ಬೆಂಗಳೂರು; ಮದ್ಯಪಾನ ಮಾಡಿ ಬಂದು ಸೆಕ್ಸ್ ಬೇಕೆಂದು ಸ್ನೇಹಿತನ ಬಟ್ಟೆ ಕಳಚಿದ 'ಕಾಮ ಕಿರಾತಕ'

By Suvarna NewsFirst Published Jan 11, 2021, 7:39 PM IST
Highlights

ಮದ್ಯಪಾನ ಮಾಡಿ‌ ಲೈಂಗಿಕ ಕ್ರಿಯೆ ಗೆ ಒತ್ತಾಯಿಸುತ್ತಿದ್ದ ಸ್ನೇಹಿತನ ಕೊಲೆ/ ಅಜಿತ್ ಅಲಿಯಾಸ್ ಚೋಟು  (30) ಕೊಲೆಯಾದ ಯುವಕ/ ಚಂದ್ರ ಕುಮಾರ್ ಮಲಗಿದ್ದ ವೇಳೆ ಬಟ್ಟೆ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಮುಂದಾದ ಅಜಿತ್ / ಹಲಸೂರು ಗೇಟ್ ಪೊಲೀಸ್ ಠಾಣೆಯ ಸೂಪ್ಪಿನ ಮಾರ್ಕೆಟ್ ನಲ್ಲಿ ಕೊಲೆ

ಬೆಂಗಳೂರು(ಜ. 11) ಮದ್ಯಪಾನ ಮಾಡಿ‌ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಸ್ನೇಹಿತನ್ನು ಕೊನೆಗೂ ಯುವಕ ಹತ್ಯೆ ಮಾಡಿದ್ದಾನೆ. ಅಜಿತ್ ಅಲಿಯಾಸ್ ಚೋಟು  (30) ಕೊಲೆಯಾದ ಯುವಕ.  ಚಂದ್ರ ಕುಮಾರ್ ಮಲಗಿದ್ದ ವೇಳೆ ಬಟ್ಟೆ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಅಜಿತ್ ಮುಂದಾಗಿದ್ದ.

'ಹಣೆ ಮೇಲಿನ ಕುಂಕುಮ ತೆಗೆದು ಇಸ್ಲಾಂ ಸೇರಿಕೊ' ಬೆಂಗ್ಳೂರಲ್ಲೇ ಲವ್ ಜಿಹಾದ್!

ಹಲಸೂರು ಗೇಟ್ ಪೊಲೀಸ್ ಠಾಣೆಯ ಸೂಪ್ಪಿನ ಮಾರ್ಕೆಟ್ ನಲ್ಲಿ ಕೊಲೆಯಾಗಿದೆ. ಚಂದ್ರ ಕುಮಾರ್ ಹಾಗೂ ಅಜಿತ್ ಇಬ್ಬರು ಸ್ನೇಹಿತರು. ಪತ್ರಿದಿನ ಅಜಿತ್ ಮದ್ಯಪಾನ ಮಾಡಿ ಬಂದು ಚಂದ್ರ ಕುಮಾರ್ ಬಳಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮೊನ್ನೆ ರಾತ್ರಿ ಅಜಿತ್ ಮದ್ಯ ಸೇವಿಸಿ ಚಂದ್ರ ಕುಮಾರ್ ಬಳಿ ಗಲಾಟೆ ಮಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಚಂದ್ರ ಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಹಲಸೂರು ಗೇಟ್ ಪೊಲೀಸರು ಆರೋಪಿ ಚಂದ್ರ ಕುಮಾರ್  ನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಮಟ್ಟಿಗೆ ಇದೊಂದು ವಿಚಿತ್ರ ಪ್ರಕರಣ. 

 

 

click me!