ಗುಜರಾತ್‌ ವ್ಯಾಪಾರಿಗಳ ಮೇಲೆ ಐಟಿ ರೇಡ್‌: 1000 ಕೋಟಿಗೂ ಅಧಿಕ ಕಪ್ಪು ಹಣ ಪತ್ತೆ..!

Published : Aug 02, 2022, 06:27 PM ISTUpdated : Aug 02, 2022, 06:28 PM IST
ಗುಜರಾತ್‌ ವ್ಯಾಪಾರಿಗಳ ಮೇಲೆ ಐಟಿ ರೇಡ್‌: 1000 ಕೋಟಿಗೂ ಅಧಿಕ ಕಪ್ಪು ಹಣ ಪತ್ತೆ..!

ಸಾರಾಂಶ

ಕಪ್ಪು ಹಣದ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಲ್ಲದೆ, ಐಟಿ, ಇಡಿಯಂತಹ ಸಂಸ್ಥೆಗಳು ಆಗಾಗ್ಗೆ ಉದ್ಯಮಿಗಳು, ರಾಜಕಾರಣಿಗಳು, ಅವರ ಆಪ್ತರ ಮೇಲೆ ರೇಡ್‌ ಮಾಡುತ್ತಲೇ ಇರುತ್ತವೆ. ಇದೇ ರೀತಿ, ಗುಜರಾತ್‌ ಉದ್ಯಮಿಗಳ ಗುಂಪಿನ ಮೇಲೆ ನಡೆದ ರೇಡ್‌ನಲ್ಲಿ 1000 ಕೋಟಿ ರೂ. ಗೂ ಅಧಿಕ ಕಪ್ಪು ಹಣ ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದ್ದಾರೆ. 

ದೇಶದಲ್ಲಿ ಇತ್ತೀಚೆಗೆ ಆಗಾಗ್ಗೆ ಐಟಿ, ಇಡಿ ದಾಳಿ ಬಗ್ಗೆ ವರದಿಯಾಗುತ್ತಿರುತ್ತದೆ. ಇದೇ ರೀತಿ, ಕಳೆದ ತಿಂಗಳು ಗುಜರಾತ್‌ (Gujarat) ಮೂಲದ ಉದ್ಯಮಿಗಳ ಮೇಲೆ ರೇಡ್‌ ಮಾಡಲಾಗಿದ್ದು, ಈ ವೇಳೆ 1 ಸಾವಿರ ಕೋಟಿ ರೂ. ಗೂ ಹೆಚ್ಚು ಲೆಕ್ಕಕ್ಕೆ ಸಿಗದ ಆದಾಯ ಅಥವಾ ಕಪ್ಪು ಹಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (Central Board of Direct Taxes) (ಸಿಬಿಡಿಟಿ) ಮಂಗಳವಾರ ಮಾಹಿತಿ ನೀಡಿದೆ. ಇನ್ನು, ಈ ಪೈಕಿ ಲೆಕ್ಕಕ್ಕೆ ಸಿಗದ 24 ಕೋಟಿ ರೂ. ನಗದು ಹಾಗೂ 20 ಕೋಟಿ ರೂ. ಮೌಲ್ಯದ ದಾಖಲೆ ನೀಡದ ಆಭರಣಗಳು, ಆಭರಣಗಳ ಗಟ್ಟಿ ಸೇರಿ ಹಲವು ವಸ್ತುಗಳನ್ನು ಈವರೆಗೆ ಸೀಜ್‌ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ. 

ಜುಲೈ 20 ರಂದು ಆದಾಯ ತೆರಿಗೆ ಇಲಾಖೆ ಖೇಡಾ, ಅಹಮದಾಬಾದ್‌, ಮುಂಬೈ, ಹೈದರಾಬಾದ್‌ ಹಾಗೂ ಕೋಲ್ಕತ್ತಾ ಸೇರಿ ಹಲವು ಸ್ಥಳಗಳ 58 ಕಚೇರಿಗಳಲ್ಲಿ ಪರಿಶೀಲನೆ ಮಾಡಲಾಗಿತ್ತು ಎಂದೂ ಹೇಳಲಾಗಿದೆ. ಈ ಪ್ರಮುಖ ಉದ್ಯಮಿಗಳ ಗುಂಪು ವಸ್ತ್ರ(Textiles), ಕೆಮಿಕಲ್ಸ್‌ (Chemicals), ಪ್ಯಾಕೇಜಿಂಗ್‌ (Packaging), ರಿಯಲ್‌ ಎಸ್ಟೇಟ್‌ (Real Estate) ಹಾಗೂ ಶಿಕ್ಷಣ (Education) ಸೇರಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಈ ಪ್ರಮುಖ ಉದ್ಯಮಿಗಳು ತೊಡಗಿಕೊಂಡಿದ್ದಾರೆ ಎಂದು ಸಿಬಿಡಿಟಿ ತಳಿಸಿದೆ. ಆದರೆ, ಈ ಉದ್ಯಮಿಗಳ ಗುಂಪಿನ ಬಗ್ಗೆ ಸಿಬಿಡಿಟಿ ಮಾಹಿತಿ ಬಿಟ್ಟುಕೊಟ್ಟಿಲ್ಲ. 

ಇದನ್ನೂ ಓದಿ: ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದ ಪ್ರಮಾಣದ ನಿಖರ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್

ಇನ್ನು, ಈ ರೇಡ್‌ಗಳ ವೇಳೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಡಿಜಿಟಲ್‌ ಡೇಟಾಗಳ ಪ್ರಕಾರ ಈ ಉದ್ಯಮಿಗಳ ಗುಂಪು ನಾನಾ ವಿಧಗಳ ಮೂಲಕ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿದೆ. ಈ ಪೈಕಿ ಖಾತೆಯ ಪುಸ್ತಕಗಳ ಹೊರಗೆ "ಲೆಕ್ಕರಹಿತ" ನಗದು ಮಾರಾಟದ ಮೂಲಕ, ನಕಲಿ ಖರೀದಿಗಳ ಬುಕಿಂಗ್ ಮತ್ತು ರಿಯಲ್ ಎಸ್ಟೇಟ್ ವಹಿವಾಟಿನಿಂದ ನಗದು ರಸೀದಿಗಳು ಸೇರಿದಂತೆ ತೆರಿಗೆ ವಂಚನೆ ಮಾಡಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ವಿವರಿಸಿದೆ.

ಇದನ್ನೂ ಓದಿ: ಭಾರತ ಹೊರತುಪಡಿಸಿ ಏಷ್ಯಾದ 14 ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ, ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ!

ಈ ಉದ್ಯಮಿಗಳ ಗುಂಪು ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಿಂದ ಷೇರು ಪ್ರೀಮಿಯಂ ಮೂಲಕವೂ ಲೆಕ್ಕಕ್ಕೆ ಸಿಗದ ಮೊತ್ತವನ್ನು ಹೂಡಿಕೆ ಮಾಡಲು ತೊಡಗಿಸಿಕೊಂಡಿದೆ. ನಗದು ಆಧಾರಿತ 'ಸರಾಫಿ' (ಸುರಕ್ಷಿತ) ಮುಂಗಡಗಳ ಮೂಲಕ ಗಳಿಸಿದ ಲೆಕ್ಕವಿಲ್ಲದ ಆದಾಯದ ಕೆಲವು ನಿದರ್ಶನಗಳು ಕಂಡುಬಂದಿವೆ ಎಂದು ಹೇಳಿಕೆ ತಿಳಿಸಿದೆ. ಅಲ್ಲದೆ, ಈ ವ್ಯಾಪಾರಿ ಗುಂಪು ಆಪರೇಟರ್‌ಗಳ ಮೂಲಕ ಅದರ ಪಟ್ಟಿ ಮಾಡಿದ ಕಂಪನಿಗಳ ಷೇರು ಬೆಲೆಗಳನ್ನು ಕುಶಲತೆಯ ಮೂಲಕ ಲಾಭದಾಯಕತೆಯಲ್ಲಿ ತೊಡಗಿಸಿಕೊಂಡಿದೆ. ವಶಪಡಿಸಿಕೊಂಡ ಡೇಟಾವು ಪ್ರವರ್ತಕರ ವೈಯಕ್ತಿಕ ಬಳಕೆಗಾಗಿ ಗುಂಪು ಕಾಲ್ಪನಿಕ ಘಟಕಗಳ ಮೂಲಕ ಹಣವನ್ನು ಕಸಿದುಕೊಳ್ಳುತ್ತಿದೆ ಎಂದು ಸೂಚಿಸುತ್ತದೆ. ಹಾಗೂ, ಇದು ಸಮೂಹದ ಸಾರ್ವಜನಿಕ ಸೀಮಿತ ಕಂಪನಿಗಳ ಖಾತೆಯ ಪುಸ್ತಕಗಳ "ಕುಶಲತೆ" ಎಂದು ಕಂಡುಬಂದಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ. ಭಾರತೀಯ ನಾಗರಿಕರು, ಕಂಪನಿಗಳು ಸ್ವಿಸ್ ಬ್ಯಾಂಕುಗಳಲ್ಲಿ ನಿಖರವಾಗಿ ಎಷ್ಟು ಮೊತ್ತದ ಹಣ ಇಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದರು. ಈ ವರದಿ ನಂತರ ಸಿಬಿಡಿಟಿ ನೀಡಿರುವ ಈ ವರದಿ ಸಹ ದೇಶದಲ್ಲಿರುವ ಹಾಗೂ ವಿದೇಶಗಳಲ್ಲಿರುವಕಪ್ಪು ಹಣದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!