ಬೆಂಗಳೂರು: ಶೀಲ ಶಂಕಿಸಿ ಕುಡಿದ ನಶೆಯಲ್ಲಿ ಹೆಂಡ್ತಿ ಕೊಂದ ಪಾಪಿ ಗಂಡ!

By Girish GoudarFirst Published Oct 18, 2024, 8:14 PM IST
Highlights

ಪತಿ ಶ್ರೀನಿವಾಸ್ ಪತ್ನಿಯ ಕೈ ಮತ್ತು ತಲೆಗೆ ಮಚ್ಚಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದನಂತೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಧಾರನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸುಧಾ ಮೃತಪಟ್ಟಿದ್ದಾರೆ.

ಬೆಂಗಳೂರು(ಅ.18):   ಶೀಲ ಶಂಕಿಸಿ ಪತ್ನಿಯನನ್ನ ಪತಿ ಹತ್ಯೆಗೈದ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯ ಸಿಂಗೇನಹಳ್ಳಿಯಲ್ಲಿ ಇಂದು(ಶುಕ್ರವಾರ) ನಡೆದಿದೆ. ಸುಧಾ(50) ಪತಿಯಿಂದಲೇ ಕೊಲೆಯಾದ ದುರ್ದೈವಿ. 

ಪತಿ ಶ್ರೀನಿವಾಸ್ ಪತ್ನಿಯ ಕೈ ಮತ್ತು ತಲೆಗೆ ಮಚ್ಚಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದನಂತೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಧಾರನ್ನ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸುಧಾ ಮೃತಪಟ್ಟಿದ್ದಾರೆ.

Latest Videos

ಬೆಳಗಾವಿ: ಉದ್ಯಮಿ ಸಂತೋಷ ಕೊಲೆ ಕೇಸ್‌, ಮೂವರಿಗೆ 14 ದಿನ ನ್ಯಾಯಾಂಗ ಬಂಧನ

ಘಟನೆ ಬಳಿಕ ಪತಿ ಶ್ರೀನಿವಾಸ್‌ ಪರಾರಿಯಾಗಿದ್ದಾನೆ. ಸದ್ಯ ಎಸ್ಕೇಪ್ ಆಗಿರೋ ಆರೋಪಿ ಶ್ರೀನಿವಾಸ್ ಗೆ ಪೊಲೀಸರು ಶೋದಕಾರ್ಯ ಆರಂಭಿಸಿದ್ದಾರೆ.  ಕುಡಿದ ಅಮಲಿನಲ್ಲಿ ಹೆಂಡತಿಯನ್ನ ಪತಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಾಗಲೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. 

click me!