
ಹುಬ್ಬಳ್ಳಿ (ಮೇ.30): ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳಿಂದ ಫಕೀರ ವೇಷ ಧರಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸೈಫ್ ಅಲಿ ಬಾಂಬೆ, ಬಂಧಿತ ಆರೋಪಿ. 2016ರಲ್ಲಿ ನಡೆದಿದ್ದ ಕೊಲೆ. ಹು-ಧಾ ಪಾಲಿಕೆ ಸದಸ್ಯ ಆರೀಪ್ ಭದ್ರಾಪೂರ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಸೈಫ್ ಅಲಿ ಬಾಂಬೆ. ಬಳಿಕ 2016 ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಪೊಲೀಸರಿಗೆ ಸಿಕ್ಕಿರಲಿಲ್ಲ.
ಪಕೀರ ವೇಷ ಧರಿಸಿ ದೇಶವನ್ನೇ ಸುತ್ತಿರುವ ಸೈಫ್ ಅಲಿ ಬಾಂಬೆ. ಫಕೀರ್ ವೇಷ ಧರಿಸಿ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಬೆನ್ನಹತ್ತಿದ ಹುಬ್ಬಳ್ಳಿ ಶಹರ ಪೊಲೀಸರು ಕೊನೆಗೂ ಹಂತಕನನ್ನ ಬಂಧಿಸಿದ್ದಾರೆ.
ನಿಜವಾಯ್ತು ವರ್ತೆ ಪಂಜುರ್ಲಿ ದೈವದ ನುಡಿ; ತಲೆಮರೆಸಿಕೊಂಡಿದ್ದ ಪಾತಕಿ ಕೋರ್ಟ್ ಮುಂದೆ ಹಾಜರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ