
ಗೋಕಾಕ(ಸೆ.01): ಹೊಲಕ್ಕೆ ಜಾನುವಾರುಗಳಿಗೆ ಮೇವು ತರಲು ಹೋದ ಹೆಂಡತಿ ತಡಮಾಡಿದ್ದಕ್ಕೆ ಗಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಬೆಣಚಿನಮರ್ಡಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ನಿಂಗವ್ವ ಪುಂಡಲೀಕ ಕೊತ್ತಲ(45) ಕೊಲೆಯಾದ ಪತ್ನಿ. ನಿಂಗವ್ವ ಹಾಗೂ ಪತಿ ಪುಂಡಲೀಕ ನಡುವೆ ಕಳೆದ ಕೆಲ ವರ್ಷಗಳಿಂದ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪದೇ ಪದೇ ಜಗಳವಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಮೃತ ನಿಂಗವ್ವ ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದಳು. ಮೇವು ತರಲು ತಡವಾದ್ದರಿಂದ ಪತಿ ಪುಂಡಲೀಕ ಹೊಲಕ್ಕೆ ಹೋಗಿದ್ದು, ಪತ್ನಿ ನಿಂಗವ್ವ ಮೇವು ತರುತ್ತಿರುವುದನ್ನು ಕಂಡು ಇಷ್ಟೇಕೆ ತಡ ಮಾಡಿದ್ದಿಯಾ? ಎಂದು ಪ್ರಶ್ನಿಸಿದ್ದಾನೆ. ಪತಿ ಹಾಗೂ ಪತ್ನಿ ನಡುವೆ ವಾಕ್ಸಮರ ನಡೆದು ಪತ್ನಿ ನಿಂಗವ್ವಳನ್ನು ಮೇವು ತರಲು ಬಳಸುವ ಮಾರಕಾಸ್ತ್ರದಿಂದ ಕೊಚ್ಚಿ ಪತಿ ಪುಂಡಲೀಕ ಕೊಲೆ ಮಾಡಿದ್ದಾನೆ.
ಯುವಕನಿಗೆ ಆಂಟಿಯ ಕಾಮದ ರುಚಿ, ಹೈವೇ ರಸ್ತೆ: ಇಂಟ್ರಸ್ಟಿಂಗ್ ತನಿಖೆಯ ಕಹಾನಿ
ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪುಂಡಲೀಕ ಕೊತ್ತಲನನ್ನು ಬಂಧಿಸಿರುವದಾಗಿ ಪಿಎಸ್ಐ ನಾಗರಾಜ ಖಿಲಾರೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ