ಜಾರಕಿಹೊಳಿಗೆ ದೊಡ್ಡ ಸಂಕಟ; ಕೊಟ್ಟ ಹೇಳಿಕೆಯೇ ಮುಳುವಾಯ್ತು!

Published : Mar 23, 2021, 05:46 PM IST
ಜಾರಕಿಹೊಳಿಗೆ ದೊಡ್ಡ ಸಂಕಟ; ಕೊಟ್ಟ ಹೇಳಿಕೆಯೇ ಮುಳುವಾಯ್ತು!

ಸಾರಾಂಶ

ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ/ ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು/ ಇಡಿ ಅಧಿಕಾರಿಗಳಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ/ ಮಾಧ್ಯಮಗಳ ಮುಂದೆ ಸಿಡಿ ಬಿಡುಗಡೆಗೆ ಕೋಟ್ಯಂತರ ರೂಪಾಯಿ ಡೀಲ್ ಆಗಿದೆ  ಎಂದಿದ್ದ ಜಾರಕಿಹೊಳಿ

ಬೆಂಗಳೂರು(ಮಾ. 23)  ಸಿಡಿ ಪ್ರಕರಣ ಅದು ಎಷಷ್ಟು ತಿರುವು ಪಡೆದುಕೊಲ್ಳುತ್ತಿದೆಯೋ ಗೊತ್ತಿಲ್ಲ.  ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ.

ಜಾರಿ ನಿರ್ದೇಶನಲಾಯದ ಕಚೇರಿಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ ಇಡಿ ಕಚೇರಿಗೆ ಕಾಂಗ್ರೆಸ್ ಮುಖಂಡ ಪುಟ್ಟರಾಜು ದೂರು ಸಲ್ಲಿಸಿದ್ದಾರೆ.

ಕಾಂಗ್ರೆಸ್‌ 'ಸಿಡಿ' ದಾಳಿಗೆ ಮೂಲ ಬಿಜೆಪಿಗ ಮೌನ.. ಮಿತ್ರ ಮಂಡಳಿ ಕತೆ ಮುಂದೇನು? 

ಶಾಂತಿ ನಗರದಲ್ಲಿರೋ ಇಡಿ ಕಚೇರಿಗೆ ದೂರು ಕೊಟ್ಟಿದ್ದಾರೆ ಮಾಧ್ಯಮಗಳ ಮುಂದೆ ಸಿಡಿ ಬಿಡುಗಡೆಗೆ ಕೋಟ್ಯಂತರ ರೂಪಾಯಿ ಡೀಲ್ ಆಗಿದೆ  ಎಂದು ಜಾರಕಿಹೊಳಿ ಹೇಳಿದ್ದರು. ಹಾಗಾದರೆ  ಹಣದ  ಮೂಲ ಯಾವುದು..? ಯಾವ ಆಧಾರದಲ್ಲಿ ಈ ಹೇಳಿಕೆ ಹೇಳಿದ್ರು? ಎಂದು ದೂರು ಸಲ್ಲಿಕೆಯಾಗಿದೆ.

ಯುವತಿಗೆ ಎರಡು  ಫ್ಲಾಟ್ ಕೊಟ್ಟಿದ್ದಾರೆ ಅಂತ ಕೂಡಾ ಆರೋಪಿಸಿದ್ದಾರೆ. ಹಾಗಾದರೆ  ರಮೇಶ್ ಬಳಿ ಮಾಹಿತಿ ಇದೆ ಎಂದ ಮೇಲೆ ಹಣದ ಮೂಲದ ವಿಚಾರಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಿಡಿ ಪ್ರಕರಣ ಸದನದಲ್ಲಿಯೂ ಪ್ರತಿಧ್ವನಿಸಿತ್ತು. ಕಾಂಗ್ರೆಸ್ ಮುಖಂಡರು ಪ್ರಶ್ನೆಗಳ ಸರಮಾಲೆಯನ್ನೇ ಇಟ್ಟಿದ್ದರು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೊಡಗು ಭೀಕರ ಅಪಘಾತದಲ್ಲಿ ಚಿತ್ರನಟ ಸಾವು ಬೆನ್ನಲ್ಲೇ ಬೆಂಗಳೂರಲ್ಲೂ ದುರಂತ ಘಟನೆ!
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು!