಯ ಎಸಗಿದ್ದು, ಆತನ ಬಳಿಯಿಂದ ೫ ಲಕ್ಷ ರು., ಬೈಕ್ ಹಾಗೂ ಚೂಪಾದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ರಾವತ್ ಪೊಲೀಸರ ಮುಂದೆ, ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್ಗಳನ್ನು, ವಿಡಿಯೋಗಳನ್ನು ನೋಡುತ್ತಿದ್ದೆ. ಇಂತಹ ವಿಡಿಯೋಗಳನ್ನು ನೋಡಿ ನೋಡಿಯೇ ರಾಬರಿ ಐಡಿಯಾಗಳು ಬರುತ್ತಿದ್ದವು ಎಂದು ಅವರೇ ಒಪ್ಪಿಕೊಂಡಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ರಾಜಿ ಇಲ್ಲ: ಪಾಕ್ ಸೇನಾಧ್ಯಕ್ಷ!
ದರೋಡೆ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳಬಾರದೆಂದು ಟಾರ್ಗೆಟ್ ಮಾಡಿದ ಸ್ಥಳದ ಸಿಸಿ ಕ್ಯಾಮೆರಾಗಳಿಂದ ವಿಡಿಯೋ ರೆಕಾರ್ಡರ್ಗಳನ್ನು ತೆಗೆಯುತ್ತಿದ್ದೆವು ಎಂದೂ ಒಪ್ಪಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ