
ಭಿಂಡ್(n.23): ಬ್ಯಾಂಕ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಯಾರೋ ಕಷ್ಟಪಟ್ಟು ಸಂಪಾದನೆ ಮಾಡಿ ಬ್ಯಾಂಕ್ ಖಾತೆಯಲ್ಲಿಟ್ಟಹಣದಲ್ಲಿ ಇನ್ಯಾರೋ ಮಜಾ ಮಾಡಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಅಲಂಪುರ ಪಟ್ಟಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ನಲ್ಲಿ ಅಕ್ಕಪಕ್ಕದ ರೂರೈ ಮತ್ತು ರೌನಿ ಊರಿನವರಾದ ಒಂದೇ ಹೆಸರು ಹೊಂದಿದ ಹುಕುಂ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳು ಖಾತೆ ತೆರೆದಿದ್ದರು. ಈ ಇಬ್ಬರಿಗೂ ಪ್ರತ್ಯೇಕ ಖಾತೆ ಸಂಖ್ಯೆ ನೀಡಬೇಕಿದ್ದ ಬ್ಯಾಂಕ್ ಸಿಬ್ಬಂದಿ ಇಬ್ಬರಿಗೂ ಒಂದೇ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ನೀಡಿ ಎಡವಟ್ಟು ಮಾಡಿದ್ದರು. ಈ ಬಗ್ಗೆ ಏನೂ ತಿಳಿಯದಿದ್ದ ರುರೈ ಗ್ರಾಮದ ಹುಕುಂ ಸಿಂಗ್ ಅವರು ಜಮೀನು ಖರೀದಿಗಾಗಿ ಆಗ್ಗಾಗ್ಗೆ ತಮ್ಮ ಖಾತೆಗೆ ಹಣ ಜಮಾವಣೆ ಮಾಡುತ್ತಾ ಹೋಗಿದ್ದಾರೆ. ರೌನಿ ಗ್ರಾಮದ ಮತ್ತೋರ್ವ ಹುಕುಂ ಸಿಂಗ್ ತನ್ನ ಖಾತೆಗೆ ಪದೇ ಪದೇ ಹಣ ಬರುತ್ತಿದ್ದನ್ನು ಗಮನಿಸಿ, ಪ್ರಧಾನಿ ನರೇಂದ್ರ ಮೋದಿ ಕಳುಹಿಸುತ್ತಿರಬಹುದು ಎಂದು ಭಾವಿಸಿ ಆ ಹಣ ತೆಗೆದು ಮಜಾ ಮಾಡಿದ್ದಾನೆ.
ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!
ರುರೈ ಗ್ರಾಮದ ಹುಕುಂ ಸಿಂಗ್ ಅ.16ರಂದು ತನ್ನ ಖಾತೆಯನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. 2016ರಲ್ಲಿ ಈ ಬ್ಯಾಂಕ್ನಲ್ಲಿ ತಾನು ಖಾತೆ ತೆರೆದು, ಜಮೀನು ಖರೀದಿಗಾಗಿ ಹಣ ಜಮಾವಣೆ ಮಾಡುತ್ತಿದ್ದೆ. ಆದರೆ, ಈ ಪೈಕಿ 89 ಸಾವಿರ ರು. ಅನ್ನು ಮತ್ತೊಬ್ಬರು ಮಜಾ ಮಾಡಿದ್ದಾರೆ ಎಂದು ಖಾತೆಯಲ್ಲಿರುವ ಹಣ ಕಳೆದುಕೊಂಡ ಸಂತ್ರಸ್ತ ಹುಕಂ ಸಿಂಗ್ ಅವಲತ್ತುಕೊಂಡಿದ್ದಾರೆ.
ನ.01ರವೆರೆಗೆ ಕಾಯಿರಿ: ಎಸ್ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ