ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

Published : Nov 26, 2023, 10:18 AM ISTUpdated : Nov 26, 2023, 10:19 AM IST
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪರಿಚಯ ಇದೆ ಅಂತ ಹೇಳಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಬಿಜೆಪಿ ಹೈಕಮಾಂಡ್‌ನವರೂ ಕೂಡ ಪರಿಚಯ ಇದ್ದಾರೆ ಎಂದು ಹೇಳಿ ವಂಚನೆ ಮಾಡಿದ್ದಾನೆ. ಬಿಜೆಪಿ ಹೈಕಮಾಂಡ್‌ನವರನ್ನ ಪರಿಚಯ ಮಾಡಿಸುತ್ತೇನೆ, ನಂತ್ರ ನಿಮಗೆ ರಾಜಕೀಯದಲ್ಲಿ ಕೆಲಸ ಮಾಡಿಕೊಡ್ತೇನೆ ಅಂತ  ಹೇಳಿದ್ದ ಆರೋಪಿ. 

ಬೆಂಗಳೂರು(ನ.26):  ದೊಡ್ಡ ದೊಡ್ಡವರ ಹೆಸರು ಹೇಳಿಕೊಂಡು ಸಾಲು ಸಾಲು ವಂಚನೆ ಮಾಡುತ್ತಿದ್ದವನನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಯುಸೂಫ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.  ಆರೋಪಿ ಯುಸೂಫ್ ಮೊದಲಿಗೆ ಉದ್ಯಮಿಗಳನ್ನು ಪರಿಚಯ ಮಾಡಿಕೊಳ್ತಿದ್ದ, ನಂತ್ರ ಆ ಉದ್ಯಮಿಗಳಿಗೆ ಏನಾದ್ರೂ ಸಮಸ್ಯೆ ಇದೆಯಾ ಅಂತ ನೋಡ್ತಾ ಇದ್ದ. ಬಳಿಕ ಅವರಿಗೆ ಸಹಾಯ ಮಾಡೋ ನೆಪದಲ್ಲಿ ಆರೋಪಿ ಹಣ ಪಡೆಯುತ್ತಿದ್ದನಂತೆ. 

ಟ್ರಾವಲ್ ಕಂಪನಿ ಮಾಲೀಕರಿಗೆ ಜಿಎಸ್‌ಟಿ ಕಮಿಷನರ್ ಹೆಸರಲ್ಲಿ ವಂಚನೆ ಮಾಡಿದ್ದಾನೆ. ಟ್ರಾವಲ್ ಕಂಪನಿ ಮಾಲೀಕರು ಜಿಎಸ್‌ಟಿ ಕಟ್ಟಬೇಕಿತ್ತು, ಕೋಟ್ಯಂತರ ರೂ. ಜಿಎಸ್‌ಟಿ ಬಗ್ಗೆ ಮಾತಾನಾಡಿದ್ದರು. ಈ ವೇಳೆ ಜಿಎಸ್‌ಟಿ ಕಮಿಷನರ್ ತನಗೆ ಪರಿಚಯ ಎಂದು ಹೇಳಿಕೊಂಡು ಜಿಎಸ್‌ಟಿ ಕಮಿಷನರ್ ಕಚೇರಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದನಂತೆ. ಸಾರ್ ಇವ್ರು ನಮ್ಮ ಸ್ನೇಹಿತರು ಎಂದು ಪರಿಚಯ ಮಾಡಿಸಿದ್ದನು. ಬಳಿಕ  ಹೊರಬಂದ ಮೇಲೆ ನಾನು ಮಾತನಾಡಿದ್ದೇನೆ ನಿಮ್ಮ ಜಿಎಸ್‌ಟಿ ಬಿಲ್ 50% ಪರ್ಸೆಂಟ್ ಕಡಿಮೆ ಮಾಡ್ತಿವಿ ಎಂದು ಹೇಳ್ತಿದ್ದನಂತೆ. ಬಳಿಕ ಅಡ್ವಾನ್ಸ್ ಎಂದು 15-20 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದನು.  

ಓದಿದ್ದು SSLC..ಗಳಿಸಿದ್ದು ಕೋಟಿ ಕೋಟಿ..! ಮೋಸಗಾರ ಸುಕೇಶ್ ತಗಲಾಕಿಕೊಂಡಿದ್ದು ಹೇಗೆ..?

ಬ್ಯಾಂಕ್ ಲೋನ್ ಪಡೆಯಲು ಪ್ರಯತ್ನ ಮಾಡ್ತಿದ್ದವರಿಗೆ ಬ್ಯಾಂಕ್ ಮ್ಯಾನೇಜರ್ ಪರಿಚಯ ಎಂದು ನಂಬಿಸಿದ್ದನು. ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಮ್ಯಾನೇಜರ್ ಬಳಿ ಮಾತಾಡಿಸಿ ಲೋನ್ ಮಾಡಿಸಿಕೊಡ್ತಿನಿ ಎಂದು ಹೇಳಿ ಹಣ ಪಡೆದುಕೊಂಡು ವಂಚಿಸುತ್ತಿದ್ದನು. 

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪರಿಚಯ ಇದೆ ಅಂತ ಹೇಳಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಬಿಜೆಪಿ ಹೈಕಮಾಂಡ್‌ನವರೂ ಕೂಡ ಪರಿಚಯ ಇದ್ದಾರೆ ಎಂದು ಹೇಳಿ ವಂಚನೆ ಮಾಡಿದ್ದಾನೆ. ಬಿಜೆಪಿ ಹೈಕಮಾಂಡ್‌ನವರನ್ನ ಪರಿಚಯ ಮಾಡಿಸುತ್ತೇನೆ, ನಂತ್ರ ನಿಮಗೆ ರಾಜಕೀಯದಲ್ಲಿ ಕೆಲಸ ಮಾಡಿಕೊಡ್ತೇನೆ ಅಂತ  ಹೇಳಿದ್ದನಂತೆ.  ಈ ಸಂಬಂಧ ಇದೀಗ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಅರೋಪಿ ಯುಸೂಫ್ ವಿರುದ್ಧ ಕೇಸ್ ದಾಖಲಾಗಿದೆ. ಸದ್ಯ ಪ್ರಕರಣವನ್ನು ಪೊಲೀಸರು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!