ಹಿರೇಕೇರೂರು: ಎನ್ಐಎ ದಾಳಿಯಿಂದ ಬೇಸತ್ತು ಪ್ರತೀಕಾರಕ್ಕೆ ಸಜ್ಜಾಗಿದ್ದ ಪಿಎಫ್ಐ ತಾಲೂಕಾಧ್ಯಕ್ಷ ಅರೆಸ್ಟ್

Published : Sep 27, 2022, 08:09 PM IST
ಹಿರೇಕೇರೂರು: ಎನ್ಐಎ ದಾಳಿಯಿಂದ ಬೇಸತ್ತು ಪ್ರತೀಕಾರಕ್ಕೆ ಸಜ್ಜಾಗಿದ್ದ ಪಿಎಫ್ಐ ತಾಲೂಕಾಧ್ಯಕ್ಷ ಅರೆಸ್ಟ್

ಸಾರಾಂಶ

ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ತಿಳಿಸಿದ ಪೊಲೀಸ್ ಇಲಾಖೆ 

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ(ಸೆ. 27):  ಜಿಲ್ಲೆಯ ಹಿರೇಕೆರೂರು ತಾಲೂಕು ಪಿಎಫ್ಐ ಸಂಘಟನೆಯ ತಾಲೂಕಾಧ್ಯಕ್ಷನನ್ನು ಪೊಲೀಸರು ಇಂದು(ಮಂಗಳವಾರ) ಬಂಧಿಸಿದ್ದಾರೆ. ರಬ್ಬಾನಿ ಲೋಹಾರ (29) ಬಂಧಿತ ಆರೋಪಿಯಾಗಿದ್ದಾನೆ.

ಮುಂಜಾಗ್ರತಾ ಕ್ರಮವಾಗಿ ರಬ್ಬಾನಿಯನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಪಟ್ಟಣದ ಬಸವೇಶ್ವರ ನಗರದ ಮೂರನೇ ಕ್ರಾಸ್​ನಲ್ಲಿರೋ ನಿವಾಸದಲ್ಲಿದ್ದ ವೇಳೆ ಅವರನ್ನು ಅರೆಸ್ಟ್ ಮಾಡಲಾಗಿದೆ. ಅರೆಸ್ಟ್ ಮಾಡಿ ತಾಲೂಕು ದಂಡಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಗಿದೆ.

ಎನ್‌ಐಎ ದಾಳಿ ಪ್ರತಿಕಾರಕ್ಕೆ ಸಂಚು, ತುಮಕೂರು ಪಿಎಫ್‌ಐ ಜಿಲ್ಲಾಧ್ಯಕ್ಷನ ಬಂಧನ

ಇತ್ತೀಚೆಗೆ ಎನ್ಐಎಯಿಂದ ಪಿಎಫ್ಐ ಮುಖಂಡರ ಮೇಲೆ ನಿರಂತರವಾಗಿ ದಾಳಿ ನಡೆದ ಕಾರಣ ಬೇಸತ್ತಿದ್ದ ರಬ್ಬಾನಿ ಪ್ರತೀಕಾರಕ್ಕೆ ಸಜ್ಜಾಗಿದ್ದ. ಸಮಾಜದಲ್ಲಿ ಶಾಂತಿ ಕದಡಲು ಸಂಚು ರೂಪಿಸಿದ್ದ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಅರೆಸ್ಟ್ ಮಾಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!