ಗದಗ: ಕಡತ ತಿದ್ದಿ, ಸರ್ಕಾರಿ ಹಣ ದುರುಪಯೋಗ, ಜಿಮ್ಸ್ ಮಾಜಿ ನಿರ್ದೇಶಕ ಭೂಸರೆಡ್ಡಿ ವಿರುದ್ಧ ಎಫ್‌ಐಆರ್..!

Published : Feb 22, 2023, 02:00 AM IST
ಗದಗ: ಕಡತ ತಿದ್ದಿ, ಸರ್ಕಾರಿ ಹಣ ದುರುಪಯೋಗ, ಜಿಮ್ಸ್ ಮಾಜಿ ನಿರ್ದೇಶಕ ಭೂಸರೆಡ್ಡಿ ವಿರುದ್ಧ ಎಫ್‌ಐಆರ್..!

ಸಾರಾಂಶ

ಸರ್ಕಾರಿ ದಾಖಲೆಗಳನ್ನ ಕಳ್ಳತನ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮೂಲ ದಾಖಲೆಯಲ್ಲಿ ಸೇರಿಸಿ ಸರ್ಕಾರಿ ಹಣವನ್ನ ದುರುಪಯೋಗ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ‌ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಪಿಎಸ್ ಭೂಸರೆಡ್ಡಿ ಅವರ ನಿವಾಸವನ್ನೂ ಸರ್ಚ್ ಮಾಡಿರೋ ಬಗ್ಗೆ ಮಾಹಿತಿ ಇದೆ. 

ಗದಗ(ಫೆ.22):  ಉತ್ತರ ಕರ್ನಾಟಕ ಸಂಜೀವಿನಿ ಅಂತಾ ಕರೆಯಲ್ಪಡುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ನ ಮಾಜಿ ನಿರ್ದೇಶಕ ಪಿಎಸ್ ಭೂಸರೆಡ್ಡಿ ವಿರುದ್ಧ ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. 
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಹಾಲಿ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ದೂರು ದಾಖಲಿಸಿದ್ದಾರೆ. ದಿನಾಂಕ 1/5/2015 ರಿಂದ 10/8/2020 ರ ವರೆಗೆ ಜಿಮ್ಸ್ ನಿರ್ದೇಶಕರಾಗಿದ್ದ ಪಿಎಸ್ ಭೂಸರೆಡ್ಡಿ ಅವರು, ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನ ತಿದ್ದಿ, ನಕಲು ಮಾಡಿದ್ದಾರೆ ಅಂತಾ ಆರೋಪಿಸಲಾಗಿದೆ. 

ಸರ್ಕಾರಿ ದಾಖಲೆಗಳನ್ನ ಕಳ್ಳತನ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಮೂಲ ದಾಖಲೆಯಲ್ಲಿ ಸೇರಿಸಿ ಸರ್ಕಾರಿ ಹಣವನ್ನ ದುರುಪಯೋಗ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ‌ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಪಿಎಸ್ ಭೂಸರೆಡ್ಡಿ ಅವರ ನಿವಾಸವನ್ನೂ ಸರ್ಚ್ ಮಾಡಿರೋ ಬಗ್ಗೆ ಮಾಹಿತಿ ಇದೆ. 

ಕಮೀಷನ್‌ ಕೇಳುವ, ಕೊಲೆ ಮಾಡಿ ಎನ್ನುವ ಸರ್ಕಾರ: ಸುರ್ಜೇವಾಲಾ ವಾಗ್ದಾಳಿ

ಗವರ್ನಿಂಗ್ ಕೌನ್ಸಿಲ್ ಬಾಡಿ ಮೀಟಿಂಗ್ ಪ್ರೊಸಿಡಿಂಗ್ಸ್, ಫೈನಾನ್ಸ್ ಕಮಿಟಿ ಪ್ರೊಸಿಡಿಗ್ಸ್ ದಾಖಲೆ ಸೇರುದಂತೆ ಹಣ ಕಾಸು, ನೇಮಕಾತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನ ಅಧಿಕಾರಾವಧಿಯ ನಂತರ ಪಿಎಸ್ ಭೂಸರೆಡ್ಡಿ ಹಸ್ತಾಂತರಿಸಿರಲಿಲ್ಲ. ಕಳೆದ ವರ್ಷ ಅಧಿಕಾರ ವಹಿಸಿಕೊಂಡಿದ್ದ ಡಾ. ಬಸವರಾಜ್ ಬೊಮ್ಮನಹಳ್ಳಿ, ದಾಖಲೆ ಹಸ್ತಾಂತರಿಸುವಂತೆ ಪತ್ರ ಕಳುಹಿಸಿದ್ರು.. ಮೆಮೊ ಕೂಡ ನೀಡಲಾಗಿತ್ತು.. ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಮಾರ್ಗದರ್ಶನದಂತೆ, ದೂರು ದಾಖಲಾಗಿದೆ. 

ತನಖೆ ನಡೆಸ್ತಿರೋ ಪೊಲೀಸರು ಹೆಚ್ಚಿನ ಮಾಹಿತಿ ಬಿಟ್ಟು ಕೊಡ್ತಿಲ್ಲ.. ಅವ್ಯವಹಾರ ನಡೆದಿದ್ರೆ, ಎಷ್ಟು ನಡೆದಿದೆ. ಕಡತ ಕಣ್ಮರೆಯಾಗೋದಕ್ಕೆ ಕಾರಣ ಏನು ಅನ್ನೋದನ್ನ ಪೊಲೀಸರು ಹಾಗೂ ಜಿಮ್ಸ್ ಅಧಿಕಾರಿಗಳು ಜನರಿಗೆ ಸ್ಪಷ್ಟನೆ ನೀಡ್ಬೇಕಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?