ಗಜೇಂದ್ರಗಡ: ನವಜಾತ ಶಿಶು ಕೊಂದು ಹೊಲದಲ್ಲಿ ಬಿಸಾಡಿದ ದುರುಳರು

By Kannadaprabha NewsFirst Published Mar 22, 2021, 11:48 AM IST
Highlights

ನವಜಾತ ಶಿಶುವಿನ ಮೃತದೇಹ ಪತ್ತೆ| ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಘಟನೆ| ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| 

ಗಜೇಂದ್ರಗಡ(ಮಾ.21): ಪಟ್ಟಣದಿಂದ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ನವಜಾತ ಶಿಶುವನ್ನು ಕೊಂದು ಎಸೆದು ಹೋಗಿರುವ ಅಮಾನುಷ ಘಟನೆ ಇಲ್ಲಿನ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ಭಾನುವಾರ ಪತ್ತೆಯಾಗಿದೆ.

ಸ್ಥಳೀಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಕೂಗಳತೆಯ ದೂರದ ಯಲಬುರ್ಗಾ ರಸ್ತೆಗೆ ಹೊಂದಿಕೊಂಡಿರುವ ಹೊಲವೊಂದರಲ್ಲಿ ಎಸೆದು ಹೋಗಿದ್ದ ಹಸುಗೂಸಿನ ಮುಖದಲ್ಲಿ ಗಾಯ ಹಾಗೂ ಕುತ್ತಿಗೆ ಸುತ್ತ ಬಿಗಿಯಾಗಿ ಬಿಗಿದಿದ್ದ ಸೀರೆ ಕಂಡ ಸಾರ್ವಜನಿಕರು ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಲಬುರಗಿ: ಚಿಂಚೋಳಿಯಲ್ಲಿ ನವಜಾತ ಶಿಶು ಪತ್ತೆ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪಿಎಸ್‌ಐ ಗುರುಶಾಂತ ದಾಶ್ಯಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

click me!