Bengaluru: ಹಣ ಪಡೆಯುವಾಗ ಸ್ಕೂಲ್ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!

Published : May 31, 2023, 12:51 PM ISTUpdated : May 31, 2023, 01:03 PM IST
Bengaluru: ಹಣ ಪಡೆಯುವಾಗ ಸ್ಕೂಲ್ ಪ್ರಿನ್ಸಿಪಾಲ್  ಲೋಕಾಯುಕ್ತ ಬಲೆಗೆ!

ಸಾರಾಂಶ

ಬೆಂಗಳೂರಿನಲ್ಲಿ ಸ್ಕೂಲ್ ಪ್ರಿನ್ಸಿಪಾಲ್  ಲೋಕಾಯುಕ್ತ ಬಲೆ ಬಿದ್ದಿದ್ದಾನೆ. 5 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ

ಬೆಂಗಳೂರು (ಮೇ.31): ಬೆಂಗಳೂರಿನಲ್ಲಿ ಸ್ಕೂಲ್ ಪ್ರಿನ್ಸಿಪಾಲ್  ಲೋಕಾಯುಕ್ತ ಬಲೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳಿಂದ ಪ್ರಿನ್ಸಿಪಾಲ್ ನಾರಾಯಾಣ್ ಟ್ರ್ಯಾಪ್ ಆಗಿದ್ದು, ದಿವ್ಯಾ ಎಂಬುವವರಿಂದ 5 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.  ರಾಜಾಜಿನಗರದಲ್ಲಿರುವ ಬಸವೇಶ್ವರ ಬಾಲಕರ ಪೌಢಶಾಲೆಯಲ್ಲಿ ಈ  ಘಟನೆ ನಡೆದಿದ್ದು, ಪ್ರಿನ್ಸಿಪಾಲ್  9 ನೇ ತರಗತಿ ಫಲಿತಾಂಶ ತಡೆ ಹಿಡಿದಿದ್ದ ಹೀಗಾಗಿ ಪಾಸ್ ಮಾಡಿ ಟಿ.ಸಿ.ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಐದು ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾನೆ. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.

ಲೋಕಾಯುಕ್ತ ಬಲೆಗೆ ಪಿಡಿಒ
ಹು​ಬ್ಬ​ಳ್ಳಿ: ಗ್ರಾ​ಮ​ಸ್ಥ​ರೊ​ಬ್ಬರ ಕೆಲಸ ಮಾಡಿಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ತಾ​ಲೂ​ಕಿನ ಅ​ದ​ರ​ಗುಂಚಿ ಗ್ರಾಪಂ ಪಿ​ಡಿಒನನ್ನು ಲೋ​ಕಾ​ಯುಕ್ತ ಅಧಿ​ಕಾ​ರಿ​ಗಳು ಸೋ​ಮ​ವಾರ ತಮ್ಮ ಖೆ​ಡ್ಡಾಕ್ಕೆ ಕೆ​ಡ​ವಿ​ದ್ದಾರೆ.

Hassan: ತುತ್ತು ಅನ್ನ ಬೇಡಿ ಬಂದ 18 ಜನರನ್ನು ಜೀತಕಿಟ್ಟು ಉಪವಾಸದಿಂದ ಕೂಡಿ ಹಾಕಿದ

ಅ​ದ​ರ​ಗುಂಚಿ ಗ್ರಾ​ಪಂ ಪಿ​ಡಿಒ ಮ​ಕ್ತುಂಸಾಬ ಕ​ರ​ಡಿ​ಗು​ಡ್ಡದ ಎಂಬು​ವರೇ ಲೋ​ಕಾ​ಯುಕ್ತ ಬಲೆ ಬಿ​ದ್ದ​ವರು. ಗ್ರಾ​ಮ​ದಲ್ಲಿ ಇ-ಸ್ವತ್ತು ಮಾ​ಡಿ​ಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ಹಿ​ನ್ನೆ​ಲೆ​ಯಲ್ಲಿ ಗ್ರಾ​ಮಸ್ಥ​ರೊ​ಬ್ಬರು ಲೋ​ಕಾ​ಯುಕ್ತ ಮೊ​ರೆ ಹೋ​ಗಿ​ದ್ದರು. ಈ ಬಗ್ಗೆ ಖ​ಚಿತ ಮಾ​ಹಿತಿ ಮೇ​ರೆಗೆ ದಾಳಿ ನ​ಡೆ​ಸಿದ ಲೋ​ಕಾ​ಯುಕ್ತ ಅ​ಧಿಕಾ​ರಿ​ಗಳು ಪಿ​ಡಿಒ​ನನ್ನು ಬ​ಲೆಗೆ ಕೆ​ಡ​ವಿ​ದ್ದಾರೆ.

Harish Halli Death Case: ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಸಾವಲ್ಲ ವ್ಯವಸ್ಥಿತ ಕೊಲೆ

ಗ್ರಾಪಂನ​ಲ್ಲಿಯೇ ಪಿ​ಡಿಒ ಕ​ರ​ಡಿ​ಗು​ಡ್ಡದ ಅ​ವ​ರನ್ನು ಸು​ದೀರ್ಘ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿ​ದರು. ರಾ​ತ್ರಿ​ಯ​ವ​ರೆಗೂ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿದ​ರ​ಲ್ಲದೇ ಗ್ರಾಪಂದಲ್ಲಿನ ಇ-ಸ್ವ​ತ್ತು ಕ​ಡ​ತ​ಗ​ಳನ್ನು ಮತ್ತು ಇ​ತರೆ ​ಮಾ​ಹಿತಿ ಕಲೆ ಹಾ​ಕಿ​ದರು. ಈ ವೇಳೆ ಗ್ರಾ​ಪಂ ಬಳಿ ಗ್ರಾ​ಮ​ಸ್ಥರು ಹೆ​ಚ್ಚಿನ ಸಂಖ್ಯೆ​ಯಲ್ಲಿ ಜ​ಮೆ​ಯಾ​ಗಿ​ದ್ದ​ರಿಂದ ಕೆಲ ಹೊತ್ತು ಗೊಂದಲ ವಾ​ತಾ​ವ​ರಣ ಸಹ ನಿ​ರ್ಮಾ​ಣ​ಗೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?