West Bengal: ಪರ್ಮಿಷನ್ ಇಲ್ಲದೇ ಫೋನ್ ಖರೀದಿಸಿದ ಹೆಂಡತಿ ಕೊಲ್ಲಲು ಸುಪಾರಿ ಕೊಟ್ಟ ಗಂಡ!

Published : Jan 24, 2022, 03:51 PM ISTUpdated : Jan 24, 2022, 05:15 PM IST
West Bengal: ಪರ್ಮಿಷನ್ ಇಲ್ಲದೇ ಫೋನ್ ಖರೀದಿಸಿದ ಹೆಂಡತಿ ಕೊಲ್ಲಲು ಸುಪಾರಿ ಕೊಟ್ಟ ಗಂಡ!

ಸಾರಾಂಶ

* ಗಂಡನ ಅನುಮತಿ ಇಲ್ಲದೇ ಫೋನ್ ಖರೀದಿ * ಹೆಂಡತಿ ಕೃತ್ಯಕ್ಕೆ ಗಂಡ ಗರಂ * ಹೆಂಡತಿ ಕೊಲೆಗೆ ಸುಪಾರಿ ಕೊಟ್ಟ ಗಂಡ

ಕೋಲ್ಕತ್ತಾ(ಜ.24): ಗಂಡ-ಹೆಂಡತಿ ನಡುವೆ ಒಂದಲ್ಲ ಒಂದು ವಿಷಯಕ್ಕೆ ಆಗಾಗ ಜಗಳ ನಡೆಯುತ್ತಿರುತ್ತದೆ. ಕೆಲವೊಮ್ಮೆ ಇದಕ್ಕೆ ಕಾರಣ ಮೊಬೈಲ್ ಫೋನ್ ಕೂಡ ಆಗುತ್ತದೆ. ಆದರೆ ದಂಪತಿಗಳ ನಡುವಿನ ಜಗಳಕ್ಕೆ ಈ ಸ್ಮಾರ್ಟ್‌ಫೋನ್ ದೊಡ್ಡ ಕಾರಣವಾಗಿದೆ, ಗಂಡ ಹೆಂಡತಿಯನ್ನು ಕೊಲ್ಲಲು ಗುತ್ತಿಗೆ ಕಿಲ್ಲರ್ ಅನ್ನು ಬಾಡಿಗೆಗೆ ಕರೆದು ಹೆಂಡತಿಯನ್ನು ಕೊಲ್ಲುವ ಗುತ್ತಿಗೆಯನ್ನು ನೀಡಿದ್ದಾನೆ. ಈ ಘಟನೆ ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ.

ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ. ಕೋಲ್ಕತ್ತಾದ ಹೊರವಲಯದಲ್ಲಿರುವ ನರೇಂದ್ರಪುರದಲ್ಲಿ ವಾಸಿಸುವ 40 ವರ್ಷದ ವ್ಯಕ್ತಿಯೊಬ್ಬರು, ತನ್ನ ಪತ್ನಿ ಅನುಮತಿಯಿಲ್ಲದೆ ತನಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ ಕಾರಣಕ್ಕೆ ಪತ್ನಿಯ ಮೇಲೆ ಕೋಪಗೊಂಡಿದ್ದಾರೆ. ಆದರೆ, ಈ ಸಂಪೂರ್ಣ ಘಟನೆಯ ಬಳಿಕ ಹಂತಕ ಹಾಗೂ ಆಕೆಯ ಪತಿಯನ್ನು ಬಂಧಿಸಲಾಗಿದೆ.

ಘಟನೆಯ ಪ್ರಕಾರ, ಕೋಲ್ಕತ್ತಾದ ನರೇಂದ್ರಪುರದಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ತನಗಾಗಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುವಂತೆ ತನ್ನ ಪತಿಗೆ ಹೇಳಿದ್ದಾಗಿ ಗಾಯಗೊಂಡಿರುವ ಆತನ ಪತ್ನಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪತಿ ಆಕೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ನಿರಾಕರಿಸಿದ್ದಾನೆ. ಇದಾದ ನಂತರ ಅವನ ಹೆಂಡತಿಗೆ ಸ್ವಲ್ಪ ಬೇಸರವಾಗಿದೆ.

ಮಹಿಳೆಯೂ ಒಂದಿಷ್ಟು ಟ್ಯೂಷನ್ ಹೇಳಿಕೊಡುತ್ತಿದ್ದಳು, ಇದರಿಂದ ಆಕೆ ಬಳಿಯೂ ಹಣವಿತ್ತು. ಹೀಗಾಗಿ ಪತಿಯನ್ನು ಕೇಳದೆ ಸ್ವಂತ ಸಂಪಾದನೆಯಿಂದ ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದಳು ಪತ್ನಿ. ಜನವರಿ 1 ರಂದು ಆಕೆಯ ಹೊಸ ಸ್ಮಾರ್ಟ್‌ಫೋನ್ ಅವರ ಮನೆಗೆ ಬಂದಿತ್ತು. ಹೊಸ ಸ್ಮಾರ್ಟ್ ಫೋನ್ ಬಂದಿದ್ದಕ್ಕೆ ಪತ್ನಿ ಸಂತಸ ವ್ಯಕ್ತಪಡಿಸಿದ್ದು, ಈ ವಿಚಾರ ಪತಿಗೆ ತಿಳಿದಾಗ ಕೋಪಗೊಂಡು ಪತ್ನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ಗುರುವಾರ ರಾತ್ರಿ ಆಕೆಯ ಪತಿ ಕೊಠಡಿಯ ಮುಖ್ಯ ಬಾಗಿಲನ್ನು ಲಾಕ್ ಮಾಡಲು ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆತ ಹಿಂತಿರುಗಿರಲಿಲ್ಲ. ಇದಾದ ನಂತರ ಪತ್ನಿಗೆ ಸ್ವಲ್ಪ ಅನುಮಾನ ಬಂದಾಗ ಪತಿಯನ್ನು ಹುಡುಕಲು ಹೊರಟಿದ್ದಾಳೆ. ಆಗ ಹಂತಕರು ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ.

ಹಂತಕರಲ್ಲಿ ಒಬ್ಬ ಮಹಿಳೆಯ ಕುತ್ತಿಗೆಯಲ್ಲಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಕತ್ತಿನ ಭಾಗ ಸೀಳಿ ತೀವ್ರ ರಕ್ತಸ್ರಾವವಾಗಿತ್ತು. ಹೀಗಿರುವಾಗ ಮಹಿಳೆ ಕೂಗಾಡಿದ್ದು, ಈ ವೇಳೆ ಸುತ್ತಮುತ್ತಲಿನ ಜನರು ಓಡೋಡಿ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆರೋಪಿ ಪತಿ ಮತ್ತು ಬಾಡಿಗೆ ಹಂತಕನನ್ನು ಜನರು ಹಿಡಿದಿದ್ದಾರೆ. ಅದೇ ವೇಳೆ ತಲೆಮರೆಸಿಕೊಂಡಿರುವ ಮತ್ತೊಬ್ಬ ದಾಳಿಕೋರನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ